Welcome to Hai Sandur   Click to listen highlighted text! Welcome to Hai Sandur
Monday, May 12, 2025
HomeLatest Newsಉಜ್ಜಯಿನಿ ಮಾರ್ಗವಾಗಿ ಕೊಟ್ಟೂರು-ಚಿತ್ರದುರ್ಗ ರೈಲು ಯೋಜನೆಗೆ ಶೀಘ್ರದಲ್ಲೇ ಸರ್ವೇ ಪ್ರಾರಂಭ: ಸಚಿವ ಸೋಮಣ್ಣ ಘೋಷಣೆ

ಉಜ್ಜಯಿನಿ ಮಾರ್ಗವಾಗಿ ಕೊಟ್ಟೂರು-ಚಿತ್ರದುರ್ಗ ರೈಲು ಯೋಜನೆಗೆ ಶೀಘ್ರದಲ್ಲೇ ಸರ್ವೇ ಪ್ರಾರಂಭ: ಸಚಿವ ಸೋಮಣ್ಣ ಘೋಷಣೆ

ವರದಿ : ಶಿವರಾಜ್ ಕನ್ನಡಿಗ

ಕೊಟ್ಟೂರು: ಉಜ್ಜಯಿನಿ ಜಗದ್ಗುರುಗಳ ಸೂಚನೆಯಂತೆ ಉಜ್ಜಯಿನಿ ಮಾರ್ಗವಾಗಿ ಕೊಟ್ಟೂರು ಚಿತ್ರದುರ್ಗ ಹೊಸ ರೈಲ್ವೆ ಸಂಚಾರಕ್ಕಾಗಿ ಶೀಘ್ರದಲ್ಲಿ ಮಾರ್ಗದ ಸರ್ವೇ ಕಾರ್ಯಕ್ಕೆ ಆದೇಶ ನೀಡುತ್ತೇನೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ತಾಲೂಕಿನ ಉಜ್ಜಯಿನಿಯಲ್ಲಿ ನಡೆದ ಶಿಖರ ತೈಲಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಅವರು ಶನಿವಾರ ಮಾತನಾಡಿದರು.

ಈ ಭಾಗದ ಜನತೆಯ ಅನುಕೂಲಕ್ಕಾಗಿ ಮತ್ತು ಕೊಟ್ಟೂರು ಉಜ್ಜಯಿನಿ ಧಾರ್ಮಿಕ ಕ್ಷೇತ್ರಗಳಿಂದ ಚಿತ್ರದುರ್ಗಕ್ಕೆ ತೆರಳುವ ಪ್ರಯಾಣಿಕರಿಗೆ ಬಹು ಅನುಕೂಲವಾಗುವ ದೃಷ್ಟಿಯಿಂದ ಜಗದ್ಗುರುಗಳು ಹೇಳಿದ್ದು, ಇದನ್ನು ತಪ್ಪದೇ ಜಾರಿ ಮಾಡುತ್ತೇನೆ. ಕೊಟ್ಟೂರು ಮಾರ್ಗವಾಗಿಯೂ ಬೇಡಿಕೆಯಂತೆ ರೈಲ್ವೆ ಸಂಚಾರದ ಕುರಿತು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇನೆ ಎಂದರು.

೧೨ಲಕ್ಷಕ್ಕೂ ಹೆಚ್ಚು ಕನ್ನಡ ಭಾಷೆಯ ನೌಕರರು ರೈಲ್ವೆ ಇಲಾಖೆಯಲ್ಲಿದ್ದಾರೆ. ಇವರಿಗೆ ಅನುಕೂಲವಾಗುವ ದೃಷ್ಟಿಯಿಂದಲೇ ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲಿ ಬರೆಯಲು ಮಾಡಿದ ಮನವಿಗೆ ಪ್ರಧಾನಿಗಳು ಒಪ್ಪಿಗೆ ನೀಡಿದ್ದಾರೆ. ಇದರೊಂದಿಗೆ ೧೦ ರಾಜ್ಯಗಳಲ್ಲಿ ಆಯಾ ರಾಜ್ಯದ ಭಾಷೆಗೂ ಅವಕಾಶ ನೀಡಿದೆ ಎಂದರು.
ನಮ ರಾಜ್ಯದಲ್ಲಿ ರೈಲ್ವೆಗೆ ಸಂಬAಧಿಸಿದAತೆ ಅಭಿವೃದ್ಧಿ ಕೈಗೊಳ್ಳಲು ರೈಲ್ವೆ ಖಾತೆ ಸಚಿವರಾದ ವೈಷ್ಣವಿ ಅಶ್ವಿನ್ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಕಳೆದ ೩೦ವರ್ಷಗಳಿಂದ ಸ್ಥಗಿತವಾಗಿದ್ದ ೪೫ ಕೋಟಿ ರೂ.ಗಳ ೧೧ ರೈಲ್ವೆ ಯೋಜನೆಗಳಿಗೆ ಚಾಲನೆ ಸಿಕ್ಕಿದೆ. ಅಲ್ಲದೇ ಸ್ಥಗಿತವಾಗಿದ್ದ ೪೫ ರೈಲ್ವೆ ಮಾರ್ಗಗಳಿಗೆ ಚಾಲನೆ ನೀಡಿದೆ. ತಳಕವಾಡಿ, ಕುಷ್ಟಗಿ, ಹುಬ್ಬಳ್ಳಿ ಮಾರ್ಗದ ರೈಲ್ವೆಗೆ ಏ.೧೪ರಂದು ಹಸಿರು ನಿಶಾನೆ ತೋರಲಾಗುತ್ತಿದೆ. ಅಂಕೋಲಾ ಬೆಂಗಳೂರು ಮಾರ್ಗಕ್ಕೆ ಸರ್ವೆ ನಡೆಯುತ್ತಿದೆ. ತುಮಕೂರು ರಾಯದುರ್ಗ, ತುಮಕೂರು ದಾವಣಗೇರೆ ಮಾರ್ಗಕ್ಕೆ ಭೂಮಿ ಪಡೆಯುವ ಕೆಲಸ ಮುಗಿದಿದ್ದು ಕಾಮಗಾರಿ ಆರಂಭಿಸಲಾಗುವುದು. ರೈಲ್ವೆ ಯೋಜನೆಗಳಿಗೆ ರಾಜ್ಯ ಸರಕಾರ ನೀಡಬೇಕಾದ ಅನುದಾನದ ಪಾಲು ಸಿಗುತ್ತಿಲ್ಲ  ಹೀಗಾಗಿ ರೈಲ್ವೆ ಮೇಲ್ಸುತುವೆಗೆ ಕೇಂದ್ರವೇ ಶೇ.೧೦೦ರಷ್ಟು ವೆಚ್ಚ ಭರಿಸುತ್ತಿದೆ. ರಾಜ್ಯದ ೪೬ ರೈಲ್ವೆ ನಿಲ್ದಾಣಗಳನ್ನು ೨ ಸಾವಿರ ಕೋಟಿ ರೂ.ಗಳಲ್ಲಿ ಮೇಲ್ದರ್ಜೆಗೇರಿಸಿದೆ ಎಂದು ಹೇಳಿದರು.

ಉಜ್ಜಯಿನಿ ಜಾತ್ರೆಗೆ ತಾವು ಚಿಕ್ಕವರಿದ್ದಾಗ ತಾಯಿಯವರು ಕರೆದುಕೊಂಡು ಬರುತ್ತಿದ್ದರು ಎಂದು ಮೆಲಕು ಹಾಕಿದ ಸಚಿವರು, ಉಜ್ಜಯಿನಿ ಶಿಖರ ತೈಲಾಭೀಷೇಕ ರಾಷ್ಟçದಲ್ಲಿಯೇ, ಧರ್ಮ ಪರಂಪರೆಯಲ್ಲಿಯೇ ವಿಶೇಷವಾಗಿದ್ದು ಅದನ್ನು ನೋಡುವ ಭಾಗ್ಯ ನನ್ನದಾಯಿತು ಎಂದರು.
ಮಾಜಿ ಸಚಿವ ಬಿ.ಶ್ರೀರಾಮುಲು, ಕೂಡ್ಲಿಗಿ ಮಂಡಲ ಬಿಜೆಪಿ ಅಧ್ಯಕ್ಷ ನಾಗರಾಜ ಕಾಮಶೆಟ್ಟಿ ಸೇರಿ ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news
Click to listen highlighted text!