ವರದಿ: ಶಿವರಾಜ್ ಕನ್ನಡಿಗ
ಕೊಟ್ಟೂರು: ತಾಲೂಕಿನ
ಸರಕಾರಿ ಪ್ರೌಢಶಾಲೆ ನಿಂಬಳಗೆರೆಯಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಶ್ರೀ ಚನ್ನಬಸವನ ಗೌಡ್ರು, ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಬಸಮ್ಮ, ಇವರು ಆಯ್ಕೆಯಾಗಿದ್ದಾರೆ.
ಶ್ರೀ ಎಂ ಜಿ ಪ್ರಕಾಶ್ ಗೌಡ, ಇವರ ಅವಧಿ ಮುಗಿದಿದ್ದರಿಂದ ಹೊಸದಾಗಿ ಎಸ್ ಡಿ, ಎಮ್, ಸಿ ಸಮಿತಿಯನ್ನು ಆಯ್ಕೆ ಮಾಡಲಾಗಿದೆ.
ಸತತವಾಗಿ ಮೂರು ಬಾರಿ ಪೋಷಕರ ಸಭೆಯನ್ನು ಕರೆಯಲಾಗಿ ಇಂದು ಸರ್ವಾನು ಮತದಿಂದ 9 ನಿರ್ದೇಶಕರ ಆಯ್ಕೆಗೊಂಡು ನಂತರ ಅಧ್ಯಕ್ಷರಾಗಿ ಶ್ರೀ ಎನ್. ಜಿ. ಚನ್ನಬಸನಗೌಡ್ರು, ಇವರನ್ನು ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ಜಿ.ಫಕೀರಪ್ಪ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ಶ್ರೀಕಾಂತ್, ಮಾಜಿ ಎಸ್, ಡಿ, ಎಮ್, ಸಿ ಅಧ್ಯಕ್ಷರಾದ ಎಂ. ಜಿ. ಪ್ರಕಾಶ್ ಗೌಡ, ಮಂಗಾಪುರದ. ನಾಗೇಂದ್ರ, ಸಹ ಶಿಕ್ಷಕರು ಪೋಷಕರು ಭಾಗಿಯಾಗಿದ್ದರು.
