Tuesday, January 13, 2026
HomeKotturu"ಕೊಟ್ಟೂರಿನ ಕಲಾಕೇಂದ್ರದ ಕೊಡುಗೆ ಅಪಾರ :ನಂದಿಪುರ ಅಭಿನವ ಚರಂತೇಶ್ವರ ಸ್ವಾಮೀಜಿ"

“ಕೊಟ್ಟೂರಿನ ಕಲಾಕೇಂದ್ರದ ಕೊಡುಗೆ ಅಪಾರ :ನಂದಿಪುರ ಅಭಿನವ ಚರಂತೇಶ್ವರ ಸ್ವಾಮೀಜಿ”

ವರದಿ: ಶಿವರಾಜ್ ಕನ್ನಡಿಗ
ಕೊಟ್ಟೂರು: ಪಟ್ಟಣದ ಎಪಿಎಂಸಿ ಆವರಣದಲ್ಲಿ ಕಲಾ ಕೇಂದ್ರದ ವತಿಯಿಂದ ಶಾಮನೂರು ಶಿವಶಂಕರಪ್ಪ ವೇದಿಕೆಯಲ್ಲಿ ಭಾನುವಾರ ಆಯೋಜಿಸಿದ್ದ ಸಂಗೀತ ಹಾಗೂ ನಾಟಕೋತ್ಸವ 2026 ನಾಲ್ಕನೇ ದಿನದ ಸಮಾರಂಭಕ್ಕೆ ಚಾಲನೆ ನೀಡಿ, ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳಸುವಲ್ಲಿ ಕಲಾ ಕೇಂದ್ರದ ಕೊಡುಗೆ ಅಪಾರ
ಮತ್ತು ಇಂದಿನ ಯುವ ಪೀಳಿಗೆಗೆ ಕಲೆ,ಸಂಗೀತ, ಸಂಸ್ಕೃತಿ ಬಗ್ಗೆ ಅರಿವು ಮೂಢಿಸುತ್ತಿರುವ ಕಲಾಕೇಂದ್ರದ ಕಾರ್ಯ ಶ್ಲಾಘನೀಯ ಎಂದು ನಂದಿಪುರ ಅಭಿನವ ಚರಂತೇಶ್ವರ ಸ್ವಾಮೀಜಿಯವರು ಹೇಳಿದರು

ಆಧುನಿಕ ಯುಗದಲ್ಲಿ ಯುವ ಜನಾಂಗ ಕೇವಲ ತಾಂತ್ರಿಕತೆಗೆ ಮಾರುಹೋಗದೇ ಕಲೆ, ಸಂಸ್ಕೃತಿಯ ಅರಿವು ಅಳವಡಿಸಿಕೊಳ್ಳಬೇಕೆಂದು ಬೀಜ ನಿಗಮದ ನಿರ್ದೇಶಕ ಸಾವಜ್ಜಿ ರಾಜೇಂದ್ರ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕಲಾ ಕೇಂದ್ರದ ಅಧ್ಯಕ್ಷ ಎಂ.ಎಂ.ಜೆ.ಸತ್ಯಪ್ರಕಾಶ್, ಕೊಟ್ಟೂರೇಶ್ವರ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಸಿ.ಮೋಹನ್ ರೆಡ್ಡಿ, ಎಸ್.ಎಂ.ಗುರುಪ್ರಸಾದ್, ಎನ್.ಎಂ.ಜಲಜಾಕ್ಷಿ, ಮಾತನಾಡಿದರು.

ಈ ಸಂದರ್ಭದಲ್ಲಿ ವಿಕಾಸ ಬ್ಯಾಂಕ ಅಧ್ಯಕ್ಷ ವಿಶ್ವನಾಥ್ ಹಿರೇಮಠ್, ಗುರುದೇವ ವಿದ್ಯಾ ಸಂಸ್ಧೆ ಆಡಳಿತ ಮಂಡಳಿಯ ನಾಗರಾಜ್ ಶೆಟ್ಟಿ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಎಸ್.ಎಂ.ಮರುಳಸಿದ್ದಯ್ಯ, ಪಿ.ಎಂ.ಬಸವಲಿಂಗಯ್ಯ, ಅಡಿಕೆ ಮಂಜುನಾಥ್, ಎನ್.ಬಿ.ಕೊಟ್ರೇಶ್, ಕುಡತಿನಿಮೊಗ್ಗಿ ದೇವೆಂದ್ರಗೌಡ, ಅಂಚೆ ಕೊಟ್ರೇಶ್, ಮತ್ತಿಹಳ್ಳಿ ಪ್ರಕಾಶ್, ಕೆ.ಎಂ.ರಾಜು, ಗಜಾಪುರ ಸತೀಶ್, ಕೆ.ಅಯ್ಯನಹಳ್ಳಿ ನಾಗಪ್ಪ ತಿಪ್ಪಜ್ಜಿ ರಾಜಣ್ಣ, ವೀರೇಶ್, ಸೋಮಣ್ಣ ಮುಂತಾದವರು ಪಾಲ್ಗೊಂಡಿದ್ದರು.

ಕೋಗಳಿ ಕೊಟ್ರೇಶ್ ತಂಡದವರಿಂದ ಹಾಸ್ಯ ಕಾರ್ಯಕ್ರಮ, ಸರಿಗಮಪ ಜೀಟಿವಿ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ, ಪುಟ್ಟರಾಜ್ ಗವಾಯಿ ಮೆಲೋಡಿಸ್ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments