ವರದಿ : ಶಿವರಾಜ್ ಕನ್ನಡಿಗ
ಕೊಟ್ಟೂರು : ತಾಲೂಕಿನ ಉಜ್ಜಯಿನಿ ಶ್ರೀ ಮರುಳಸಿದ್ದೇಶ್ವರ ರಥೋತ್ಸವದ ಮೂರನೇ ದಿನದ ಕಾರ್ಯಕ್ರಮ ಬಾನುವಾರದಂದು ಬೆಳಗಿನ ಜಾವ ೨೦೦ಕ್ಕು ಹೆಚ್ಚು ಜಂಗಮ ವಟುಗಳಿಗೆ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಗಳು ಶಿವದೀಕ್ಷೆ ಮತ್ತು ಗೌಪ್ಯತೆಯ ಶಿವಮಂತ್ರವನ್ನು ಬೋಧಿಸುವ ಮೂಲಕ ಜರುಗಿತು.
ನಂತರ ಲಿಂಗ ದೀಕ್ಷೆ ಪಡೆದ ಜಂಗವಟುಗಳನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರು ಶಿವದೀಕ್ಷೆ ಪಡೆದ ನಂತರ ಇದರ ಮಹತ್ವ ಮತ್ತು ಪಾವಿತ್ರöತೆಯನ್ನು ದೀಕ್ಷೆ ಪಡೆದವರು ಒಂಚೂರು ತಪ್ಪದೇ ಪರಿಪಾಲಿಸಬೇಕು ಎಂದು ಹೇಳಿದರಲ್ಲದೇ ಸಮಾಜದಲ್ಲಿ ಶೈವ ಪರಂಪರೆ ತತ್ವ ಸಿದ್ಧಾಂತವನ್ನು ಪ್ರಚಾರ ಮಾಡಿ ಜನರಿಗೆ ಸನ್ಮಾರ್ಗದ ದಾರಿ ತೋರುವ ಕಾಯಕ ಮಾಡಬೇಕೆಂದು ಕರೆ ನೀಡಿದರು.
ಜೀವನದಲ್ಲಿ ಹುಟ್ಟು ಒಂದು ಹಂತವಾದರೆ ಜಂಗಮ ದೀಕ್ಷೆ ಎಂಬುದು ಮತ್ತೊಂದು ಹಂತ ದೀಕ್ಷೆ ಪಡೆದವರು ಬಾಳಲ್ಲಿ ಶಿವದೀಕ್ಷೆ ಧಾರ್ಮಿಕ ಬದಲಾವಣೆಯನ್ನು ತರುತ್ತದೆ ಆದ್ದರಿಂದ ಎಲ್ಲರೂ ವೀರಶೈವ ತತ್ವ ಸಿದ್ಧಾಂತ, ಮಂತ್ರೋಚ್ಚಾರಣೆ, ಲಿಂಗ ಪೂಜೆಯನ್ನು ಮರೆಯಬಾರದು ಎಂದು ಅವರು ಹೇಳಿದರು.
ಉಜ್ಜಯಿನಿ ಸದ್ಧರ್ಮ ಪೀಠದ ಈ ಹಿಂದಿನ ಜಗದ್ಗುರುಗಳು ರಾಜರಿಗೆ, ಪಾಳೇಗಾರರಿಗೆ ಶಿವದೀಕ್ಷೆ ಕೊಟ್ಟ ಪರಂಪರೆ ಇದೆ. ಇಂತಹ ಸುಕ್ಷೇತ್ರದಲ್ಲಿ ಶಿವ ದೀಕ್ಷೆ ಪಡೆದವರ ಜೀವನದÀ ಪುಣ್ಯ ಕ್ಷಣ ಎಂದರು.
ಶಿವದೀಕ್ಷೆ ಪಡೆಯಲೆಂದು ರಾಜ್ಯದ ನಾನಾ ಕಡೆಗಳಿಂದ ಉಜ್ಜಯಿನಿಗೆ ಜಂಗಮ ವಟುಗಳು ಆಗಮಿಸಿದ್ದರು. ಶಿವದೀಕ್ಷೆ ಸಮಾರಂಭ ಶನಿವಾರ ಮಧ್ಯರಾತ್ರಿ ಆರಂಭಗೊAಡು ಬಾನುವಾರ ಬೆಳಿಗ್ಗೆ ೯ ಗಂಟೆಯವರೆಗೆ ನಡೆಯಿತು. ಕೂಡ್ಲಿಗಿ ಹಿರೇಮಠದ ಪ್ರಶಾಂತ ಶಿವಾಚಾರ್ಯ ಮಹಾಸ್ವಾಮೀಜಿ ಮತ್ತಿತರ ಪುರೋಹಿತ ವರ್ಗದವರು ಶಿವದೀಕ್ಷೆ ಕೈಂಕರ್ಯದ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.