ಎಐಸಿಸಿ ಮತ್ತು ಕೆಪಿಸಿಸಿ ನೇತೃತ್ವದಲ್ಲಿ ಈಗಾಗಲೇ ದೇಶಾದ್ಯಂತ ನಡೆಯುತ್ತಿರುವ ಬಿಜೆಪಿ ಪಕ್ಷ ಮತ್ತು ಕೇಂದ್ರ ಚುನಾವಣಾ ಆಯೋಗ ಚುನಾವಣೆಯಲ್ಲಿ ಮತಗಳ್ಳತನ ಮಾಡುತ್ತಿರುವ ಹಿನ್ನೆಲೆಯಲ್ಲಿ “ಓಟ್ ಜೋರ್ ಗದ್ದಿ ಚೋಡ್ “ ಅಭಿಯಾನದ ಸಲುವಾಗಿ ಯುವ ಕಾಂಗ್ರೇಸ್ (ಸಾಮಾಜಿಕ ಜಾಲತಾಣ ವಿಭಾಗ) ಬೃಹತ್ ಸಹಿ ಸಂಗ್ರಹ ಆಂದೋಲನದಲ್ಲಿ ಭಾಗವಹಿಸಿ ವಿಜಯನಗರ ಜಿಲ್ಲೆ ಮತ್ತ ಬಳ್ಳಾರಿ ಜಿಲ್ಲೆಯ ವತಿಯಿಂದ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ರಾಜ್ಯಧ್ಯಕ್ಷರಾದ ಶ್ರೀ ಹೆಚ್.ಎಸ್.ಮಂಜುನಾಥ ಗೌಡರವರ ನಿರ್ದೇಶನದಂತೆ ಹಾಗೂ ಸಾಮಾಜಿಕ ಜಾಲತಾಣ ರಾಜ್ಯಧ್ಯಕ್ಷರಾದ ಶ್ರೀ ಸಿದ್ದುಹಳ್ಳೇ ಗೌಡ ಅವರ ಆದೇಶದಂತೆ 1 ಲಕ್ಷಕ್ಕೂ ಅಧಿಕ ಸಹಿ ಸಂಗ್ರಹಿಸಿ ಕೆಪಿಸಿಸಿ ಕಛೇರಿಯಲ್ಲಿ ಆಸೀಫ್ ಅವರಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲೆ ಯುವ ಕಾಂಗ್ರೆಸ್ ಕಾರ್ಯದರ್ಶಿ ಭರತ್ ಕುಮಾರ್ ಸಿಆರ್, ಸಂಡೂರು ಯುವ ಕಾಂಗ್ರೆಸ್ ಮುಖಂಡರಾದ ಗಣೇಶ್,ಕಂಪ್ಲಿ ಯುವ ಕಾಂಗ್ರೆಸ್ ಮುಖಂಡರಾದ ಆರ್.ಪಿ.ಶಶಿಕುಮಾರ್, ತೋರಣಗಲ್ಲು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮದರ್ ಭಾಷ ಇದ್ದರು.
