Welcome to Hai Sandur   Click to listen highlighted text! Welcome to Hai Sandur
Thursday, January 23, 2025
HomeSandurವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷರಾಗಿ ವದ್ದಟ್ಟಿ ಅಂಬರೀಶ್ ಆಯ್ಕೆ

ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷರಾಗಿ ವದ್ದಟ್ಟಿ ಅಂಬರೀಶ್ ಆಯ್ಕೆ

ಸಂಡೂರು: ಸಂಡೂರು ಪಟ್ಟಣದ ವಾಲ್ಮೀಕಿ ಭವನದಲ್ಲಿ ನಡೆದ ವಿಶೇಷ ಸಭೆಯಲ್ಲಿ ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಮಾಜದ ಹಿರಿಯ ಮುಖಂಡರು ಹಾಗೂ ತಾಲೂಕಿನ ವಿವಿಧ ಹಳ್ಳಿಗಳಿಂದ ಆಗಮಿಸಿದ ಸಮಾಜದ ಬಂಧುಗಳ ಸಮ್ಮುಖದಲ್ಲಿ ಈ ಪ್ರಕ್ರಿಯೆ ನೆರವೇರಿತು.

ಅಧ್ಯಕ್ಷ ಸ್ಥಾನಕ್ಕಾಗಿ ನಾಲ್ಕು ಜನ ಆಕಾಂಕ್ಷಿಗಳು ತಮ್ಮ ಹೆಸರುಗಳನ್ನು ನಾಮನಿರ್ದೇಶನ ಮಾಡಿದ್ದರು:

  1. ವದ್ದಟ್ಟಿ ಅಂಬರೀಶ್
  2. ಜೆಬಿಟಿ. ಬಸವರಾಜ್
  3. ಟಿ.ಎನ್. ನಾಗರಾಜ್
  4. ಚೋರನೂರು ವೆಂಕಟೇಶ್

ಅಧ್ಯಕ್ಷ ಸ್ಥಾನಕ್ಕೆ ಪ್ರಕ್ರಿಯೆಯು ಪ್ರಜಾಪ್ರಭುತ್ವ ರೀತಿಯಲ್ಲಿ ನಡೆದಿದ್ದು, ಪ್ರತಿಯೊಬ್ಬ ಆಕಾಂಕ್ಷಿ ವಾಲ್ಮೀಕಿ ಸಮಾಜದ ಏಳಿಗೆಗೆ ಶ್ರಮಿಸುತ್ತೇವೆ ಎಂಬ ನಿರ್ಧಾರವನ್ನು ಪೂರಕವಾಗಿ ಹೇಳಿದರು.

ಚರ್ಚೆ ಮತ್ತು ಅಭಿಪ್ರಾಯ ಸಂಗ್ರಹಣೆ ನಂತರ, ಸಮಾಜದ ಹಿರಿಯ ಮುಖಂಡರುಗಳ ಶಿಫಾರಸ್ಸಿನ ಮೇರೆಗೆ ವದ್ದಟ್ಟಿ ಅಂಬರೀಶ್ ಅವರನ್ನು ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಈ ಆಯ್ಕೆಯ ಅವಧಿ ಮುಂದಿನ ಎರಡು ವರ್ಷಗಳಿಗೆ ಮುಂದುವರಿಯಲಿದೆ.

ಈ ಸಂಧರ್ಭದಲ್ಲಿ ಹಿರಿಯ ಮುಖಂಡರಾದ ವಾಸಣ್ಣ, ಮಾಜಿ ಅಧ್ಯಕ್ಷ ಕೃಷ್ಣಪ್ಪ, ವಸಂತ ಕುಮಾರ್, ಅಡಿವಪ್ಪ, ರಘುನಾಥ್ ರಾಮಘಡ, ಶಂಕರ್, ನಾಗರಾಜ್, ಸಿ ಎಂ, ಶಿಗ್ಗಾವಿ, ತಿಪ್ಪಣ್ಣ, ಅಂಜಿನಪ್ಪ, ಮತ್ತು ಪರಶುರಾಮ್ ಸೇರಿದಂತೆ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.

ಅಧ್ಯಕ್ಷರಾಗಿ ಆಯ್ಕೆಯಾದ ವದ್ದಟ್ಟಿ ಅಂಬರೀಶ್, “ಸಮಾಜದ ಪ್ರಗತಿ, ಶ್ರೇಯಸ್ಸು ಮತ್ತು ಸಕಾಲಿಕ ಅಭಿವೃದ್ಧಿಗಾಗಿ ನಾನು ನನ್ನ ಸಂಪೂರ್ಣ ಶ್ರಮವನ್ನೆಲ್ಲಾ ಬಳಸುತ್ತೇನೆ” ಎಂದು ಭರವಸೆ ನೀಡಿದರು.

ವಾಲ್ಮೀಕಿ ಭವನದಲ್ಲಿ ನಡೆದ ಈ ಸಭೆ ಪ್ರಾಮಾಣಿಕತೆ, ಸಹಕಾರ ಮತ್ತು ಏಕತೆಯ ಮೂಲಕ ಪ್ರಜಾಪ್ರಭುತ್ವದ ಮಾದರಿಯಾಗಿದ್ದು, ಎಲ್ಲಾ ಸದಸ್ಯರು ಸಂಭ್ರಮಾಚರಣೆ ಮೂಲಕ ಹೊಸ ಅಧ್ಯಕ್ಷರಿಗೆ ಶುಭ ಕೋರಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news
Click to listen highlighted text!