Welcome to Hai Sandur   Click to listen highlighted text! Welcome to Hai Sandur
Monday, June 2, 2025
HomeKotturuಪುಟಾಣಿ ಮಕ್ಕಳಿಗೆ ಅಗ್ನಿಶಾಮಕದಳದ ಜ್ಞಾನ – ಯುರೋ ಕಿಡ್ಸ್ ಶಾಲೆಯ ವಿನೂತನ ಅಭಿಯಾನ

ಪುಟಾಣಿ ಮಕ್ಕಳಿಗೆ ಅಗ್ನಿಶಾಮಕದಳದ ಜ್ಞಾನ – ಯುರೋ ಕಿಡ್ಸ್ ಶಾಲೆಯ ವಿನೂತನ ಅಭಿಯಾನ

ವರದಿ : ಶಿವರಾಜ್ ಕನ್ನಡಿಗ

ಕೊಟ್ಟೂರು: ಪಟ್ಟಣದ ನ್ಯೂ ವಿದ್ಯಾಭಾರತಿಯ ಯುರೋ ಕಿಡ್ಸ್ ಪ್ರಿ ಸ್ಕೂಲ್ ವತಿಯಿಂದ ಮಕ್ಕಳಿಗೆ ಅಗ್ನಿಶಾಮಕದಳದ ಸಂಪೂರ್ಣ ಮಾಹಿತಿ ನೀಡುವ ವಿಶೇಷ ಕಾರ್ಯಕ್ರಮ ಆಯೋಜಿಸಲಾಯಿತು.

ಈ ವೇಳೆ ಮಕ್ಕಳು ಅಗ್ನಿಶಾಮಕದ ತಂಡದ ಕಾರ್ಯಪದ್ಧತಿ, ಉಪಕರಣಗಳ ಬಳಕೆ ಮತ್ತು ಅಗ್ನಿಶಾಮಕ ವಾಹನದ ಚಾಲನೆ ಬಗ್ಗೆ ನೇರವಾಗಿ ಕಂಡು ತಿಳಿದುಕೊಳ್ಳುವ ಅವಕಾಶ ಪಡೆದರು. ಪುಟಾಣಿ ಮಕ್ಕಳು ಉತ್ಸಾಹದಿಂದ, ಕುತೂಹಲದಿಂದ ಮತ್ತು ಶಿಸ್ತಿನಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಮೂಲಕ ಮಕ್ಕಳಲ್ಲಿ ಸಾಮಾಜಿಕ ಜವಾಬ್ದಾರಿ ಹಾಗೂ ಸುರಕ್ಷತೆಯ ಮಹತ್ವದ ಅರಿವು ಮೂಡಿಸಲು ಶಾಲೆ ಯತ್ನಿಸಿದೆ.

ಕಾರ್ಯಕ್ರಮದ ನಂತರ ಯುರೋ ಕಿಡ್ಸ್ ಶಾಲೆಯ ವತಿಯಿಂದ ಕೊಟ್ಟೂರಿನ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭ ಅಗ್ನಿಶಾಮಕ ಠಾಣೆಯ ಮುಖ್ಯ ಅಧಿಕಾರಿ ಬಸವರಾಜ್ ಹಾಗೂ ಸಹಾಯಕ ಸಿಬ್ಬಂದಿ ಉಪಸ್ಥಿತರಿದ್ದರು.

ಈ ರೀತಿಯ ಶೈಕ್ಷಣಿಕ ಹಾಗೂ ಪ್ರಾಯೋಗಿಕವಾಗಿ ಅನುಭವದ ಕಾರ್ಯಕ್ರಮಗಳು ಮಕ್ಕಳಲ್ಲಿ ಉತ್ತಮ ಅರಿವು ಮೂಡಿಸುತ್ತವೆ ಎಂದು ಶಾಲೆಯವರು ಅಭಿಪ್ರಾಯಪಟ್ಟರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news
Click to listen highlighted text!