ವರದಿ: ಜಿ.ಎಂ.ಬಸಯ್ಯ.
ಕುರುಗೋಡು ಸಮೀಪದ ಎಮ್ಮಿಗನೂರು ಗ್ರಾಮದ ಬೈಪಾಸ್ ರಸ್ತೆಯಲ್ಲಿ ಬರಯವ ತಳವಾರಪೇಟೆಯ ಶ್ರೀ ಗಂಗಾಪರಮೇಶ್ವರಿ ದೇವಸ್ಥಾನಕ್ಕೆ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ ವತಿಯಿಂದ ಎರಡು ಲಕ್ಷ ಮೊತ್ತ ಚೆಕ್ ವಿತರಿಸಲಾಯಿತು
ಈ ವೇಳೆ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಮಾತನಾಡಿ ಭಾರತೀಯ ಪರಂಪರೆಯಲ್ಲಿ ದೇವಸ್ಥಾನಗಳು ಸಂಸ್ಕೃತಿ ಮತ್ತು ಸಂಸ್ಕಾರದ ಪ್ರತೀಕವಾಗಿದ್ದು ಆಧ್ಯಾತ್ಮಿಕತೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುವೆ ಎಂದರು
ನಂತರ ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಎಲ್ ಮಾತನಾಡಿ ಸಂಸ್ಥೆಯು 64 ಯೋಜನೆಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ನೀಡುವ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸುಸಕ್ತ ರನ್ನಾಗಿಸುವುದು ಮೂಲ ಉದ್ದೇಶವಾಗಿದೆ ಎಂದರು
ಈ ವೇಳೆ ಕೃಷಿ ಮೇಲ್ವಿಚಾರಕ ಸಂಜು ಕುಮಾರ್ ವಲಯದ ಮೇಲ್ವಿಚಾರಕ ಮಂಜುನಾಥ್ ಸಂಪನ್ಮೂಲ ವ್ಯಕ್ತಿ ಎಸ್ ರಾಮಪ್ಪ ಸೇವಾ ಪ್ರತಿನಿಧಿ ಲಕ್ಷ್ಮಿ ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷರಾದ ಕಾಗಿ ಈರಣ್ಣ ಪ್ರಮುಖರಾದ ಆದಿಮನೆ ಗುಂಡಯ್ಯ. ಬಡಿಗೇರ್ ವೀರೇಶ್. ಯಮನೂರಪ್ಪ. ಎಚ್. ರಂಗಪ್ಪ. ಜಿ. ಜಡಪ್ಪ. ಗಂಗಾಧರ. ನಾಗಪ್ಪ. ಲಕ್ಷ್ಮಿಕಾಂತ. ಸೇರಿದಂತೆ ಗಂಗಾ ಮತ ಸಮಾಜದ ಹಿರಿಯರು ಯುವಕರು ಸಮಿತಿಯ ಪದಾಧಿಕಾರಿಗಳು ಇದ್ದರು
