ವರದಿ: ಶಿವರಾಜ್ ಕನ್ನಡಿಗ
ಕೊಟ್ಟೂರು: ತಾಲೂಕಿನ ಅಂಚೆ ಕಛೇರಿಯು ಗ್ರಾಹಕರಿಗೆ ನೂರಕ್ಕೂ ಹೆಚ್ಚು ಸೌಲಭ್ಯಗಳನ್ನು ಕೊಡುತ್ತಿದೆ, ಕಳೆದ ಒಂದು ದಶಕದಿಂದಲೂ ಆಧಾರದ ಎಲ್ಲಾ ಸೌಲಭ್ಯಗಳನ್ನು ಅಂಚೆ ಕಛೇರಿಯಲ್ಲಿ ಕೊಡಲಾಗುತ್ತದೆ, ಈ ನಿಟ್ಟಿನಲ್ಲಿ ಕೊಟ್ಟೂರಿನ ನೂತನ ಅಂಚೆ ಕಛೇರಿಯು ಕೊಟ್ಟೂರು ಹಾಗೂ ಸುತ್ತಮುತ್ತಲಿನ ಎಲ್ಲಾ ನಾಗರಿಕರಿಗೆ ಹೊಸ ಆಧಾರ್ ಕಾರ್ಡ್ ಮಾಡಿಸುವುದು, ಆಧಾರ್ ಕಾರ್ಡ್ ನಲ್ಲಿ ಫೋನ್ ನಂಬರ್ ತಿದ್ದುಪಡಿ ಮಾಡುವುದು, ಹೆಸರು ಮತ್ತು ವಿಳಾಸಗಳನ್ನು ತಿದ್ದುಪಡಿ ಮಾಡುವುದು, ಆಧಾರ್ ಬಯೋಮೆಟ್ರಿಕ್ ಮಾಡುವುದು, ಆಧಾರ್ ಕಾರ್ಡ್ ಪ್ರಿಂಟ್ ತೆಗೆಯುವುದು ಈ ಎಲ್ಲಾ ಸೌಲಭ್ಯಗಳು ಕೊಟ್ಟೂರಿನ ನೂತನ ಅಂಚೆ ಕಛೇರಿಯಲ್ಲಿ ಲಭ್ಯವಿವೆ, ಆಧಾರ್ ಕಾರ್ಡ್ ನಾಗರೀಕರ ಹಲವಾರು ಕೆಲಸ ಕಾರ್ಯಗಳಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲಿ, ಸರ್ಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿದೆ, ಈ ನಿಟ್ಟಿನಲ್ಲಿ ನಾಗರಿಕರಿಗೆ ಆಧಾರ್ ಕಾರ್ಡ್ ತಿದ್ದುಪಡಿ ಅವಶ್ಯಕತೆ ತುಂಬಾ ಇದೆ, ಈ ಸೌಲಭ್ಯಗಳನ್ನು ನಾಗರಿಕರು ಬಳಸಿಕೊಳ್ಳಬೇಕೆಂದು ಅಂಚೆ ಅಧೀಕ್ಷಕರಾದ ಪಿ ಚಿದಾನಂದ ಅವರು ಪತ್ರಿಕೆಗೆ ತಿಳಿಸಿದರು,
■ಅಂಚೆ ಕಛೇರಿಯ ಹಳೆ ಕಟ್ಟಡದಲ್ಲಿ ನಾಗರಿಕರು ಬಂದು ನಿಲ್ಲುವ ಜಾಗದ ಅನಾನುಕೂಲ ಬಾಳ ಆಗಿದ್ದರಿಂದ ಆಧಾರ್ ಮಾಡಲು ತೊಂದರೆಯಾಗುತ್ತಿತ್ತು, ನೂತನ ಅಂಚೆ ಕಚೇರಿಯಲ್ಲಿ ಆಧಾರಿಗೋಸ್ಕರ ಬೇರೆ ವಿಭಾಗವನ್ನೇ ಮಾಡಿದ್ದಾರೆ.
ಕೊಟ್ಟೂರು ತಾಲೂಕಿನ ಎಲ್ಲಾ ನಾಗರಿಕರಿಗೂ ಈ ಸೌಲಭ್ಯ ಸಿಗಬೇಕು
——-ಅಂಚೆ ಕೊಟ್ರೇಶ್,
