ವರದಿ: ಜಿಎಂ ಬಸಯ್ಯ
ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ ಹಾಗಾಗಿ ಪ್ರತಿಯೊಬ್ಬರೂ ಚಿಕ್ಕ ವಯಸ್ಸಿನಿಂದಲೇ ಕ್ರೀಡೆಯಲ್ಲಿ ಪಾಲ್ಗೊಳ್ಳುವುದನ್ನು ರೂಡಿಸಿಕೊಳ್ಳಬೇಕು ಎಂದು ಕುರುಗೋಡು ಠಾಣೆಯ ಪಿಎಸ್ಐ ಸುಪ್ರೀತ್ ವಿರುಪಾಕ್ಷಪ್ಪ ತಿಳಿಸಿದರು
ಅವರು ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿ ಇಂದು ಸೋಮಸಮುದ್ರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ ಕ್ರೀಡೆ ಮಾನವ ಜೀವನದ ಅವಿಭಾಜ್ಯ ಅಂಗವಾಗಿದ್ದು ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿದ್ದು ಅವುಗಳ ಉಳಿವಿನಲ್ಲಿ ಯುವಕರೊಂದಿಗೆ ಹಿರಿಯರು ಕೈಜೋಡಿಸಿ ಸಹಕಾರ ನೀಡಬೇಕು ಎಂದರು
ಪಂದ್ಯಾವಳಿ 20.ಆರು ದಿನಗಳ ಪಂದ್ಯ ಒಳಗೊಂಡಂತೆ ಜರಗಲಿದೆ
ಈ ವೇಳೆ ಎಸ್ ಡಿ ಎಂ ಸಿ ಅಧ್ಯಕ್ಷ ಗಾದಿಲಿಂಗಪ್ಪ. ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ ಎನ್ ಚಂದ್ರಶೇಖರ್. ಮಂಜುನಾಥ್. ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಜಡೇಪ್ಪ. ಕಂಪ್ಲಿ ಶಿಕ್ಷಣ ಸುಧಾರಣಾ ಸಮಿತಿಯ ನಿರ್ದೇಶಕ ಎಸ್ ಶ್ರೀನಿವಾಸ್. ಯೂಥ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪವಾಡಿ. ಚಿದಾನಂದಪ್ಪ. ಡಿಎಸ್ಎಸ್ ಮುಖಂಡ ಈಶ್ವರ ಸೇರಿದಂತೆ ಗ್ರಾಮದ ಹಿರಿಯರು. ಯುವಕರು ಕ್ರೀಡಾ ಪ್ರೇಮಿಗಳು. ಇತರರು ಇದ್ದರು
