ಬೆಂಗಳೂರು: ಜೂನ್ 18, ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಸೇರಿದಂತೆ ಸಾಣಾಪುರ ಕೆರೆ, ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲು ಬರುವ ವಿದೇಶಿಗರಿಗೆ ಸ್ಥಳೀಯ ಕೆಲವು ಕಿಡಗೇಡಿಗಳು ಹಲ್ಲೆ, ಕಿರುಕುಳ, ಹಣವಸೂಲಿ, ಕೊಲೆ ಮಾಡಿದಂತ ಪ್ರಕರಣಗಳು ವರದಿಯನ್ವಯ ವಿದೇಶಿಗರಿಗೆ ಸೂಕ್ತ ರಕ್ಷಣೆ ನೀಡುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ಬಳ್ಳಾರಿ ವಲಯ ಐಜಿಪಿರವರಿಗೆ ಪತ್ರ ಬರೆದ ನಿಮಿತ್ಯ ಕೊಪ್ಪಳ ಎಸ್ಪಿ ಕಚೇರಿಯಿಂದ ಕ್ರಮ ಕೈಗೊಳ್ಳಲಾಗಿದೆ!

ಜಿಲ್ಲೆಗೆ ಪ್ರವಾಸ ಕುರಿತು ಆಗಮಿಸುವ ವಿದೇಶಿ ಪ್ರವಾಸಿಗರಿಗೆ ಕೊಪ್ಪಳ ಪೊಲೀಸ್ ಉಪ ವಿಭಾಗದಲ್ಲಿ ಯಾವುದೇ ತೊಂದರೆ ಹಾಗೂ ಕಿರುಕುಳ ಆಗದಂತೆ ನೋಡಿಕೊಳ್ಳುತ್ತಾ ಬಂದಿದ್ದು ವಿದೇಶಿ ಪ್ರವಾಸಿಗರು ಜಿಲ್ಲೆಗೆ ಪ್ರವಾಸ ಕುರಿತು ಆಗಮಿಸಿದ ಸಮಯದಲ್ಲಿ ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ರೆಸಾರ್ಟ್ಗಳಲ್ಲಿ ಹಾಗೂ ಹೋಂ ಸ್ಟೇ ಗಳಲ್ಲಿ ವಾಸ್ತವ್ಯ ಮಾಡುತ್ತಿದ್ದು ಹಾಗೂ ಭೇಟಿ ನೀಡುತ್ತಿದ್ದು, ಈ ಬಗ್ಗೆ ಮುನಿರಾಬಾದ್ ಪೊಲೀಸ್ ಠಾಣೆ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 34 ರೆಸಾರ್ಟ್ಗಳು ಹಾಗೂ 03 ಹೋಂ ಸ್ಟೇಗಳು ಬರುತ್ತಿದ್ದು, ಎಲ್ಲಾ 34 ರೆಸಾರ್ಟ್ಗಳ ಹಾಗೂ 03 ಹೋಂ ಸ್ಟೇಗಳ ಮುಂಭಾಗದಲ್ಲಿ ಯಾವುದೇ ಸಮಸ್ಯೆಯಾದಲ್ಲಿ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸುವಂತೆ ವಿದೇಶಿ ಪ್ರವಾಸಿಗರಿಗೆ ಅರ್ಥವಾಗುವ ಇಂಗ್ಲೀಷ್ ಭಾಷೆಯಲ್ಲಿ ಪೊಲೀಸ್ ಅಧಿಕಾರಿಗಳ ದೂರವಾಣಿ ಸಂಖ್ಯೆವುಳ್ಳ ಜಾಗೃತಿ ಫಲಕಗಳನ್ನು ಹಾಕಿಸಿ ಕ್ರಮ ಕೈಗೊಂಡಿದ್ದು ಅಲ್ಲದೇ ನಿಮ್ಮ ಠಾಣಾ ವ್ಯಾಪ್ತಿಗೆ ಆಗಮಿಸುವ ವಿದೇಶಿಯರು ಪ್ರವಾಸಕ್ಕೆ ಬಂದ ಬಗ್ಗೆ ಹಾಗೂ ಠಾಣಾ ವ್ಯಾಪ್ತಿಯ ರೆಸಾರ್ಟ್, ಹೋಂ ಸ್ಟೇ ಹಾಗೂ ಲಾಡ್ಜ್ಗಳಲ್ಲಿ ತಂಗಿರುವ ಬಗ್ಗೆ ನಿಮ್ಮ ಠಾಣಾ ವ್ಯಾಪ್ತಿಯಲ್ಲಿಯ ರೆಸಾರ್ಟ್, ಹೋಂ ಸ್ಟೇ ಹಾಗೂ ಲಾಡ್ಜ್ಗಳ ಮಾಲಿಕರೊಂದಿಗೆ ಅಥವಾ ಮ್ಯಾನೇಜರ್ ರವರೊಂದಿಗೆ ಮಾಹಿತಿಯನ್ನು ಸಂಗ್ರಹಿಸಿ ವಿದೇಶಿ ಪ್ರವಾಸಿಗರಿಗೆ ಯಾವುದೇ ರೀತಿಯ ತೊಂದರೆ ಹಾಗೂ ಕಿರುಕುಳ ಆಗದಂತೆ ನೋಡಿಕೊಳ್ಳುವಂತೆ ಕೊಪ್ಪಳ ಜಿಲ್ಲಾ ಎಸ್ಪಿ ಕಚೇರಿಯಿಂದ ಪಿ.ಎಸ್.ಐ ಮುನಿರಾಬಾದ್ ಪೊಲೀಸ್ ಠಾಣೆ ರವರಿಗೆ ಜ್ಞಾಪನ ಹೊರಡಿಸಲಾಗಿದೆ!
