Welcome to Hai Sandur   Click to listen highlighted text! Welcome to Hai Sandur
Monday, May 12, 2025
HomeKotturuಕೆ.ಎಸ್. ಈಶ್ವರ ಗೌಡ್ರುಗೆ ರಾಜ್ಯ ಮಟ್ಟದ ಉನ್ನತ ಪದವಿ ನೀಡಲು  ಬಿಜೆಪಿ ಮುಖಂಡರಿಂದ ಮನವಿ

ಕೆ.ಎಸ್. ಈಶ್ವರ ಗೌಡ್ರುಗೆ ರಾಜ್ಯ ಮಟ್ಟದ ಉನ್ನತ ಪದವಿ ನೀಡಲು  ಬಿಜೆಪಿ ಮುಖಂಡರಿಂದ ಮನವಿ

ವರದಿ: ರೇವಂತ್ ಜಂಬೂರ್

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ  ಬಿಜೆಪಿ ಪಕ್ಷದ  ಪಧಾದಿಕಾರಿಗಳು ಹಾಗು ಮುಖಂಡರು,ಹಡಗಲಿ ಪ್ರವಾಸ ಮಂದಿರದಲ್ಲಿ ಕೆ,ಎಸ್  ಈಶ್ವರ ಗೌಡ್ರು ರವರಿಗೆ  ರಾಜ್ಯ ಮಟ್ಟದಲ್ಲಿ  ಉನ್ನತ ಪದವಿ ನೀಡಬೇಕೆಂದು
ಬಿಜೆಪಿ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಸಂಜೀವ್ ರೆಡ್ಡಿಗೆ ಮನವಿ ಪತ್ರ ಸಲ್ಲಿಸಲಾಯಿತು,

ಈ ಸಂಧರ್ಭದಲ್ಲಿ ಯುವ ಮೋರ್ಚ  ಅದ್ಯಕ್ಷ  ಎಂ ಮಲ್ಲಿಕಾರ್ಜುನ್ ರವರು ಮಾತನಾಡಿ 
ಕೆ ಎಸ್ ಈಶ್ವರ ಗೌಡ್ರು  ನಮ್ಮೆಲ್ಲರ  ನೆಚ್ಚಿನ ನಾಯಕರಾಗಿ  ಸದಾ ಕಾರ್ಯಕರ್ತರಿಗೆ ಸ್ಪಂದಿಸುತ್ತ ಕೊಟ್ಟೂರು ಹಾಗೂ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಸುಮಾರು ದಿನಗಳಿಂದ   ಬಿಜೆಪಿ  ಸಂಘಟನೆಯಲ್ಲಿ  ತೊಡಗಿಸಿಕೊಂಡಿದ್ದು, ಇವರು ಬಿ ಜೆ ಪಿ ಹಾಲಿ ಕೊಟ್ಟೂರು  ಪಟ್ಟಣ ಪಂಚಾಯಿತಿ ಸದಸ್ಯರಾಗಿ  ಸದಾ ಪಕ್ಷಕ್ಕಾಗಿ  ದುಡಿಯುತ್ತಿರುವ ಇವರು ಹಿಂದಿನ ದಿನಗಳಲ್ಲಿ  ತಾಲೂಕು ಹೋರಾಟ, ರೈಲ್ವೆ ಹೋರಾಟ, ಕೆರೆಗೆ  ನೀರು ತುಂಬಿಸುವ ಜನಪರ ಹೋರಾಟಗಳಲ್ಲಿ  ಮುಂಚೂಣಿ  ನಾಯಕತ್ವವನ್ನು  ಹೊಂದಿರುತ್ತಾರೆ,

ಕೆ ಎಸ್ ಈಶ್ವರ ಗೌಡ್ರು ಇವರನ್ನು  ರಾಜ್ಯ ಸಮಿತಿಯಲ್ಲಿ  ಸೇರಿಸಿದರೆ   ಅವರಿಗೆ ಮತ್ತಷ್ಟು  ಬಲ ಕೊಡುವುದರಿಂದ  ಈ ಭಾಗದಲ್ಲಿ ದೊಡ್ಡ ಮಟ್ಟದಲ್ಲಿ  ಪಕ್ಷ ಸಂಘಟನೆಯಾಗುತ್ತದೆ ಎಂದು  ಹೇಳಿದರು , 

ರಾಜ್ಯ ಸಮಿತಿಯವರು   ಕೂಡಲೇ ಇವರನ್ನು ಸೇರಿಸಿಕೊಂಡು ಬಿಜೆಪಿ ಪಕ್ಷ ಬಲಪಡಿಸಿ ಕೊಳ್ಳಲು  ಕೆ ಎಸ್ ಈಶ್ವರ ಗೌಡ್ರುಗೆ ರಾಜ್ಯ ಮಟ್ಟದಲ್ಲಿ ಉನ್ನತ ಪದವಿ  ನೀಡಬೇಕೆಂದು  ಜಿಲ್ಲಾಧ್ಯಕ್ಷರು ರಾಜ್ಯ ಸಮಿತಿಯವರಿಗೆ  ನಮ್ಮ ಮನವಿ ಪತ್ರ ಸಲ್ಲಿಸಲು ನಮ್ಮ ಮನವಿ  ನೀಡಿ ಅಗ್ರಹಿಸುತ್ತೇವೆ ಎಂದು  ಹೇಳಿದರು ,

ಈ  ಸಂಧರ್ಭದಲ್ಲಿ ಜಿಲ್ಯಾಧಕ್ಷರು
ಸಂಜೀವ್ ರೆಡ್ಡಿ,ಮುಂಜಾನಾಥ್ ಯುವ ಘಟಕ ಅಧ್ಯಕ್ಷರು ಕೊಟ್ಟೂರು ಮಹಾಶಕ್ತಿ ಕೇಂದ್ರ
ವಿಶ್ವನಾಥ್, ಉಪಾಧ್ಯಕ್ಷರು ಕೊಟ್ಟೂರು ಮಹಾಶಕ್ತಿ ಕೇಂದ್ರ, ಮಂಜುನಾಥ್ ಭಜಂತ್ರಿ  ಹಗರಿಬೊಮ್ಮನಹಳ್ಳಿ ಮಂಡಲ ಕಾರ್ಯದರ್ಶಿ
ಚಂದ್ರು ಜಂಬೂರ್,ಪ್ರಧಾನ ಕಾರ್ಯದರ್ಶಿ ಕೊಟ್ಟೂರು ಮಹಾಶಕ್ತಿ ಕೇಂದ್ರ
ಅಶೋಕ್ ಉಪಾಧ್ಯಕ್ಷರು ರೈತ ಘಟಕ ಹಗರಿಬೊಮ್ಮನಹಳ್ಳಿ ಮಂಡಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news
Click to listen highlighted text!