Tuesday, January 13, 2026
HomeDistrictsChitradurga20 ವರ್ಷಗಳ ಬಳಿಕ ಸ್ನೇಹಿತರ ಮಿಲನ ಗುರುವಂದನಾ ಕಾರ್ಯಕ್ರಮದಿಂದ ಮನಸ್ಸಿಗೆ ಹೊಸ ಉಮ್ಮಸು

20 ವರ್ಷಗಳ ಬಳಿಕ ಸ್ನೇಹಿತರ ಮಿಲನ ಗುರುವಂದನಾ ಕಾರ್ಯಕ್ರಮದಿಂದ ಮನಸ್ಸಿಗೆ ಹೊಸ ಉಮ್ಮಸು

ವರದಿ : ಶಿವಯೋಗಿ ಎಂ.ವಿ.ರಾಂಪುರ
ರಾಂಪುರ, ಮೊಳಕಾಲ್ಮೂರು:
20 ವರ್ಷಗಳ ದೀರ್ಘ ವಿರಾಮದ ಬಳಿಕ ಹಳೆಯ ವಿದ್ಯಾರ್ಥಿಗಳು ಹಾಗೂ ಸ್ನೇಹಿತರು ಒಂದೇ ವೇದಿಕೆಯಲ್ಲಿ ಒಂದಾಗಿರುವ ಅಪೂರ್ವ ಕ್ಷಣಕ್ಕೆ ರಾಂಪುರದ ಮೊಳಕಾಲ್ಮೂರು ಸಾಕ್ಷಿಯಾಯಿತು. ಇಲ್ಲಿನ ಶಾಲೆಯಲ್ಲಿ ಆಯೋಜಿಸಲಾದ ಗುರುವಂದನಾ ಕಾರ್ಯಕ್ರಮವು ಭಾಗವಹಿಸಿದ ಎಲ್ಲರ ಮನಸ್ಸಿಗೆ ಹೊಸ ಉಮ್ಮಸನ್ನು ನೀಡಿದ ಸ್ಮರಣೀಯ ಸಂದರ್ಭವಾಗಿ ಮೂಡಿಬಂತು.

ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ಮತ್ತೆ ವಿದ್ಯಾರ್ಥಿಗಳಂತೆ ತರಗತಿ ಕೋಣೆಯಲ್ಲಿ ಕುಳಿತು ಪ್ರಾರ್ಥನೆ ಸಲ್ಲಿಸಿ, ಗುರುಗಳು ಪಾಠ ಮಾಡುವುದನ್ನು ಆಲಿಸುವ ಮೂಲಕ ತಮ್ಮ ವಿದ್ಯಾರ್ಥಿ ಜೀವನದ ಸಿಹಿ ನೆನಪುಗಳಿಗೆ ಮರಳಿದರು. ಈ ಅಪೂರ್ವ ಅನುಭವವು ಭಾಗವಹಿಸಿದ ಎಲ್ಲರನ್ನೂ 20 ವರ್ಷಗಳ ಹಿಂದಿನ ಶಾಲಾ ದಿನಗಳಿಗೆ ಕರೆದೊಯ್ದಂತಾಯಿತು.

ಗುರುವಂದನಾ ಕಾರ್ಯಕ್ರಮದ ಮೂಲಕ ಆದರಣೀಯ ಶಿಕ್ಷಕರಿಗೆ ಗೌರವ ಸಲ್ಲಿಸಲಾಯಿತು. ತಮ್ಮ ಜೀವನದ ಮಾರ್ಗದರ್ಶನ ಮಾಡಿದ ಗುರುಗಳನ್ನು ಮತ್ತೆ ಭೇಟಿಯಾದ ಸಂತಸ ಸ್ನೇಹಿತರ ಮುಖದಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡಿತು.

ಹಳೆಯ ನೆನಪುಗಳ ಹಂಚಿಕೆ, ಸ್ನೇಹಸಮ್ಮಿಲನ ಹಾಗೂ ಭಾವನಾತ್ಮಕ ಕ್ಷಣಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು.
ಈ ಮಿಲನವು ಹಳೆಯ ಸ್ನೇಹಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದರ ಜೊತೆಗೆ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದ ನೆನಪಾಗಿ ಉಳಿಯುವಂತಾಯಿತು.

ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲು ಶ್ರಮಿಸಿದ ಎಲ್ಲ ಸ್ನೇಹಿತರಿಗೆ ಭಾಗವಹಿಸಿದವರು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.

ಗುರುವಂದನಾ ಕಾರ್ಯಕ್ರಮವು ಸ್ಮರಣೆ, ಸ್ನೇಹ ಮತ್ತು ಕೃತಜ್ಞತೆಯ ಸಂಗಮವಾಗಿ ಎಲ್ಲರಿಗೂ ಅವಿಸ್ಮರಣೀಯ ದಿನವಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments