ವರದಿ : ಶಿವರಾಜ್ ಕನ್ನಡಿಗ
ಉಜ್ಜಿನಿಯಲ್ಲಿ ಇತ್ತೀಚೆಗೆ ನಡೆದ ಶ್ರೀ ಮರಳು ಸಿದ್ದೇಶ್ವರ ಸ್ವಾಮಿಯ ರಥೋತ್ಸವ ಹಾಗೂ ತೈಲಾಭಿಷೇಕ ಮಹೋತ್ಸವದ ಸಂದರ್ಭದಲ್ಲಿ ಸ್ಥಳದಲ್ಲಿ ಬಂದೋಬಸ್ತ್ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಹಾಗೂ ಗ್ರಾಮ ಪಂಚಾಯಿತಿಯು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಿದರು.
ಈ ಕಾರ್ಯಕ್ರಮದ ವೇಳೆ, ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಿದ್ದಕ್ಕಾಗಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ಪರಸಪ್ಪ, ಶ್ರೀ ಕುರುಗೋಡು ಸಿದ್ದೇಶ್, ಶ್ರೀ ಚೌಡಪ್ಪ ಮತ್ತು ಶ್ರೀ ರೇವಣ್ಣ ಅವರು ಪ್ರಮುಖ ಪಾತ್ರವಹಿಸಿದ್ದರು.
ರಥವು ಸರಾಗವಾಗಿ ಸಾಗಲು ಸಹಕರಿಸಿದ ಶ್ರೀ ರವೀಂದ್ರ ಆಚಾರಿ ಹಾಗೂ ಶ್ರೀ ಸಿದ್ದಲಿಂಗ ಆಚಾರಿ ಅವರಿಗೆ ವಿಶೇಷ ಕೃತಜ್ಞತೆ ಸಲ್ಲಿಸಲಾಯಿತು. ತೈಲಾಭಿಷೇಕದ ಮಹತ್ವಪೂರ್ಣ ಕ್ಷಣಗಳನ್ನು ಸಾರ್ವಜನಿಕರಿಗೆ ನೇರ ಪ್ರಸಾರದ ಮೂಲಕ LED ಸ್ಕ್ರೀನ್ಗಳ ಮೂಲಕ ಪ್ರದರ್ಶಿಸಿದ ಫೋಟೋ ರವಿ (ಶ್ರೀ ರವಿ) ಅವರ ಸೇವೆಯು ಕೂಡ ಪ್ರಶಂಸಿಸಲ್ಪಟ್ಟಿತು.
ಇವರ ಎಲ್ಲಾ ಸೇವೆಗಳಿಗೆ ಮಾನ್ಯತೆ ನೀಡುವ ಸಲುವಾಗಿ, ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ವಿಶೇಷ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಠಾಣಾಧಿಕಾರಿಗಳಿಂದ ಅವರಿಗೆ ಸನ್ಮಾನಿಸಲಾಯಿತು.