ವರದಿ : ಶಿವರಾಜ್ ಕನ್ನಡಿಗ
ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಕೊಟ್ಟೂರು ಕಛೇರಿಯ ಆವರಣದಲ್ಲಿ ದಿನಾಂಕ 8-05-2025 ರಂದು ಬೆಳಿಗ್ಗೆ 10.30 ಗಂಟೆಗೆ ವಿದ್ಯುತ್ ಗ್ರಾಹಕರ ಜನಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಆದರೆ ಕಡಿಮೆ ಗ್ರಾಹಕರು ಭಾಗವಹಿಸುವುದರಿಂದ ಕೆಲವು ಜನ ಸೇರಿದ್ದು ಅರ್ಜಿಗಳು 8 ಬಂದಿದ್ದವು ಆದಕಾರಣ ಈ ಗ್ರಾಹಕರ ಜನಸ್ಪಂದನ ಕಾರ್ಯಕ್ರಮ ಹಲವು ಜನರಿಗೆ ಉಪಯೋಗವಾಗಲಿ ಇತ್ತೀಚಿನ ದಿನಗಳಲ್ಲಿ ಕೆಲವು ವಿದ್ಯುತ್ ಅವಘಡದಿಂದ ಅನೇಕ ತೊಂದರೆಗಳಾಗಿವೆ,
ಎಲ್ಲಾದರೂ ತೊಂದರೆಗಳು ಆಗುವ ಮುನ್ನೆಚ್ಚರಿಕೆಯಿಂದ ದಯವಿಟ್ಟು ಅಪಘಾತ ತಪ್ಪಿಸಲು ನಮಗೆ ಸಹಕಾರ ಮಾಡಬೇಕು ಮತ್ತು ವಿದ್ಯುತ್ ಗ್ರಾಹಕರ ಜನಸ್ಪಂದನ ಕಾರ್ಯಕ್ರಮವನ್ನು ದಿನಾಂಕ 14.05.2025 ಬೆಳಿಗ್ಗೆ 10.30 ಗಂಟೆಗೆ ಎರಡನೇ ಬಾರಿ ಪುನಃ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ,
ಆದ್ದರಿಂದ ಕೊಟ್ಟೂರು ಮತ್ತು ಸುತ್ತಮುತ್ತಲಿನ ಹಳ್ಳಿಗಳ ನಮ್ಮ ಗುಲ್ಬರ್ಗಾ ವಿದ್ಯುತ್ ಸರಬರಾಜು ನಿಯಮಿತ ಕೊಟ್ಟೂರು ಇವರ ಅಧಿಕಾರಿಗಳ ಸಹಕಾರ ಪಡೆಯಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಆದ ನಾಗರಾಜ ರವರು ತಿಳಿಸಿದರು,
ಈ ಸಂದರ್ಭದಲ್ಲಿ ಶರಣಪ್ಪ ಜೆ ಇ ಉಜ್ಜಯಿನಿ ಹಾಗೂ ಚೇತನ್ ಕುಮಾರ್ ಕೊಟ್ಟೂರು ಪಟ್ಟಣದ ಜೆ ಇ ಮತ್ತು ಲೈನ್ ಮ್ಯಾನ್ ಗಳು ಮತ್ತು ಸಿಬ್ಬಂದಿ ವರ್ಗದವರು ಹಾಗೂ ಕೆಲವೇ ಕೆಲವು ಸಾರ್ವಜನಿಕರು ಉಪಸ್ಥಿತರಿದ್ದರು.