Welcome to Hai Sandur   Click to listen highlighted text! Welcome to Hai Sandur
Thursday, January 23, 2025
HomeSandurಸಿದ್ಧರಾಮೇಶ್ವರರ ಶ್ರೇಷ್ಠತನ: ಶರಣ ಸಾಹಿತ್ಯದಿಂದ ಸಮಾಜ ಸೇವೆ ಅನನ್ಯ

ಸಿದ್ಧರಾಮೇಶ್ವರರ ಶ್ರೇಷ್ಠತನ: ಶರಣ ಸಾಹಿತ್ಯದಿಂದ ಸಮಾಜ ಸೇವೆ ಅನನ್ಯ

ಬಸವಣ್ಣ, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯನವರ ಸಮಾನ ಮನಸ್ಕರು ಶರಣಸಿದ್ಧರಾಮೇಶ್ವರರರು, ಶರಣ ಸಿದ್ಧರಾಮೇಶ್ವರರ ಚರಿತ್ರ್ಯೆಯನ್ನು ಮೂರು ಭಾಗಗಳಾಗಿ ವಿಂಗಡಿಸಬಹುದಾಗಿದೆ. ಸುಗಲವ್ವ ತಾಯಿಗೆ ಮಕ್ಕಳಿರದಿದ್ದಾಗ ರೇವಣಸಿದ್ಧರ ಕೃಪಾಕಾಟಾಕ್ಷದಿಂದ ಗುರುವಿನ ಆಶೀರ್ವಾದದಿಂದ ದೂಳಿಮಹಾಂಕಾಳ ರವರು ಜನಿಸಿದರು.

ರೇವಣ ಸಿದ್ಧರ ಆದೇಶದಂತೆ ಈ ಮಗುವಿಗೆ ಸಿದ್ಧರಾಮ ಎಂದು ನಾಮಕರಣ ಮಾಡಲು ಗುರುಗಳು ತಿಳಿಸಿದರೆ, ಮಗ ಹುಟ್ಟಿದ ಸಂಭ್ರಮದಲ್ಲಿ ಎಲ್ಲವನ್ನು ಮರೆತ ತಂದೆ ತಾಯಿಗಳು ಮೂಖ ಮಗ ಜನಿಸಿದ್ದರಿಂದ ತಂದೆ ತಾಯಿಗಳಿಗೆ ನೋವುಂಟಾಗಿ ಇವನನ್ನು ದನಕಾಯಲು ಕಳುಯಿಸಿದರು. ನಂತರ ದೂಳಿಮಹಾಂಕಾಳ ಎನ್ನುವವನು ಅಡವಿಯಲ್ಲಿ ಲಿಂಗವನ್ನು ಸ್ಥಾಪಿಸಿ, ಲಿಂಗ ಪೂಜೆ ಮಾಡುತ್ತಾ ನಿರಾಹರಿಯಾಗಿದ್ದ ಕಂಡು ಶ್ರೀಶೈಲ ಮಲ್ಲಿಕಾರ್ಜುನನೇ ಪರವೇಶದಲ್ಲಿ ಬಂದು ಅವನನ್ನು ಪರೀಕ್ಷೆಗೆ ಒಳಪಡಿಸಿ, ಅವನಿಗೆ ಆಹಾರ ತರಲು ಹೇಳಿ ತಾನು ಮಾಯವಾದ ಮನೆಯಿಂದ ಗಾಬರಿಯಿಂದ ಓಡಿಬಂದ ದೂಳಿಮಹಾಂಕಾಳಿ ಶರಣರು ಇಲ್ಲದದನ್ನು ಕಂಡು ತಾನು ಸಹಿತ ಮಲ್ಲಿಕಾರ್ಜುನನ ದರ್ಶನಕ್ಕೆ ಹೊರಟುಬಿಟ್ಟ ಬೆಟ್ಟ ಗುಡ್ಡಗಳಲ್ಲಿ ಸಂಚರಿಸಿ, ಅವನು ಬೆಟ್ಟದ ಕೆಳಗೆ ಬಿಳಲು ಹೋದಾಗ ಸಾಕ್ಷತ್ ಶಿವನೇ ಪ್ರತ್ಯಕ್ಷನಾಗಿ ಉಪಚರಿಸಿ, ನೀ ಇರುವಲ್ಲಿಗೆ ನಾನು ಬರುತ್ತೇನೆಂದು ಭರವಸೆ ನೀಡಿ ಅವನನ್ನು ವಾಪಸ್ ಕಳಿಯಿಸುತ್ತಾರೆ
ಆ ಘಟನೆ ನಡೆದ ನಂತರ ಆ ಗುಡ್ಡದಲ್ಲಿ ಶಿವಲಿಂಗವನ್ನು ಸ್ಥಾಪಿಸಿ, ನಿತ್ಯಲೂ ಪೂಜೆ ಮಾಡುತ್ತಿರುವಾಗ ರಾಣಿಯೊಬ್ಬರ ಕನಸಿನಲ್ಲಿ ಹೋಗಿ ನೀನು ಅವನಿಗೆ ನಿನ್ನಲ್ಲಿರುವ ಜಾಗವನ್ನು ನೀಡು ಅವನು ದೇವಾಲಯವನ್ನು ಕಟ್ಟಿಸುತ್ತಾನೆ ಎಂದಾಗ ರಾಣಿ ಶಿವನ ಮಾತಿಗೆ ಕಟ್ಟುಬಿದ್ದು ಜಾಗವನ್ನು ಕೊಟ್ಟು ರಕ್ಷಣೆ ಮಾಡುತ್ತಾಳೆಂದು ಶರಣ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷ ಕೆ.ಬಿ. ಸಿದ್ಧಲಿಂಗಪ್ಪನವರು ತಿಳಿಸಿದರು.

ಅವರು ಪಟ್ಟಣದ ಎಲ್.ಬಿ. ಕಾಲೋನಿಯಲ್ಲಿರುವ ಗುರುಭವನದ ಹತ್ತಿರವಿರುವ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರಡು ದತ್ತಿ ಅಂದರೆ ಚಿತ್ರಿಕಿ ತೋಟಪ್ಪ ಕರಿಬಸಮ್ಮ ದತ್ತಿ, ದತ್ತಿ ದಾನಿ ಚಿತ್ರಿಕಿ ಮೃತ್ಯುಂಜಯಪ್ಪ, ಸಿದ್ಧರಾಮೇಶ್ವರ ಕುರಿತು, ಎಲ್. ಯರ್ರಿಸ್ವಾಮಿ ಮತ್ತು ಅನುರಾಧ ದತ್ತಿ ದಾನಿಗಳು ದೊಡ್ಡಪ್ಪ ಮತ್ತು ಗಂಗಮ್ಮ ಅವರ ಹೆಸರಿನಲ್ಲಿ ಎಡೆಯೂರು ಸಿದ್ಧಲಿಂಗೇಶ್ವರರು ಸಮಾಜಕ್ಕೆ ಕೊಟ್ಟ ಕೊಡುಗೆ ಕುರಿತು ಮಾತನಾಡಿದರು. ಅವರು ಮುಂದುವರೆದು ಸಿದ್ಧರಾಮೇಶ್ವರರು ಕಪಿಲ ಸಿದ್ಧ ಮಲ್ಲಿಕಾರ್ಜುನ ಎನ್ನುವ ನಾಮಾಂಕಿತದಿಂದ 1671 ವಚನಗಳನ್ನು ಬರೆದರು ಇವರು ನಾಲ್ಕು ಕೃತಿಗಳನ್ನು ಬರೆದರು. ಸೊಲ್ಲಾಪುರವನ್ನು ಭೂ ಕೈಲಾಸ ಮಾಡಿದರು ಸಿದ್ಧರಾಮೇಶ್ವರರು ಎಂದು ತಿಳಿಸಿದರು.

14ನೇ ದತ್ತಿ ಎಡೆಯೂರು ಸಿದ್ಧಲಿಂಗೇಶ್ವರರ ಬಗ್ಗೆ ಮಾತನಾಡಿ ನಿರಂಜನ ಪರಂಪರೆಯಲ್ಲಿ 19ನೇ ಯತಿಗಳು 15ನೇ ಶತಮಾನದಲ್ಲಿ ವಚನಗಳನ್ನು ಬೆಳೆಸಿದ ಕೀರ್ತಿ ವಿಜಯನಗರ ಸಾಮ್ರಾಜ್ಯಕ್ಕೆ ಸಲ್ಲುತ್ತದೆ. ಎಡೆಯೂರು ಸಿದ್ಧಲಿಂಗೇಶ್ವರರಿಗೆ ತೋಂಟದ ಅಲ್ಲಮ ಪ್ರಭು ಎಂದು ಈಗಲು ಕರೆಯುತ್ತಾರೆ ನಮ್ಮ ಮಾತುಗಳು ಅಲೋಚನ ಪರವಾಗಿರಬೇಕು ಸಿದ್ಧಲಿಂಗೇಶ್ವರರು 701 ವಚನಗಳನ್ನು ಮಹಾಲಿಂಗ ಸಿದ್ದೇಶ್ವರ ಪ್ರಭುವೇ ಎನ್ನುವ ನಾಮಾಂಕಿತದಿಂದ ಬರೆದರು. ಸಿದ್ಧಲಿಂಗೇಶ್ವರರು ಭಾರತದೇಶದಾದ್ಯಂತ ಸಂಚಾರಿಸಿ, ಬಸವ ತತ್ವ ಪ್ರಚಾರ ಮಾಡಿದರು. ಬನ್ನಂಜೆ ದೇವ, ಎಳೆಮಲೆ ಗುರುಶಾಂತದೇವ, ಸಿದ್ಧವೀರಣ್ಣ ಒಡೆಯ, ಬೋಳಬಸವೇಶ, ಪರ್ವತ ಈಗೆ ಇವರನ್ನೊಳಗೊಂಡು 25 ಜನರು ಸಿದ್ಧಲಿಂಗೇಶ್ವರರ ವಚನಗಳನ್ನು ಸಂಪಾದನೆ ಮಾಡಿದರು ಎಂದು ತಿಳಿಸಿದರು.

ದತ್ತಿ ದಾನಿ ಎಲ್. ಮಂಜುನಾಥ ಮಾತನಾಡಿ ವಿದ್ಯಾರ್ಥಿಗಳಲ್ಲಿ ಛಲ ಮುಖ್ಯ ವಿದ್ಯಾರ್ಥಿಗಳಿಗೆ ಸುಖ – ದುಖಃಗಳು ಗೊತ್ತಾಗದೆ ಇರುವುದು ಪೂಜೆ, ಸದಾಕಾಲ ಓದುವ ಅವ್ಯಾಸವನ್ನು ಬೆಳೆಸಿಕೊಳ್ಳಬೇಕಾಗಿದೆ ಸಾಧನೆ ಎಂಬುದು ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸೊತ್ತಲ್ಲ ಎಂದು ತಿಳಿಸಿದರು. ಕಾ.ಸ.ಪ. ಅಧ್ಯಕ್ಷ ಬಿ. ನಾಗನಗೌಡರು ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಜಿ.ಬಿ. ಮಂಜುನಾಥ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ರಿಹಾನ ಇವರು ಪ್ರಾರ್ಥಿಸಿದರು. ಕಲಿಕೇರಿ ವೀರಮ್ಮನವರು ಸ್ವಾಗತಿಸಿದರು. ವಿವೇಕಾನಂದ ಪ್ರೌಢಶಾಲೆಯ ಮುಖ್ಯಗುರು ಪರುಷೋತ್ತಮರವರು ನಿರೂಪಣೆ ಸ್ವಾಗತ, ವಂದನಾರ್ಪಣೆ ನೆರವೇರಿಸಿದರು. ಸೋವೆನಹಳ್ಳಿ ಶಿವಮೂರ್ತಿ ಸ್ವಾಮಿ ಕಾರ್ಯಕ್ರಮವನ್ನು ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news
Click to listen highlighted text!