The post ವೈಭವದಿಂದ ಜರುಗಿದ ಉಜ್ಜಯಿನಿ ಮರುಳಸಿದ್ದೇಶ್ವರ ಸ್ವಾಮಿಯ ಶಿಖರ ತೈಲಾಭಿಷೇಕ. appeared first on Hai Sandur kannada fortnightly news paper.
]]>ತಾಲ್ಲೂಕಿನ ಉಜ್ಜಿನಿ ಸದ್ಧರ್ಮಪೀಠದ ಈ ಮಹೋತ್ಸವವನ್ನು ವೀಕ್ಷಿಸಲೆಂದೆ ನಾಡಿನೆಲ್ಲೆಡೆ ಯಿಂದ ಭಕ್ತರು ಮಧ್ಯಾಹ್ನದ ವೇಳೆಗೆ ದೇವಾಸ್ಥಾನದ ಪ್ರಾಂಗಣದಲ್ಲಿ ಜಮಾವಣೆ ಗೊಂಡಿದ್ದರು. ಸಂಜೆಯ ಗೋಧೂಳಿ ಸಮಯದ ಸಂಜೆ 5.55 ರ ಸುಮಾರಿಗೆ ಈ ಶಿಖರ ತೈಲಾಭಿಷೇಕ ನೆರವೇರುತ್ತಿದ್ದಂತೆ ನೆರೆದಿದ್ದ ಅಪಾರ ಸಂಖ್ಯೆಯ ಜನಸ್ತೋಮ ಸ್ವಾಮಿಗೆ ಜಯ- ಜಯಕಾರ ಅರ್ಪಿಸಿ, ಬಾಳೆ ಹಣ್ಣುಗಳನ್ನು ರಶಿಯೋಪಾದಿಯಲ್ಲಿ ತೂರಿ ತಮ್ಮ ಭಕ್ತಿ ಸಮರ್ಪಿಸಿದರು.
ಶ್ರೀ ಸ್ವಾಮಿಯ ರಥೋತ್ಸವದ ನಂತರದ ದಿನದ ಸದ್ದರ್ಮಪೀಠದ ವಾರ್ಷಿಕ ಧಾರ್ಮಿಕ ಕೈಂಕರ್ಯದಂತೆ ಶಿಖರ ತೈಲಾಭಿಷೇಕ ನೆರವೇರಿತು.
ಎಂದಿನಂತೆ ಜರ್ಮಲಿ ಪಾಳೆಗಾರ ಮನೆತನದವರು ಮಣ್ಣಿನ ಕುಡಿಕೆಯಲ್ಲಿ ಕಳುಹಿಸಿದ್ದ. ತೈಲವನ್ನು ಆಯಾಗಾರ ಬಳಗದವರು ಶಿಖರದ ಮೇಲೆ ಸುರಿದರು.
ನಂತರ ಇತರ ಭಕ್ತರು ಡಬ್ಬಗಟ್ಟಲೆ ಭಕ್ತಿಯ ಕಾಣಿಕೆಯಾಗಿ ನೀಡಿದ ಎಣ್ಣೆಯನ್ನು ಅಡಿಯಿಂದ ಮುಡಿಯವರೆಗೆ ಎರೆಯಲಾಯಿತು.
ಶಾಪ ವಿಮೋಚನೆಯ ಕಾರಣಕ್ಕಾಗಿ ಜರ್ಮಲಿ ಶ್ರೀ ಜಗದ್ಗುರು ಮರುಳಸಿದ್ದೇಶ್ವರ ಸ್ವಾಮಿಗೆ ಎಣ್ಣೆಯನ್ನು ಕಳುಹಿಸಿ ಕೊಡುವ ಪದ್ಧತಿಯಂತೆ ಪಾಳೆಗಾರರ ಮನೆತನದ ಕೆಲವರು ಪಾದಯಾತ್ರೆ ಮೂಲಕ ಎರಡು ಮಡಿಕೆಯ ಕೊಡಗಳಲ್ಲಿ ಎಣ್ಣೆಯನ್ನು ದೂರದ ಜರ್ಮನಿಯಿಂದ ಉಜ್ಜಿನಿಗೆ ಬುಧವಾರ ಮಧ್ಯಾಹ್ನದ ವೇಳೆಗೆ ತಂದರು. ನಂತರ ಎಣ್ಣೆಯನ್ನು ಸಧರ್ಮ ಪೀಠದ ಆಯಗಾರದ ಬಳಗದವರು ಬರ ಮಾಡಿ ಕೊಂಡು ಮೆರವಣಿಗೆ ಯೊಂದಿಗೆ ದೇವಾಲಯಕ್ಕೆ ತಂದರು.
1008 ಜಗದ್ಗುರು ಸಿದ್ಧಲಿಂಗ ರಾಜ ದೇಶಿಕೇಂದ್ರ ಸ್ವಾಮೀಜಿ ಎಣ್ಣೆ ಗಡೆಗಳಿಗೆ ಆಶೀರ್ವದಿಸಿ ಶಿಖರಕ್ಕೆ ಸಂಜೆ 5.55ವೇಳೆಯ ಸುಮಾರಿಗೆ ಹಸಿರು ನಿಶಾನೆ ತೋರಿದರು. ಈ ಘಳಿಗೆ ಯಿಂದ ಮಜ್ಜನಗೊಳಿಸುವ ಕಾರ್ಯ ಸುಮಾರು ಮುಕ್ಕಾಲು ಗಂಟೆಯ ವರಗೆ ನಡಿಯಿತು. ಎಣ್ಣೆಯ ವಾಜ್ಯನರಿಂದ ಶಿಬಿರ ಸಂಪೂರ್ಣ ಒದ್ದೆಯಾಗಿತು. ಈ ಬಗೆಯ ಶಿಖರದ ಮೇಲೆ ನಿಂತು ಸುಮಾರು 20ಕ್ಕೂ ಹೆಚ್ಚಿನ ಆಯಗಾರದ ಬಳಗದವರು ಕೆಳಗೆ ಜಾರಿ ಬೀಳುವ ಅಪಾಯವನ್ನು ಲೆಕ್ಕಿಸದೆ ತೈಲಾಭಿಷೇಕವನ್ನು ನೆರವೇರಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು.
ನೆರೆದಿದ್ದ ಎಲ್ಲಾರನ್ನು ಬೆರಗು ಗೊಳಿಸಿತು. ವಿವಿಧ ಮಠದ ಶಿವಾಚಾರ್ಯ ಸ್ವಾಮೀಜಿಗಳು ಸೇರಿದಂತೆ ಅನೇಕ ಭಾಗಗಳಿಂದ ಆಗಮಿಸಿದ ಭಕ್ತರು ಪಾಲ್ಗೊಂಡಿದ್ದರು.
ವರದಿ: ಶಿವರಾಜ್ ಕನ್ನಡಿಗ
The post ವೈಭವದಿಂದ ಜರುಗಿದ ಉಜ್ಜಯಿನಿ ಮರುಳಸಿದ್ದೇಶ್ವರ ಸ್ವಾಮಿಯ ಶಿಖರ ತೈಲಾಭಿಷೇಕ. appeared first on Hai Sandur kannada fortnightly news paper.
]]>The post ಸಿ.ಬಿ.ಎಸ್.ಇ. ಫಲಿತಾಂಶ 2024 : ಇಂದು ಸಿ.ಬಿ.ಎಸ್.ಇ. ಶಾಲೆಗೆ ಶೇಕಡ 100ರಷ್ಟು ಫಲಿತಾಂಶ. appeared first on Hai Sandur kannada fortnightly news paper.
]]>ಪ್ರಸಕ್ತ ಸಾಲಿನಲ್ಲಿ 30 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 6 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 11 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, ಉಳಿದ 17 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲ ಉತ್ತೀರ್ಣರಾಗಿರುತ್ತಾರೆ.
ವಿದ್ಯಾರ್ಥಿನಿ ಕೆ ಜೆ ಸಿಂಚನ 500ಕ್ಕೆ 475 (95 %) ಅಂಕಗಳನ್ನು ಗಳಿಸುವುದರ ಮೂಲಕ ಅತ್ಯುತ್ತಮ ಸಾಧನೆಯನ್ನು ಮಾಡಿರುತ್ತಾಳೆ. ವಿದ್ಯಾರ್ಥಿ ಅರ್ಜುನ್ ಕೆ 500ಕ್ಕೆ 448 (89.6 %), ವಿದ್ಯಾರ್ಥಿ ನಿಖಿಲ್ ಶಿವಸಾಲಿ 500 ಕ್ಕೆ 441 (88.2 %), ವಿದ್ಯಾರ್ಥಿನಿ ಅನುಷ ಕೆ ಎಸ್ 500 ಕ್ಕೆ 436 (87.2 %), ವಿದ್ಯಾರ್ಥಿನಿ ಜೀವಿತ ಎಂ 500ಕ್ಕೆ 402 (80.2 %)ಅಂಕಗಳನ್ನು ಪಡೆಯುವುದರ ಮೂಲಕ ಶಾಲೆಗೆ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ, ನಾಲ್ಕು ಮತ್ತು ಐದನೇ ಸ್ಥಾನವನ್ನು ಪಡೆಯುವುದರ ಮೂಲಕ ಶಾಲೆಗೆ ಕೀರ್ತಿತಂದಿರುತ್ತಾರೆ ಎಂದು ಇಂದು ಸಿ.ಬಿ.ಎಸ್.ಇ. ಶಾಲೆಯ ಪ್ರಾಂಶುಪಾಲರು ತಿಳಿಸಿದರು.
ಶಾಲೆಗೆ ಅತ್ಯುತ್ತಮ ಫಲಿತಾಂಶವನ್ನು ನೀಡಿದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಯ ಸಿಬ್ಬಂದಿ ವರ್ಗದವರಿಗೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಹಾಗೂ ಸಮಸ್ತ ವಿದ್ಯಾರ್ಥಿ ಬಳಗದಿಂದ ಶುಭ ಹಾರೈಸುತ್ತಾರೆ.
The post ಸಿ.ಬಿ.ಎಸ್.ಇ. ಫಲಿತಾಂಶ 2024 : ಇಂದು ಸಿ.ಬಿ.ಎಸ್.ಇ. ಶಾಲೆಗೆ ಶೇಕಡ 100ರಷ್ಟು ಫಲಿತಾಂಶ. appeared first on Hai Sandur kannada fortnightly news paper.
]]>The post “ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಬಹುದು : ಉಜ್ಜಯಿನಿ ಶ್ರೀಗಳು “ appeared first on Hai Sandur kannada fortnightly news paper.
]]>ಇಂದಿನ ದುಬಾರಿ ಕಾಲದಲ್ಲಿ ಮದುವೆ ಮಾಡುವುದೆಂದರೆ ಸುಲಭದ ಮಾತಲ್ಲ ಆದರೆ ಸಾಮೂಹಿಕ ವಿವಾಹ ಮಾಡಿದ್ದೇ ಅದಲ್ಲಿ ದುಂದುವೆಚ್ಚಕ್ಕೆ ಸಾಕಷ್ಟು ಕಡಿವಾಣ ಹಾಕಬಹುದು ಎಂದು ಉಜ್ಜಯಿನಿ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಇಂದಿನ ದಿನಮಾನಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮದುವೆ ಕಬ್ಬಿಣದ ಕಡಲೆ, ಉಳ್ಳವರು ಸಾಮೂಹಿಕ ವಿವಾಹ ದಂತಹ ಸತ್ಕಾರ್ಯಕ್ಕೆ ಮುಂದಾಗಿ ಬಡವ, ಶ್ರೀಮಂತ, ಮೇಲು, ಕೀಳೆನ್ನದೆ ಎಲ್ಲರೂ ಒಂದೇ ಎನ್ನುವ ಭಾವನೆಯೊಂದಿಗೆ ನಡೆಸುವ ಸತ್ಕಾರ್ಯಗಳಿಗೆ ಜಯ ಖಂಡಿತ ಎಂದ ಅವರು, ಇಂತಹ ಸಾಮಾಜಿಕ ಕಳಕಳಿಯಿಂದ ನಡೆಯುವ ಧರ್ಮ ಕಾರ್ಯಗಳು ಭಗವಂತನಿಗೆ ಇಷ್ಟ ಎಂದು ಅಭಿಪ್ರಾಯಪಟ್ಟರು.
ಡೋಣೂರು ಚಾನುಕೋಟಿ ಮಠ ಕಳೆದ ಮೂರು ದಶಕಗಳಿಂದ ಯಾವುದೇ ಪ್ರತಿಫಲದ ಆಪೇಕ್ಷೆ ಇಲ್ಲದೆ ಉಚಿತ ಸಾಮೂಹಿಕ ವಿವಾಹ ಹಮ್ಮಿ ಕೊಳ್ಳುತ್ತಾ ಬರುವ ಮೂಲಕ ರಾಷ್ಟ್ರೀಯ ಸಂಪತ್ತಿನ ಉಳಿವಿಗೆ ಕಾರಣ ರಾಗಿರುವುದು ನಿಜಕ್ಕೂ ಮಾದರಿ ಸಂಗತಿ ಎಂದರು.
ಕಾರ್ಯಕ್ರಮ ಉದ್ದೇಶಿಸಿ ಡೋಣೂರು ಚಾನುಕೋಟಿ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ದೇವರ ಸಾನ್ನಿಧ್ಯದಲ್ಲಿ ಗುರು ಹಿರಿಯರ, ಮಠಾಧೀಶರಿಂದ ಆಶೀರ್ವಾದ ಪಡೆದ ನೀವು ಧನ್ಯರು ನಿಮ್ಮ ನವದಾಂಪತ್ಯ ಜೀವನ ಸುಖಕರವಾಗಲಿ, ಸಂಸಾರದಲ್ಲಿ ಬರುವ ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸಿ, ಕೋಪ ನಿಮ್ಮ ಬದುಕನ್ನು ಹಾಳುಮಾಡುತ್ತದೆ. ಇದರಿಂದ ಎಚ್ಚರ ವಿರಬೇಕು ಎಂದರು.
ಬೆಂಗಳೂರು ವಿಭೂತಿಪುರ ಮಠದ ಡಾ|ಮಹಾಂತಲಿಂಗ ಶಿವಾಚಾರ್ ಸ್ವಾಮೀಜಿ, ಕೂಡ್ಲಿಗಿ ಹಿರೇಮಠಾಧ್ಯಕ್ಷ ಪ್ರಶಾಂತ ಸಾಗರ ಸ್ವಾಮೀಜಿ, ನಂದೀಪುರದ ಚರಂತೇಶ್ವರ ಸ್ವಾಮೀಜಿ ಪಾಲ್ಗೊಂಡಿದ್ದರು. ಇದಕ್ಕೂಮೊದಲು ಶ್ರೀಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವ ನಡೆಯಿತು.
ನಂತರ ಮಠದ ವತಿಯಿಂದ 10 ಕ್ಕೂ ಹೆಚ್ಚು ಜೋಡಿ ಸಾಮೂಹಿಕ ವಿವಾಹ ಕಾಠ್ಯಕ್ರಮದಲ್ಲಿ ಭಾಗವಹಿಸಿದ್ದರು. 41 ಜಂಗಮ ವಟುಗಳ ಶಿವದೀಕ್ಷೆ ಕಾಠ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಅಡಿಕಿ ಮಂಜುನಾಥ್ ,ಚಾಪಿ ಚಂದ್ರಪ್ಪ, ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು. ಮೈದೂರು ವಿಶ್ವನಾಥ ಕಾಠ್ಯಕ್ರಮ ನಿರೂಪಿಸಿದರು.
The post “ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಬಹುದು : ಉಜ್ಜಯಿನಿ ಶ್ರೀಗಳು “ appeared first on Hai Sandur kannada fortnightly news paper.
]]>The post ಬಸವಣ್ಣನ ಭಾವಚಿತ್ರದೊಂದಿಗೆ ಮೆರವಣಿಗೆಯ ಬಸವೇಶ್ವರ ಜಯಂತಿ ಆಚರಣೆ appeared first on Hai Sandur kannada fortnightly news paper.
]]>ಬಸವೇಶ್ವರ ಜಯಂತಿಯಂದು ಜನರು ಪ್ರಾರ್ಥನೆ ಮತ್ತು ಆಚರಣೆ ಗಳಿಗಾಗಿ ಹತ್ತಿರದ ಬಸವೇಶ್ವರ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಲಿಂಗಾಯತ ಸಮಿತಿಗಳ ಜನರು ಈ ಅದ್ಭುತ ದಿನವನ್ನು ಆಚರಿಸಲು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ ಮತ್ತು ಎಲ್ಲರೂ ಶುಭಾಶಯಗಳನ್ನು ಮತ್ತು ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.
ಮಂದಿರಗಳಲ್ಲಿ ಬಸವಣ್ಣನವರ ಜೀವನ ಕುರಿತು ಉಪನ್ಯಾಸಗಳು ನಡೆಯುತ್ತವೆ, ಬಸವಣ್ಣನವರ ಬೋಧನೆಗಳನ್ನು ನೆನಪಿಸಿಕೊಳ್ಳಲಾಗುತ್ತದೆ. ಅನೇಕ ಭಕ್ತರು ಕೂಡಲ ಸಂಗಮಕ್ಕೆ ಭೇಟಿ ನೀಡುತ್ತಾರೆ, ಅಲ್ಲಿ ಈ ಉತ್ಸವವು ಸುಮಾರು ಏಳು ದಿನಗಳವರೆಗೆ ನಡೆಯುತ್ತದೆ. ಬಸವಣ್ಣನ ದೇವಸ್ಥಾನಗಳಲ್ಲಿ ಹಲವಾರು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಅನೇಕ ಯುವಕರು ಭಾಗವಹಿಸಿದ್ದರು.
ವರದಿ: ಶಿವರಾಜ್ ಕನ್ನಡಿಗ
The post ಬಸವಣ್ಣನ ಭಾವಚಿತ್ರದೊಂದಿಗೆ ಮೆರವಣಿಗೆಯ ಬಸವೇಶ್ವರ ಜಯಂತಿ ಆಚರಣೆ appeared first on Hai Sandur kannada fortnightly news paper.
]]>The post ಶ್ರೀ ಮರುಳಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ appeared first on Hai Sandur kannada fortnightly news paper.
]]>ರಾಜ್ಯಾದ್ಯಂತ ಶ್ರೀ ಪೀಠಕ್ಕೆ ಇರುವ ಸಹಸ್ರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ. ಹಾಗೂ ರಥೋತ್ಸವ ದಿನ ಹಾಗೂ ಮರು ದಿನದಂದು ಸಕಲ ಭಕ್ತಾಗಳಿಗೆ ಪ್ರಸಾದ ವ್ಯವಸ್ಥೆಯೂ ಸಹ ಇರುತ್ತದೆ.
ಇದರ ಜೊತೆಗೆ ಸಾಂಸ್ಕೃತಿಕ ಕಾಠ್ಯಕ್ರಮ, ಸಾಮೂಹಿಕ ವಿವಾಹಗಳು ಸೇರಿದಂತೆ ಧಾರ್ಮಿಕ ಕಾರಗಳು ನಡೆಯುತ್ತವೆ ಎಂದು ತಿಳಿಸಿದ್ದಾರೆ.
ರಾಜ್ಯದ್ಯಾದಂತ ಹೆಸರು ವಾಸಿಯಾದ ಶಿಖರ ತೈಲಾಭಿಷೇಕ ನಡೆಯುವುದು ಉಜ್ಜಯಿನಿ ಪೀಠದ ವಿಶೇಷತೆಯಾಗಿದೆ. ಇದನ್ನು ಕಣ್ಣುಂಬಿಕೊಳ್ಳಲು ರಥೋತ್ಸವಕ್ಕಿಂತ ಹೆಚ್ಚಿನ ಸಂಖ್ಯೆ ತೈಲಾಭೀಷೇಕ ವೀಕ್ಷಣೆಗೆ ಭಕ್ತಾದಿಗಳು ಬರುತ್ತಾರೆ.
ಇದಕ್ಕೆ ಒಂದು ಐತಿಹ್ಯವಿದೆ. ಜರ್ಮಲಿ ಪಾಳೆಗಾರರಿಂದ ತಂದ ತೈಲವನ್ನು ಶ್ರೀ ಮರುಳಸಿದ್ದೇಶ್ವರ ಸ್ವಾಮಿ ಶಿಖರಕ್ಕೆ ಅರ್ಪಿಸಲಾಗುತ್ತದೆ. ನಂತರ ಭಕ್ತಾಧಿಗಳು ತಂದಿರುವ ತೈಲವನ್ನು ಎರೆಯಲಾಗುತ್ತದೆ.
ತೈಲಾಭಿಷೇಕಕ್ಕೆ ಆಗಮಿಸುವ ಭಕ್ತಾದಿಗಳಿಗೆ ಶ್ರೀಮರುಳಸಿದ್ದೇಶ್ವರ ಸ್ವಾಮಿ ಒಳಿತನ್ನುಂಟು ಮಾಡಲಿ, ಈ ವರ್ಷ ಮಳೆ, ಬೆಳೆ ಸಮೃದ್ಧಿಯಾಗಿ ಸಕಲರಿಗೂ ಒಳಿತಾಗಲಿ ಎಂದು ಶ್ರೀಗಳು ಹಾರೈಸಿದರು.
The post ಶ್ರೀ ಮರುಳಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ appeared first on Hai Sandur kannada fortnightly news paper.
]]>The post ಬಿರು ಬಿಸಿಲು ಲೆಕ್ಕಿಸದೆ ಸರತಿ ಸಾಲಿನಲ್ಲಿ ನಿಂತು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದರ್ಶನ ಪಡೆದ ಭಕ್ತರು appeared first on Hai Sandur kannada fortnightly news paper.
]]>ಅಮವಾಸೆ ಪ್ರಯುಕ್ತ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಹಿರೇಮಠದಲ್ಲಿ ಸ್ವಾಮಿಗೆ ರುದ್ರಾಭಿಷೇಕ ಮಹಾಭಿಷೇಕ ಸೇರಿದಂತೆ ವಿವಿಧಪೂಜಾ ಕೈಂಕಾರ್ಯಗಳು ನೆರವೇರಿದವು. ಪೂಜೆಗಳಲ್ಲಿ ಭಕ್ತರು ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.
ಬುಧವಾರ ಅಮವಾಸ್ಯೆ ದಿನ ತಾಲೂಕು ಸೇರಿದಂತೆ ಜಿಲ್ಲೆಯಲ್ಲದೆ, ಅನ್ಯ ಜಿಲ್ಲೆಗಳಿಂದ ಭಕ್ತರು ಆಗಮಿಸಿ ದೇವಸ್ಥಾನದ ಸ್ವಾಮಿಯ ದರ್ಶನ ಪಡೆದರು.
ದೇವಸ್ಥಾನಕ್ಕೆ ಹೋಗುವ ಬಲಭಾಗದಲ್ಲಿ 200 ಮೀಟರ್ ಹಳೆ ಪಟ್ಟಣ ಪಂಚಾಯಿತಿ ವರೆಗೂ ಸರತಿಯಲ್ಲಿ ನಿಂತ ಭಕ್ತರಿಗೆ ನೆರಳಿನ ವಿಷಯವಾಗಿ ಎರಡೂ ಬದಿಗಳಲ್ಲಿ ಶಾಮಿಯಾನ ವ್ಯವಸ್ಥೆಯನ್ನು ದೇವಸ್ಥಾನದ ದತ್ತಿ ಇಲಾಖೆಯವರು ಮಾಡಲಾಗಿತ್ತು.
ದರ್ಶನದ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಶ್ರೀ ಸ್ವಾಮಿಯ ಪ್ರಸಾದ ಸ್ವೀಕರಿಸಿ ಭಕ್ತಿಯಿಂದ ನಮಿಸಿದರು.
ವರದಿ: ಶಿವರಾಜ್ ಕನ್ನಡಿಗ
The post ಬಿರು ಬಿಸಿಲು ಲೆಕ್ಕಿಸದೆ ಸರತಿ ಸಾಲಿನಲ್ಲಿ ನಿಂತು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದರ್ಶನ ಪಡೆದ ಭಕ್ತರು appeared first on Hai Sandur kannada fortnightly news paper.
]]>The post ವಿಜಯನಗರ ಜಿಲ್ಲಾ ವಕೀಲರ ಸಂಘದಿಂದ ಮತದಾನ ಜಾಗೃತಿ, appeared first on Hai Sandur kannada fortnightly news paper.
]]>ಕಾರ್ಯಕ್ರಮವನ್ನು ಉದ್ದೇಶಿಸಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪಿ. ಶ್ರೀನಿವಾಸ್ ಮೂರ್ತಿ ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರತಿಯೊಬ್ಬರು ಬಿಸಿಲು ಎನ್ನದೆ ತಪ್ಪದೆ ಮತದಾನ ಮಾಡಿ. ನಮ್ಮ ಹಕ್ಕನ್ನು ಚಲಾಯಿಸಬೇಕೆಂದು ನಾವೆಲ್ಲರೂ ಭಾರತದ ಸಂವಿಧಾನ ಅಡಿಯಲ್ಲಿ ಒಂದಾಗಿ ಬಾಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರು ಕೆ.ಪ್ರಹ್ಲಾದ್ ಹಾಗೂ ಉಪಾಧ್ಯಕ್ಷರು ಹೆಚ್ ಎಂ.ಮಂಜುನಾಥ್ ಹಾಗೂ ಪ್ರಚಾರದಲ್ಲಿ ಎಲ್ಲಾ ಸರ್ವ ಸದಸ್ಯರು ಭಾಗಿಯಾಗಿದ್ದರು.
The post ವಿಜಯನಗರ ಜಿಲ್ಲಾ ವಕೀಲರ ಸಂಘದಿಂದ ಮತದಾನ ಜಾಗೃತಿ, appeared first on Hai Sandur kannada fortnightly news paper.
]]>The post ಶ್ರೀ ರಾಮುಲು ಗೆಲುವಿಗಾಗಿ ಉರುಳು ಸೇವೆ..! appeared first on Hai Sandur kannada fortnightly news paper.
]]>ಇದೇ ರೀತಿಯಾಗಿ 2014 ರಲ್ಲಿಯೂ ಸಹ ಉರುಳು ಸೇವೆ ಮಾಡಿದ್ದರು
ಆಗ ಶ್ರೀ ರಾಮುಲು ರವರು ಲಕ್ಷಾಂತರ ಮತಗಳಿಂದ ಜಯಗಳಿಸಿದ್ದರು
ಈ ಬಾರಿಯೂ ಸಹ ಶ್ರೀ ರಾಮುಲು ಅಣ್ಣನವರು ಸುಮಾರು 2 ಲಕ್ಷದ ಮತಗಳ ಅಂತರದಿಂದ ಜಯಗಳಿಸಬೇಕೆಂದು ಊರಿನ ಯುವ ಕಾರ್ಯಕರ್ತರು ಹಾರೈಸಿದರು.
ಈ ಸಂದರ್ಭದಲ್ಲಿ ಊರಿನ ಹಿರಿಯ ಮುಖಂಡರಾದ ಜೆ.ಎನ್. ಕೋದಂಡರಾಮು, ಜಿ.ಬೋರಯ್ಯ, ಬಿ.ಓಬಣ್ಣ, ಗೌಡ್ರುಬೊಮ್ಮಲಿಂಗಪ್ಪ, ಮೂಲೆ ಮನೆ ಈರಣ್ಣ, ಎಚ್. ಬಿ. ಶ್ರೀಕಾಂತ್, ಎಚ್.ಬಿ.ನಾಗರಾಜ್,
ಎಚ್.ಎಂ. ಬಸಣ್ಣ, ಎಚ್.ಮಹಾಂತೇಶ್ ಹಾಗೂ ಶ್ರೀರಾಮುಲು ಅಭಿಮಾನಿಗಳು ಭಾಗವಹಿಸಿದ್ದರು.
The post ಶ್ರೀ ರಾಮುಲು ಗೆಲುವಿಗಾಗಿ ಉರುಳು ಸೇವೆ..! appeared first on Hai Sandur kannada fortnightly news paper.
]]>The post ಕೊಟ್ಟೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸದಸ್ಯತ್ವಕ್ಕೆ 12 ಜನ ರಾಜೀನಾಮೆ appeared first on Hai Sandur kannada fortnightly news paper.
]]>ಕೊಟ್ಟೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವವನ್ನು ಹೊಂದಿದ್ದು, ಸಕ್ರಿಯವಾಗಿ ಪತ್ರಿಕಾ ವರದಿ ಕಾರ್ಯಚಟುವಟಿಕೆಯಲ್ಲಿ ತೊಡಿಗಿಕೊಂಡಿರುತ್ತೇವೆ. ಇತ್ತೀಚೆಗೆ ಸುಳ್ಳು, ಸುದ್ದಿಗಳಿಗೆ ಮತ್ತು ಹಿರಿಯ ಪ್ರಭಾವಿ ಪತ್ರಿಕಾ ವರದಿಗಾರರ ಪ್ರಭಾವಕ್ಕೆ ಒಳಗಾಗಿ ಏಕ ಪಕ್ಷಿಯವಾಗಿ ಮತ್ತು ದುರುದ್ದೇಶ ಪೂರ್ವಕವಾಗಿ ಈ ಹಿಂದೆ ಇದ್ದ ಅಧ್ಯಕ್ಷರನ್ನು ಅಧ್ಯಕ್ಷ ಸ್ಥಾನದಿಂದ ಅವರ ಸದಸ್ಯತ್ವವನ್ನು ತಡೆಹಿಡಿಯಲಾಗಿರುತ್ತದೆ. ಆದರೆ ಈ ವಿಷಯವನ್ನು ತಾಲೂಕು ಕಾರ್ಯನಿರತ ಪತ್ರಕರ್ತರ
ಸಂಘದಲ್ಲಿ ಚರ್ಚಿಸಬೇಕಾಗಿದ್ದು, ಸಭೆಯ ನಡವಳಿಯ ನಿಯಮಗಳಾಗಿರುತ್ತದೆ.
ಇದ್ಯಾವುದನ್ನು ಮಾಡದೇ ಸಂಘದ ಕೇಲವು ವರದಿಗಾರರು ತಾವೇ ಏಕಪಕ್ಷಿಯವಾಗಿ ನಿರ್ಧಾರ ತೆಗೆದುಕೊಂಡು ಈ ದಿನ ದಿನಾಂಕ: 25.04.2024 ರಂದು ನೂತನ ಅಧ್ಯಕ್ಷರ ಆಯ್ಕೆಯ ಸಭೆ ಕರೆದಿರುವುದು ಅಸಂಭದ್ದವಾಗಿರುತ್ತದೆ. ಏಕೆಂದರೆ ಈಗಾಗಲೇ ಹಿಂದಿನ ಅಧ್ಯಕ್ಷರ ಮೇಲಿದ್ದ ಸುಳ್ಳ ಆರೋಪದ ಪ್ರಕರಣಕ್ಕೆ ಮಾನ್ಯ ಸರ್ವೋಚ್ಚ ನ್ಯಾಯಾಲಯ ಧಾರವಾಡ ಇವರಿಂದ ತಡೆಯಾಜ್ಞೆ ಜಾರಿಯಾಗಿರುತ್ತದೆ. ಕೆಲವು ಕ್ರಿಮಿನಲ್ ಹಿನ್ನೆಲೆ ಹೊಂದಿದ ಮತ್ತು ಕೊಟ್ಟೂರು ಹಾಗೂ ವಿಜಯನಗರ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾತಿ ಹೊಂದಿರುವ ಹಿರಿಯ ಮತ್ತು ಕಿರಿಯ ಪತ್ರಕರ್ತರು ಇವರ ಪ್ರಕರಣಗಳನ್ನು ಪರಿಗಣೀಸದೇ, ಕೊಟ್ಟೂರು ತಾಲೂಕು ಅಧ್ಯಕ್ಷರ ಬಗ್ಗೆ ದುರುದ್ದೇಶದಿಂದ ರಾಜ್ಯಧ್ಯಕ್ಷರಿಗೆ ಸುಳ್ಳು ಆರೋಪ ಮಾಡಿರುವ ಲಿಖಿತ ಹೇಳಿಕೆಯನ್ನು ಪರಿಗಣಿಸದೇ ಸಂಬಂಧಿಸಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಥವಾ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸಂಘದ ಸಭೆ ಕರೆದು ಚರ್ಚಿಸಿ ನಿರ್ಣಯಸಿಸಬೇಕಾಗಿರುವುದನ್ನು ಬಿಟ್ಟು ಏಕ-ಏಕಿಯಾಗಿ ಈ ದಿನ ಸಭೆ ಕರೆದು ಅಧ್ಯಕ್ಷರ ಆಯ್ಕೆ ಮಾಡಲು ಹೊರಟಿರುವುದು ಮತ್ತು ದಲಿತ ಪತ್ರಕರ್ತರು ಅಧ್ಯಕ್ಷರ ಸ್ಥಾನದಲ್ಲಿ ಮುಂದುವರೆಯುವುದನ್ನು ಸಹಿಸದೇ ಕೇಲವು ಜಾತಿವಾದಿಗಳ ನಡವಳಿಕೆಯು ನಮ್ಮೆಲ್ಲರಿಗೂ ಅಸಮಾಧಾನವಾಗಿದ್ದು, ಇದಕ್ಕೆ ನಮ್ಮಗಳ ಒಪ್ಪಿಗೆ ಇರುವುದಿಲ್ಲ.
ಕಾರಣ ಈ ಹಿಂದೆ ಇದ್ದ, ಅಧ್ಯಕ್ಷರ ಮೇಲಿನ ಸುಳ್ಳು ಆರೋಪ ಅಥವಾ ಸುಳ್ಳು ಹೇಳಿಕೆಗಳನ್ನು ತಳ್ಳಿ ಹಾಕಿದ್ದೇವೆ, ಹಾಲಿ ಅವರೇ ಮುಂದುವರೆಯಬೇಕೆಂದು ಇಚ್ಚೆ ಮನೋಭಾವದಿಂದ ನಾವುಗಳು ಈ ದಿನ ಸ್ವ-ಇಚ್ಛೆಯಿಂದ ಸದರಿ ಸಭೆಯನ್ನು ಬಹಿಷ್ಕರಿಸಿ ಸಂಘದ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೋಹಿಕವಾಗಿ ಜಿಲ್ಲಾಧ್ಯಕ್ಷರಿಗೆ ರಾಜೀನಾಮೆಯನ್ನು ನೀಡಿದ್ದಾವೆ. ಕೆ.ಕೊಟ್ರೇಶ ಅಧ್ಯಕ್ಷರು ,ಡಿ.ಸಿದ್ದಪ್ಪ ಉಪಾಧ್ಯಕ್ಷರು, ಎಸ್.ಪ್ರಕಾಶ ಖಜಾಂಚಿ, ಶಿರಿಬಿ ಕೊಟ್ರೇಶ, ಕೆ.ಎಂ.ಚಂದ್ರಶೇಖರ, ಎಚ್. ವಿಜಯ್ ಕುಮಾರ್, ಸುವೇಭ್ ವಲಿ ಕೆ., ವೈ.ಹರ್ಷವರ್ಧನ, ತಗ್ಗಿನಕೇರಿ ಕೊಟ್ರೇಶ, ಎಸ್.ಪರಶುರಾಮ, ಬಿ.ಕೊಟ್ರೇಶ, ಹೆಚ್.ದಾದಪೀರ, ಪತ್ರಿಕೆಗೆ ತಿಳಿಸಿದರು.
ವರದಿ: ಶಿವರಾಜ್ ಕನ್ನಡಿಗ
The post ಕೊಟ್ಟೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸದಸ್ಯತ್ವಕ್ಕೆ 12 ಜನ ರಾಜೀನಾಮೆ appeared first on Hai Sandur kannada fortnightly news paper.
]]>The post ಪಶುಪಾಲನೆ ಮಾಡದಿದ್ದರೆ ಪಶುಗಳನ್ನು ಸಾಕಬೇಡಿ appeared first on Hai Sandur kannada fortnightly news paper.
]]>ಅವರು ಪುರಸಭೆ ಬಸ್ ನಿಲ್ದಾಣದ ಅವರಣದ ಅಪೋಲೋ ಔಷಧಿ ಅಂಗಡಿಯ ಹತ್ತಿರ ಹಸುವಿನ ಕರು ಬಳಲುತ್ತಿದ್ದ ಸಮಯದಲ್ಲಿ ಕರವೇ ಶಿವರಾಮೇಗೌಡ ಬಣದ ತಾಲೂಕು ಅಧ್ಯಕ್ಷರಾದ ರಾಜು ಪಾಳೇಗಾರ್ ಹಸುವಿನ ಮರಿಯ ನರಳಾಟ ನೋಡದೇ ತಕ್ಷಣವೆ ಪಶುವೈದ್ಯಾಧಿಕಾರಿಗಳಿಗೆ ದೂರವಾಣಿ ಕರೆಮಾಡಿ ವಿಷಯ ತಿಳಿಸಿದಾಗ ಕೂಡಲೇ ಸ್ಪಂದಿಸಿದ ಪಶುವೈದ್ಯಾಧಿಕಾರಿ ವಲಿಭಾಷಾರವರೊಂದಿಗೆ ವಿಜಯಮಹಾಂತೆಶ್, ಭಾಗ್ಯ ಶ್ರೀ, ಕರುವಿನ ರಕ್ಷಣೆಗೆ ಮುಂದಾಗಿ ಆರೈಕೆ ಮಾಡಿ ಕರುವಿಗೆ ಉತ್ತಮ ಶುಶ್ರುಷೆ ಮಾಡಿ ಕರುವು ಚೇತರಿಸಿಕೊಳ್ಳುವಂತೆ ಮಾಡಿದರು. ಈ.ಕೀರ್ತಿ ಪಿ. ರಾಜು ಪಾಳೇಗಾರ್ ಅವರಿಗೆ ಸಲ್ಲಬೇಕಾಗುತ್ತದೆ.
ನಡೆದಿದ್ದೇನು:- ಬೆಳಗಿನ ಜಾವ 4.30 ನಿ. ಕೆ.ಇ.ಬಿ. ವೃತ್ತದ ಬಳಿ ಹಸುವಿನ ಮರಿ ತಿರುಗಾಡುತ್ತಿರುವ ಸಂದರ್ಭದಲ್ಲಿ ಬೀದಿ ನಾಯಿಗಳು ಹಸುವಿನ ಮರಿಯನ್ನು ಕಚ್ಚಿ ಗಾಯಗೊಳಿಸಿತು. ತದನಂತರ ಕೆ.ಇ.ಬಿ. ವೃತ್ತದ ಬಳಿ ಇರುವ ಹೋಟಲ್ ಮಾಲೀಕರೊಬ್ಬರು ಅರಿಷಿಣ ಪುಡಿ ಹಚ್ಚಿ ರಕ್ಷಣೆಯೇನ್ನು ನೀಡಿ ಪಶುವೈಧ್ಯಧಾಕಾರಿಗಳ ಕಛೇರಿಗೆ ಕರೆದಯೋದ್ದು ಅಲ್ಲಿ ವೈದ್ಯರು ಚಿಕಿತ್ಸೆ ನೀಡಿ ಕಳುಹಿಸಿದರು. ಅದು ಫಲಕಾರಿಯಾಗದೇ ಪುರಸಭೆ ಬಸ್ ನಿಲ್ದಾಣದ ಸ್ವಾಸ್ಥ್ಯ ಕಳೆದುಕೊಂಡಿತ್ತು. ಅಸ್ವಸ್ಥ ಗೊಂಡ ಹಸುವಿನ ಮರಿಯನ್ನು ಮತ್ತೋಮ್ಮೆ ಚಿಕಿತ್ಸೆ ನೀಡಿ ಫಲಕಾರಿಯಾಗುವಂತೆ ಮಾಡಿ ಹಸುವಿನ ಮರಿಗೆ ಉತ್ತಮ ಚಿಕಿತ್ಸೆ ನೀಡಿ ಚೇತರಿಸಿಕೊಳ್ಳುವಂತೆ ಮಾಡಿದರು.
The post ಪಶುಪಾಲನೆ ಮಾಡದಿದ್ದರೆ ಪಶುಗಳನ್ನು ಸಾಕಬೇಡಿ appeared first on Hai Sandur kannada fortnightly news paper.
]]>