Tuesday, January 13, 2026
HomeKotturuಕೊಟ್ಟೂರು: ಎಪಿಎಂಸಿ ವರ್ತಕರ ಪುತ್ರ ಬಿ.ಎಸ್. ಪ್ರಶಾಂತ್ ನಿಧನ

ಕೊಟ್ಟೂರು: ಎಪಿಎಂಸಿ ವರ್ತಕರ ಪುತ್ರ ಬಿ.ಎಸ್. ಪ್ರಶಾಂತ್ ನಿಧನ

ಕೊಟ್ಟೂರಿನ ಎಪಿಎಂಸಿ ವರ್ತಕರಾದ ಬಿ.ಎಸ್. ಕೊಟ್ರೇಶ್ ಅವರ ಪುತ್ರ ಬಿ.ಎಸ್. ಪ್ರಶಾಂತ್ ಅವರು ಭಾನುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಅವರನ್ನು ಇಂದು ದಾವಣಗೆರೆ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಪ್ರಶಾಂತ್ ಅವರ ಅಕಾಲಿಕ ನಿಧನದಿಂದ ಕುಟುಂಬಸ್ಥರು, ಬಂಧುಗಳು, ಸ್ನೇಹಿತರು ಹಾಗೂ ಎಪಿಎಂಸಿ ವರ್ತಕ ವಲಯದಲ್ಲಿ ತೀವ್ರ ಶೋಕ ಆವರಿಸಿದೆ. ಮೃತರ ಆತ್ಮಕ್ಕೆ ಶಾಂತಿ ಕೋರಿ, ಕುಟುಂಬಸ್ಥರಿಗೆ ಈ ದುಃಖವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ಸ್ನೇಹಿತರು ಹಾಗೂ ಕುಟುಂಬದವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಮೃತರ ಆತ್ಮಕ್ಕೆ ಗೌರವ ಸೂಚಿಸುವ ಸಲುವಾಗಿ ನಾಳೆ ಕೊಟ್ಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸದಿರಲು ನಿರ್ಧರಿಸಲಾಗಿದೆ. ದಲ್ಲಾಲರು ಹಾಗೂ ಖರೀದಿದಾರರು ಸಹಕರಿಸಬೇಕೆಂದು ಎಪಿಎಂಸಿ ವರ್ತಕರು ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments