The post ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಬಿ-ಗ್ರೇಡ್) ಹುದ್ದೆ ಉನ್ನತಿಕರಣ ಸಂಘ (ರಿ)ಬೆಂಗಳೂರು ವತಿಯಿಂದ “ಸಚಿವರಿಗೊಂದು ಪತ್ರ ಅಭಿಯಾನ” (15.02.2024 ರಿಂದ 20.02.2024 ವರೆಗೂ) appeared first on Hai Sandur kannada fortnightly news paper.
]]>ರಾಜ್ಯದಲ್ಲಿ 6021 ಗ್ರಾಮ ಪಂಚಾಯಿತಿಗಳಿದ್ದು, ಒಟ್ಟು 6021 ಪಂಚಾಯತ್ ಅಭಿವೃದ್ಧಿ ಹುದ್ದೆಗಳು ಮಂಜೂರಾತಿಯಾಗಿರುತ್ತವೆ. ಇವುಗಳಲ್ಲಿ 660 ಹುದ್ದೆಗಳು ಖಾಲಿ ಇದ್ದು, ಎಲ್ಲಾ ಹುದ್ದೆಗಳನ್ನು ಏಕಕಾಲದಲ್ಲಿ “ಬಿ-ಗ್ರೇಡ್ ಹುದ್ದೆಗೆ” ಉನ್ನತಿಕರಿಸಬೇಕೆಂದು ಕಳೆದ 13 ವರ್ಷಗಳಿಂದ ಸರ್ಕಾರಕ್ಕೆ ರಾಜ್ಯದ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಮನವಿ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಇದುವರೆಗೂ ಬೇಡಿಕೆ ಮಾತ್ರ ಈಡೇರಿರುವುದಿಲ್ಲ.
ಪ್ರತಿಯೊಂದು ಗ್ರಾಮ ಪಂಚಾಯಿತಿಗಳು ಮನರೇಗಾ, ಸ್ವಚ್ಛಭಾರತ್ ಮೀಷನ್, ವಸತಿ ಯೋಜನೆ ಸೇರಿದಂತೆ ಹತ್ತಾರು ಯೋಜನೆಗಳನ್ನು ಅನುಷ್ಠಾನ ಮಾಡುವ ಹೊಣೆಗಾರಿಕೆ ಹೊಂದಿವೆ ಹಾಗೂ ರಾಜ್ಯದ 43 ಇಲಾಖೆಗಳ ಪೈಕಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಸರಿಸಮಾನ ಇರುವ ಇತರೆ ಯಾವುದೇ ಇಲಾಖೆಯ ಹುದ್ದೆಗೆ ಈ ಪ್ರಮಾಣದ ಯೋಜನೆಗಳ ಅನುಷ್ಠಾನಕ್ಕೆ ಹಣ ಬಟವಾಡೆ ಮಾಡುವ ಅಧಿಕಾರ ನೀಡಲಾಗಿರುವುದಿಲ್ಲ. ಹಾಗೂ ಪ್ರತಿಯೊಬ್ಬ ಪಂಚಾಯತ್ ಅಭಿವೃದ್ಧಿ ಅಧಿಕಾರಿಯು ತನ್ನ ಸಹಿ ಬಳಸಿ ಕೋಟಿ ಕೋಟಿಗೂ ಹಣವನ್ನು ಯೋಜನೆಗಳಿಗೆ ಬಟವಾಡೆ ಮಾಡಬೇಕಿದೆ.
ಸಂವಿಧಾನದ 73ನೇ ತಿದ್ದುಪಡಿಯ ಮೂಲಕ ಸ್ಥಳೀಯ ಸರ್ಕಾರಗಳಿಗೆ ಅಧಿಕಾರ ನೀಡಲಾಗಿದ್ದು, ಅಧಿಕಾರ ವಿಕೇಂದ್ರಿಕರಣ ತತ್ವದಡಿಯಲ್ಲಿ ರಾಜ್ಯದ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗಳನ್ನು ಏಕಕಾಲದಲ್ಲಿ ಯಾವುದೇ ಆರ್ಥಿಕ ನಷ್ಟವಿಲ್ಲದಂತೆ ಉನ್ನತಿಕರಿಸಲು ಅವಕಾಶವಿದೆ. ಹುದ್ದೆ ಉನ್ನತಿಕರಣದಿಂದ ಇತರೆ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಲು, ಯೋಜನೆಗಳ ಸಮಪರ್ಕವಾಗಿ ಅನುಷ್ಠಾನಗೊಳಿಸಲು ಹಾಗೂ ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಅವಕಾಶ ದೊರೆಯುತ್ತದೆ.
ಈ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ “ಬಿ- ಗ್ರೇಡ್ ಹುದ್ದೆ ಉನ್ನತೀಕರಣ ಸಂಘದ ವತಿಯಿಂದ “ಸಚಿವರಿಗೊಂದು ಪತ್ರ” ಅಭಿಯಾನ ಕಾರ್ಯಕ್ರಮವನ್ನು ಇದೇ ಫೆಬ್ರುವರಿ 15 ರಿಂದ 20ರವರೆಗೂ ನಡೆಸಲಾಗುತ್ತಿದ್ದು. 50 ಪೈಸೆ ಅಂಚೆ ಕಾರ್ಡನಲ್ಲಿ ರಾಜ್ಯದ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ತಮ್ಮ ಹೆಸರು ಮತ್ತು ಗ್ರಾ.ಪಂ.ಹೆಸರನ್ನು ಒಳಗೊಂಡ ಮಾಹಿತಿಯೊಂದಿಗೆ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ಬಿ-ಗ್ರೇಡ್ ನಿವೇಧನೆಯನ್ನು ಬರಹ ಅಥವಾ ಮುದ್ರಿತ ರೂಪದಲ್ಲಿ ತಯಾರಿಸಿ ಸಂಬಂಧಿಸಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯವರಿಗೆ ನಿಗಧಿತ ದಿನಾಂಕದೊಳಗೆ ಸಲ್ಲಿಸುವುದು ನಂತರ ಜಿಲ್ಲಾವಾರು ದಿನಾಂಕ: 21.02.2024ರಂದು ಮಾನ್ಯ ಗೌರವಾನ್ವಿತ ಸಚಿವರಿಗೆ ಪತ್ರ ಕಳುಹಿಸುವ ಮೂಲಕ ಅಭಿಯಾನ ಮುಕ್ತಾಯಗೊಳ್ಳತ್ತದೆ.
The post ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಬಿ-ಗ್ರೇಡ್) ಹುದ್ದೆ ಉನ್ನತಿಕರಣ ಸಂಘ (ರಿ)ಬೆಂಗಳೂರು ವತಿಯಿಂದ “ಸಚಿವರಿಗೊಂದು ಪತ್ರ ಅಭಿಯಾನ” (15.02.2024 ರಿಂದ 20.02.2024 ವರೆಗೂ) appeared first on Hai Sandur kannada fortnightly news paper.
]]>The post ಎಚ್ಚೆತ್ತ ಸರ್ಕಾರ : ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಬಳಕೆಗೆ ಕ್ರಮ appeared first on Hai Sandur kannada fortnightly news paper.
]]>ಗೃಹ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬಿಬಿಎಂಪಿಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ವಾಣಿಜ್ಯ ಮಳಿಗೆಗಳು ಹಾಗೂ ವ್ಯಾಪಾರೋದ್ಯಮಗಳಲ್ಲಿ ಕನ್ನಡ ಭಾಷಾ ನಾಮಫಲಕವನ್ನು ಅಳವಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡರ ನೇತೃತ್ವದಲ್ಲಿ ಬೆಂಗಳೂರಿನಾದ್ಯಂತ ಬೃಹತ್ ಪ್ರತಿಭಟನೆಗಳಾಗಿವೆ. ಈ ವೇಳೆ ಹಲವಾರು ಆಸ್ತಿಪಾಸ್ತಿಗೂ ಧಕ್ಕೆಯಾಗಿದೆ.
ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಾಗ ನಾರಾಯಣಗೌಡ ಹಾಗೂ ಅವರ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಇದು ಮತ್ತಷ್ಟು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಕನ್ನಡ ಸಂಘಟನೆಗಳನ್ನು ಕೆಣಕಿದಂತಾಗಿದೆ. ಹೋರಾಟ ತೀವ್ರ ಸ್ವರೂಪಕ್ಕೆ ತಿರುಗುವುದರ ಮುನ್ಸೂಚನೆ ಪಡೆದ ಮುಖ್ಯಮಂತ್ರಿಯವರು ಇಂದು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಕನ್ನಡ ಸಂಘಟನೆಗಳ ಹೋರಾಟದ ವಿಷಯದಲ್ಲಿ ಸಹನೆಯಿಂದ ವರ್ತಿಸುವಂತೆ ಸಭೆಯಲ್ಲಿ ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಿನ್ನೆ ನಡೆದ ಪ್ರತಿಭಟನೆಯಲ್ಲಿ ಪೊಲೀಸರೊಂದಿಗೆ ಸಂಘರ್ಷಗಳಾಗಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಿಸಿತ್ತು. ಈ ಹಿನ್ನೆಲೆಯಲ್ಲಿ ಅಗತ್ಯವಿದ್ದರೆ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಿಕೊಂಡು ಬಿಗಿ ಕ್ರಮಗಳನ್ನು ಕೈಗೊಳ್ಳಬೇಕು. ಅನಗತ್ಯವಾದ ಬಲಪ್ರಯೋಗಕ್ಕೆ ಅವಕಾಶ ನೀಡಬಾರದು. ಕನ್ನಡಪರ ಸಂಘಟನೆಗಳ ಕಾರ್ಯಕರ್ತರ ಜೊತೆ ಸಹನೆಯಿಂದ ವರ್ತಿಸಬೇಕು ಎಂದು ಪೊಲೀಸರು ಸೂಚಿಸಿರುವುದಾಗಿ ತಿಳಿದುಬಂದಿದೆ.
ಕನ್ನಡ ನಾಮಫಲಕಗಳನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಆದೇಶವನ್ನು ಜಾರಿಗೊಳಿಸಲು ಬಿಬಿಎಂಪಿ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಅಕಾರಿಗಳು ಕೆಲಸ ಮಾಡಬೇಕು. ವಾಣಿಜ್ಯ ಮತ್ತು ಉದ್ಯಮಗಳಿಗೆ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ನಾಮಫಲಕ ಬದಲಾವಣೆಗೆ ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಳ್ಳಲು ಪ್ರೇರೇಪಿಸಬೇಕು ಎಂದು ಸಲಹೆ ನೀಡಿದ್ದಾರೆ.
The post ಎಚ್ಚೆತ್ತ ಸರ್ಕಾರ : ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಬಳಕೆಗೆ ಕ್ರಮ appeared first on Hai Sandur kannada fortnightly news paper.
]]>The post ಅಸಾಧಾರಣ ಸಾಧನೆ ಮಾಡಿದ ಮೋಹನ್ ದಾನಪ್ಪರ ಕಾರ್ಯ ಅಭಿನಂದನಾರ್ಹ- ಸಚಿವ ರಹಿಂ ಖಾನ್ appeared first on Hai Sandur kannada fortnightly news paper.
]]>ಸಚಿವ ರಹೀಂ ಖಾನ್ ರವರ ಪತ್ರದಲ್ಲಿ “ಕಲ್ಯಾಣ ಕರ್ನಾಟಕ ಭಾಗದ ಬಳ್ಳಾರಿ ಜಿಲ್ಲೆಯ ಕಂಪ್ಲಿ ನಗರ ನಿವಾಸಿ ಕರ್ನಾಟಕ ಉಚ್ಛ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಮೋಹನ್ ಕುಮಾರ್ ದಾನಪ್ಪರವರು 77 ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು 24 ನೇ ಕಾರ್ಗಿಲ್ ವಿಜಯ ದಿವಸ ಅಂಗವಾಗಿ ಆಗಸ್ಟ್ 15, 2023 ರಂದು ಕೇಂದ್ರಾಡಳಿತ ಪ್ರದೇಶ ಲಡಾಖ್ ನ ಕಾರ್ಗಿಲ್ ನಗರದಲ್ಲಿ “ಸಲಾಂ ಸೋಲ್ಮರ್ಸ್” ಶೀರ್ಷಿಕೆಯಡಿಯಲ್ಲಿ ” ಯುವಕರೇ ದೇಶ ಸೇವೆಗೆ ಒಂದಾಗಿ, ಸೇನೆ ಸೇರಲು ಮುಂದಾಗಿ” ಎನ್ನುವ ವಾಕ್ಯದಡಿಯಲ್ಲಿ ಯುವಕರು ದೇಶ ಸೇವೆಗೆ ಸೇರುವ ಬಗ್ಗೆ ಜಾಗೃತಿಗಾಗಿ ಕಾರ್ಗಿಲ್ ನಗರದಿಂದ ಕಾರ್ಗಿಲ್ ಯುದ್ಧ ಸ್ಮಾರಕದವರೆಗೆ ಬಲಗೈನಲ್ಲಿ ರಾಷ್ಟ್ರಧ್ವಜ ಹಿಡಿದು ನಿರಂತರ 5 ಗಂಟೆಗಳ ಕಾಲ 42 ಕಿಲೋ ಮೀಟರ್ ನಷ್ಟು ಉದ್ದದಷ್ಟು ಆಮ್ಲಜನಕ ಕಡಿಮೆಯಿರುವ ಮತ್ತು ಸಮುದ್ರ ಮಟ್ಟಕ್ಕಿಂತ 10.800 ಅಡಿ ಮೇಲಿರುವ ಪ್ರದೇಶದಲ್ಲಿ ಓಡುವ ಮೂಲಕ ಅಸಾಧಾರಣ ಸಾಧನೆ ಮಾಡಿರುವ ತಮಗೆ ಅಭಿನಂದಿಸಲಾಗಿದೆ.
ಸರ್ಕಾರಿ ಸೇವೆಯಲ್ಲಿರುವ ತಾವು ಸೇವೆಯೊಂದಿಗೆ ಸಾಮಾಜಿಕ ಸಮಸ್ಯೆಗಳ ಬಗ್ಗೆ ಕ್ರೀಡೆಯ ಮೂಲಕ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ,
ತಮ್ಮ ಈ ಕಾರ್ಯ ಮತ್ತು ಸಾಧನೆ ತಮ್ಮ ದೇಶ ಪ್ರೇಮವನ್ನು ಎತ್ತಿ ತೋರಿಸುತ್ತಿದೆ, ತಮ್ಮ ಈ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್, ಏಷ್ಯಾ ಬುಕ್ ಆಫ್ ರೆಕಾರ್ಡ್, ಬ್ರಾವೊ ಇಂಟರ್ನ್ಯಾಷನಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಹಾರ್ವಡ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲೆಯಾಗಿ ಸೇರಿರುವುದು ದೇಶಕ್ಕೆ ಮತ್ತು ರಾಜ್ಯಕ್ಕೆ, ಹಮ್ಮೆಯ ವಿಷಯವಾಗಿರುತ್ತದಲ್ಲದ ಕಲ್ಯಾಣ ಕರ್ನಾಟಕಕ್ಕೆ, ಗರ್ವ ಪಡುವಂತ ಸಂಗತಿಯಾಗಿದೆ,
ಮುಂದುವರೆದು, ಇಂತಹ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿರುವುದು ಸಂತಸ ತಂದಿದೆ ಮುಂದಿನ ದಿನಗಳಲ್ಲಿ ತಾವು ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರಾಜ್ಯದ ಕೀರ್ತಿ ಇನ್ನಷ್ಟು ಎತ್ತರಕ್ಕೆ ಏರುವಂತಾಗಲಿ ಎಂದು ಸಚಿವ ರಹೀಂ ಖಾನ್ ಹಾರೈಸಿ ಅಭಿನಂದಿಸಿದ್ದಾರೆ.
The post ಅಸಾಧಾರಣ ಸಾಧನೆ ಮಾಡಿದ ಮೋಹನ್ ದಾನಪ್ಪರ ಕಾರ್ಯ ಅಭಿನಂದನಾರ್ಹ- ಸಚಿವ ರಹಿಂ ಖಾನ್ appeared first on Hai Sandur kannada fortnightly news paper.
]]>The post ಅನುಬಂಧ: 01ರ ಲೆಕ್ಕ ಪರಿಶೋಧನೆಗಳಿಂದ ರಾಜ್ಯದ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಅನುಭವಿಸುವತ್ತಿರುವ ಸಮಸ್ಯೆಗಳು:- appeared first on Hai Sandur kannada fortnightly news paper.
]]>■ಗ್ರಾಮ ಪಂಚಾಯಿತಿಯಲ್ಲಿ ಸರಾಸರಿ ಇಬ್ಬರು ಸರ್ಕಾರಿ ನೌಕರರು ಪ್ರಸ್ತುತ ಕೆಲಸ ಮಾಡುತ್ತಿದ್ದು, ಮನರೇಗಾ ಅನುದಾನ, ಹಾಗೂ 15ನೇ ಹಣಕಾಸು ಅನುದಾನಗಳು, ಸೇರಿ ಸರಾಸರಿ 02 ಕೊಟಿಗಿಂತ ಹೆಚ್ಚಿನ ಅನದಾನ ನಿರ್ವಹಿಸಲಾಗುತ್ತಿದೆ, ಇದರಿಂದಾಗಿ ಈ ಎರಡು ಯೋಜನೆಗಳ ಹಣ ಸ್ವೀಕೃತಿ ಮತ್ತು ವೆಚ್ಛದ ದಾಖಲೆಗಳನ್ನು ಹೊಂದಿಸುವುದೇ ಕಷ್ಟವಾಗಿದೆ.
■ಅನುಬಂಧ 01ರಲ್ಲಿನ ಪ್ರತಿ ಅಡಿಟ್ ವರದಿಗಳು ಭಿನ್ನ-ಭಿನ್ನ ಅಭಿಪ್ರಾಯಗಳಿಂದ ಕೂಡಿದ್ದು, ಇವುಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಪಡೆದು ಪಿಡಿಒ ಅವರನ್ನು ಬ್ಲಾಕ್ ಮೇಲ್ ಮಾಡುತ್ತಿರುವವರ ಸಂಖ್ಯೆ ದಿನೆ-ದಿನೆ ರಾಜ್ಯದಲ್ಲಿ ಹೆಚ್ಚುತ್ತಿದೆ.
■ಪ್ರತಿ ಅಡಿಟ್ ಮುಕ್ತಾಯವಾದ ಮೇಲೆ ಇರುವ ಸಿಬ್ಬಂದಿಗಳನ್ನೇ ಬಳಸಿಕೊಂಡು ಅನುಪಾಲನ ವರದಿಗಳನ್ನು ತಯಾರಿಸಿ ವಿವಿಧ ಸಮಿತಿಗಳಿಗೆ ಪಿಡಿಒ ಅವರು ವರದಿ ನೀಡಬೇಕಿದೆ, ಇದರಿಂದ ಪ್ರತಿ ನಿತ್ಯ ಸಾರ್ವಜನಿಕರ ಕೆಲಸ ಜೊತೆಗೆ ಇವುಗಳನ್ನು ನಿಭಾಯಿಸುವುದು ತೀರಾ-ತೀರಾ ಕಷ್ಟದ ಕೆಲಸವಾಗಿದೆ.
ಪ್ರತಿ ಅಡಿಟ್ ವರದಿಗಳು ಭಿನ್ನ-ಭಿನ್ನ ಅಭಿಪ್ರಾಯಗಳಿಂದ ಕೂಡಿದ್ದು, ಇವುಗಳಲ್ಲಿ ಲೋಪ ಇರುವ ಅಡಿಟ್ ವರದಿಗಳನ್ನು ಮಾತ್ರ ಆಧಾರಿಸಿ ಪಿಡಿಒ ಅವರ ಮೇಲೆ ಲೋಕಾಯುಕ್ತ ಪ್ರಕರಣಗಳನ್ನು ದಾಖಲಿಸಲಗಿದೆ, ಹಾಗೂ ಇದುವರೆಗೂ 12042 ಕ್ಕೂ ಹೆಚ್ಚು ಪ್ರಕರಣಗಳು ದಾಖಲಿಸಲಾಗಿದೆ, ಇದರೊಂದಿಗೆ ಪ್ರತಿ ವರ್ಷ ಹೊಸದಾಗಿ ನೀಡುವ ಅಡಿಟ್ ವರದಿಗಳನ್ನು ಪಡೆದು ಹೊಸ- ಹೊಸ ಪ್ರಕರಣಗಳನ್ನು ಲೋಕಾಯುಕ್ತದಲ್ಲಿ ದಾಖಲಿಸುತ್ತಿದ್ದಾರೆ, ಇದರಿಂದ ಪಿಡಿಒ ಅವರು ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡುವುದು ದುಸ್ಥರವಾಗಿದೆ.
■ಯಾವುದೇ ಅಡಿಟ್ ಪ್ರಕ್ರಿಯೆ ಮುಕ್ತಾಯವಾದ ನಂತರ, ವರದಿಯಲ್ಲಿ ನೀಡಿರುವ ಲೋಪ ದೋಷಗಳ ಕುರಿತು ಸೂಕ್ತ ಅನುಪಾಲನ ವರದಿ ನೀಡಲು, ವಿವಿಧ ಸಮಿತಿಗಳಿದ್ದರೂ ಇವುಗಳು ಸರಿಯಾಗಿ ಕಾರ್ಯಾನಿರ್ವಹಿಸದೆ ಇರುವ ಕಾರಣ, ಪಿಡಿಒ ಅವರ ಮೇಲೆ ಅಡಿಟ್ ವರದಿ ಆಧಾರಿಸಿ ರಾಜ್ಯದ ಕೆಲ ಸಂಘ-ಸಂಘಟನೆಗಳು, ಅಡಿಟ್ ವರದಿಗಳಿಂದ ಪಿಡಿಒ ಅವರ ಮೇಲೆ ಹಣ ದುರಪಯೋಗವಾಗಿದೆ ಎಂದು ಬಿಂಬಿಸಿ ಪತ್ರಿಕೆ ಹೇಳಿಕೆ ನೀಡುವುದು, ದೂರು ನೀಡುವುದು, ಪ್ರತಿಭಟನೆ ಮಾಡುವ ಮೂಲಕ, ಮಾನಸಿಕವಾಗಿ ಕುಗ್ಗಿಸುವ ಕೆಲಸ ವ್ಯವಸ್ಥಿತವಾಗಿ ನೆಡಸಿದ್ದು, ಇದರಿಂದ ಪಿಡಿಒ ಅವರನ್ನು ವೈಯಕ್ತಿಕವಾಗಿ ತೇಜೊವಧೆ ಮಾಡಲಾಗುತ್ತಿದೆ, ಇದರಿಂದ ರಾಜ್ಯದ ಪಿಡಿಒ ಅವರ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ.
-:ಕೈಗೊಳ್ಳಬಹುದಾದ ಪರಿಹಾರ ಕ್ರಮಗಳು:-
◆ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ನಡೆಯುವ ಎಲ್ಲಾ ಮಾದರಿಯಾ ಅಡಿಟ್ಗಳನ್ನು ಒಗ್ಗೂಡಿಸಿ, ವರ್ಷಕ್ಕೆ ಒಂದೇ ಅಡಿಟ್ ಮಾಡಬೇಕು ಇದಕ್ಕಾಗಿ ಪ್ರತ್ಯಕ ನಿಯಮಗಳನ್ನು ರೂಪಿಸಬೇಕು, ಹಾಗೂ ಏಕಿಕೃತ ಅಡಿಟ್ ವ್ಯವಸ್ಥೆ ಜಾರಿಯಾಗಬೇಕು.
◆ಅಡಿಟ್ ವರದಿ ಆಧಾರಿಸಿ ಲೋಕಾಯುಕ್ತದಲ್ಲಿ ದೂರು ದಾಖಲು ಮಾಡುವ ಕ್ರಮವನ್ನು ಈ ಕೂಡಲೇ ರದ್ದುಗೊಳಿಸಬೇಕು.
◆ಪ್ರತಿ ವರ್ಷ ಅಡಿಟ್ ಕೈಗೊಳ್ಳುವಾಗ ಪ್ರತ್ಯೆಕ ಅಡಿಟ್ ಮಾಹೆಯನ್ನು ಘೋಷಿಸಬೇಕು, ಅದೇ ಮಾಹೆಯಲ್ಲಿ ಅಡಿಟ್ ಕಾರ್ಯ ಮಾಡಬೇಕು.
◆ವಿಶೇಷ ಅಡಿಟ್, ಜಮಾಬಂಧಿ, ಆಂತರಿಕ ಲೆಕ್ಕ ಪರಿಶೋಧನೆ ಸೇರಿದಂತೆ ಎಲ್ಲಾ ಅಡಿಟ್ ಮಾದರಿಗಳನ್ನು ಜರೂರಾಗಿ ರದ್ದುಗೊಳಿಸಬೇಕು.
◆ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ವೆಚ್ಛಗಳ ಮೇಲೆ ನಿರ್ಣಯ ಕೈಗೊಳ್ಳುವುದರಿಂದ, ಹಾಗೂ ಅಧ್ಯಕ್ಷರು ಮತ್ತು ಪಿಡಿಒ ಅವರು ಜಂಟಿ ಸಹಿ ಮೂಲಕ ಗ್ರಾಮ ಪಂಚಾಯಿತಿ ಹಣ ಬಟವಾಡೆ ಮಾಡುವುದರಿಂದ, ಅಡಿಟ್ ವರದಿಯಲ್ಲಿ ಗ್ರಾಮ ಪಂಚಾಯಿತಿ ಎಲ್ಲಾ ಚುನಾಯಿತ ಪ್ರತಿನಿಧಿಗಳನ್ನು ಹೆಸರನ್ನು ದಾಖಲಿಸಬೇಕು.
ಈ ಮೇಲಿನ ಎಲ್ಲಾ ಅಂಶಗಳನ್ನು ಪರಿಶಿಲಿಸಿ ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಅಡಿಟ್ ವ್ಯವಸ್ಥೆಯನ್ನು ಉತ್ತಮವಾಗಿ ಅನುಷ್ಠಾನ ಮಾಡಲು ಅವಕಾಶ ಮಾಡಿಕೊಡಬೇಕೆಂದು “ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ (ಬಿ-ಗ್ರೇಡ್)ಹುದ್ದೆ ಉನ್ನತ್ತಿಕರಣ ಸಂಘ (ರಿ)ಬೆಂಗಳೂರು”ವತಿಯಿಂದ ಗೌರವ ಪೂರ್ವಕವಾಗಿ ಮಾನ್ಯರಲ್ಲಿ ಕೋರಿಕೊಂಡಿದ್ದಾರೆ
The post ಅನುಬಂಧ: 01ರ ಲೆಕ್ಕ ಪರಿಶೋಧನೆಗಳಿಂದ ರಾಜ್ಯದ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಅನುಭವಿಸುವತ್ತಿರುವ ಸಮಸ್ಯೆಗಳು:- appeared first on Hai Sandur kannada fortnightly news paper.
]]>The post ರಾಜ್ಯಪಾಲ ಟಿ.ಸಿ. ಗೆಹ್ಲೋಟ್ ರಿಂದ ಸಿಜಿಸಿ ಮೋಹನ್ ಕುಮಾರ್ ದಾನಪ್ಪನವರಿಗೆ ಪ್ರಶಂಸೆ! appeared first on Hai Sandur kannada fortnightly news paper.
]]>ರಾಜ್ಯಪಾಲರ ಪತ್ರದಲ್ಲಿ ಶ್ರೀ ಮೋಹನ್ ಕುಮಾರ್ ದಾನಪ್ಪ ಅವರು “ಸಲಾಂ ಸೋಲ್ಜರ್ಸ್” ಶೀರ್ಷಿಕೆಯಡಿಯಲ್ಲಿ ಯುವಜನರು ದೇಶ ಸೇವೆಗೆ ಸೇನೆ ಸೇರುವ ಬಗ್ಗೆ ಜಾಗೃತಿಗಾಗಿ “ದೇಶ ಸೇವೆಗೆ ಒಂದಾಗಿ ಸೇನೆ ಸೇರಲು ಮುಂದಾಗಿ” ಎನ್ನುವ ಪರಿಕಲ್ಪನೆಯೊಂದಿಗೆ ದೇಶದ ಜನರಲ್ಲಿ ಜಾಗೃತಿ ಮೂಢಿಸುವ ಸಲುವಾಗಿ ಕಾರ್ಗಿಲ್ ನಗರದಿಂದ ಕಾರ್ಗಿಲ್ ಯುದ್ದ ಸ್ಮಾರಕದವರೆಗೆ ಆಮ್ಲಜನಕ ಕಡಿಮೆಯಿರುವ ಪ್ರದೇಶದಲ್ಲಿ ಸಮುದ್ರ ಮಟ್ಟಕ್ಕಿಂತ 10.800 ಅಡಿ ಮೇಲಿರುವ ಪ್ರದೇಶದಲ್ಲಿ ರಾಷ್ಟ್ರಧ್ವಜ ಹಿಡಿದು 5 ಗಂಟೆಗಳ ಕಾಲ ಮ್ಯಾರಥಾನ್ ನಡೆಸಿರುವುದು ತಿಳಿದು ತುಂಬಾ ಸಂತಸವಾಗಿದೆ,
ಈ ಜಾಗೃತಿ ಮ್ಯಾರಥಾನ್ ಓಟವು ಇಂಡಿಯಾ ಬುಕ್ ಆಫ್ ರೆಕಾರ್ಡ್, ಹಾರ್ವರ್ಡ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಬ್ರಾವೊ ಇಂಟರ್ನ್ಯಾಷನಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್,ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆಯಾಗಿ ಸೇರಿರುವುದು ತಿಳಿದು ನನಗೆ ಸಂತಸವಾಗಿದೆ,
ಈ ಸಂಧರ್ಭದಲ್ಲಿ ನಾನು ಈ ಅವಕಾಶವನ್ನ ಬಳಸಿಕೊಂಡು ಈ ಪತ್ರದ ಮೂಲಕ ನಿಮ್ಮ ಮುಂದಿನ ಪ್ರಯತ್ನಗಳಲ್ಲಿ ಭವ್ಯವಾದ ಯಶಸ್ಸನ್ನು ಕಾಣಲೆಂದು ಬಯಸುತ್ತೇನೆಂದು ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್ ರವರು ತಿಳಿಸಿರುತ್ತಾರೆ
The post ರಾಜ್ಯಪಾಲ ಟಿ.ಸಿ. ಗೆಹ್ಲೋಟ್ ರಿಂದ ಸಿಜಿಸಿ ಮೋಹನ್ ಕುಮಾರ್ ದಾನಪ್ಪನವರಿಗೆ ಪ್ರಶಂಸೆ! appeared first on Hai Sandur kannada fortnightly news paper.
]]>The post ಬ್ರಾವೊ ಇಂಟರ್ ನ್ಯಾಷನಲ್ ವರ್ಲ್ಡ್ ರೆಕಾರ್ಡ್ ಮಾಡಿದ ಮೋಹನ್ ಕುಮಾರ್ ದಾನಪ್ಪ! appeared first on Hai Sandur kannada fortnightly news paper.
]]>ಆಗಸ್ಟ್ 15 ರಂದು ಕೇಂದ್ರಾಡಳಿತ ಪ್ರದೇಶ ಲಡಾಖ್ ನ ಕಾರ್ಗಿಲ್ ನಗರದಿಂದ ಕಾರ್ಗಿಲ್ ಯುದ್ದ ಸ್ಮಾರಕದವರೆಗೆ ಬಲಗೈನಲ್ಲಿ ರಾಷ್ಟ್ರಧ್ವಜ ಹಿಡಿದು ತಡೆರಹಿತವಾಗಿ ನಿರಂತರ 5 ಗಂಟೆಗಳ ಕಾಲಾವಧಿಯಲ್ಲಿ ಸಮುದ್ರ ಮಟ್ಟಕ್ಕಿಂತ 10.800 ಅಡಿ ಎತ್ತರದಲ್ಲಿರುವ ಆಮ್ಲಜನಕ ಕಡಿಮೆಯಿರುವ ಪ್ರದೇಶದಲ್ಲಿ 42 ಕಿಲೋ ಮೀಟರ್ ಓಡುವ ಮೂಲಕ ವಿನೂತನ ಮ್ಯಾರಥಾನ್ ಓಟ ನಡೆಸಿರುವ ಪ್ರಥಮ ವ್ಯಕ್ತಿಯೆಂದು ಪರಿಗಣಿಸಿದ ಬ್ರಾವೊ ಇಂಟರ್ನ್ಯಾಷನಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಸಂಪಾದಕೀಯ ಮಂಡಳಿಯು ಸೆಪ್ಟೆಂಬರ್ 20, 2023 ರಂದು ದಾಖಲೆಗಳನ್ನ ಪರಿಶೀಲಿಸಿ ದೃಢೀಕರಿಸಿ ಆಯ್ಕೆ ಮಾಡಿ ಅನುಮೋದಿಸಿ ಬ್ರಾವೊ ಅಂತರಾಷ್ಟೀಯ ವಿಶ್ವ ದಾಖಲೆ ಪುಸ್ತಕ (ಬ್ರಾವೊ ಇಂಟರ್ನ್ಯಾಷನಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್)ಕ್ಕೆ ಮೋಹನ್ ಕುಮಾರ್ ದಾನಪ್ಪನವರನ್ನ ದಾಖಲೆಗಾರನೆಂದು ಸೇರ್ಪಡಿಸಲಾಗಿದೆ,
ಮೋಹನ್ ಕುಮಾರ್ ದಾನಪ್ಪನವರು ಸದರಿ ಓಟದಲ್ಲಿ ತೋರಿದ ತಾಳ್ಮೆ,ಧೈರ್ಯ ಹಾಗೂ ಪ್ರಯತ್ನ, ಇವರ ಕೌಶಲ್ಯವನ್ನ ಪ್ರಶಂಸಿಸಿ ಅಂಗೀಕರಿಸಲಾಗಿದೆ ಶೀಘ್ರದಲ್ಲೇ ಅಧಿಕೃತ ಪ್ರಮಾಣ ಪತ್ರ, ಪದಕ, ದಾಖಲೆ ಪುಸ್ತಕವನ್ನ ಮೋಹನ್ ಕುಮಾರ್ರವರಿಗೆ ಕಳುಹಿಸಲಾಗುವುದೆಂದು ಸಂಸ್ಥೆಯು ತಿಳಿಸಿದೆ!
The post ಬ್ರಾವೊ ಇಂಟರ್ ನ್ಯಾಷನಲ್ ವರ್ಲ್ಡ್ ರೆಕಾರ್ಡ್ ಮಾಡಿದ ಮೋಹನ್ ಕುಮಾರ್ ದಾನಪ್ಪ! appeared first on Hai Sandur kannada fortnightly news paper.
]]>The post ಕಾರ್ಗಿಲ್ನಲ್ಲಿ ವಿನೂತನ ಮ್ಯಾರಥಾನ್ ಮಾಡಿದ ರಾಜ್ಯದ ಪ್ರಥಮ ವ್ಯಕ್ತಿ ಮೋಹನ್ ಕುಮಾರ್ ದಾನಪ್ಪ- ಸಿಎಂ ಸಿದ್ದರಾಮಯ್ಯ! appeared first on Hai Sandur kannada fortnightly news paper.
]]>ಸಿಎಂ ಸಿದ್ದರಾಮಯ್ಯನವರು ಪತ್ರದಲ್ಲಿ “ಬಳ್ಳಾರಿ ಜಿಲ್ಲೆಯ ಕಂಪ್ಲಿ ನಗರ ನಿವಾಸಿ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿರುವ ಮೋಹನ್ ಕುಮಾರ್ ದಾನಪ್ಪ ಅವರು 77ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು 24ನೇ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಆಗಸ್ಟ್ 15, 2023 ರಂದು ಕಾರ್ಗಿಲ್ ಯುದ್ಧದಲ್ಲಿ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಜೀವ ತ್ಯಾಗ ಮಾಡಿದ ವೀರ ಯೋಧರಿಗೆ ಗೌರವ ನಮನ ಸಲ್ಲಿಸುವ ಅಂಗವಾಗಿ “ಸಲಾಂ ಸೋಲ್ಡರ್ಸ್’ ಶೀರ್ಷಿಕೆಯಡಿ, ಮತ್ತು ದೇಶದ ಯುವ ಜನತೆ ಸೇನೆ ಸೇರುವ ಕುರಿತು ಜಾಗೃತಿ ಮೂಡಿಸಲು “ಯುವಕರೇ ದೇಶ ಸೇವೆಗೆ ಒಂದಾಗಿ, ಸೇನೆ ಸೇರಲು ಮುಂದಾಗಿ” ಎನ್ನುವ ಪರಿಕಲ್ಪನೆಯಡಿಯಲ್ಲಿ ಕೇಂದ್ರಾಡಳಿತ ಪ್ರದೇಶ ಲಡಾಖ್ ರಾಜ್ಯದ ಕಾರ್ಗಿಲ್ನಲ್ಲಿ ಕಾರ್ಗಿಲ್ ನಗರದಿಂದ ಕಾರ್ಗಿಲ್ ಯುದ್ಧ ಸ್ಮಾರಕದವರೆಗೆ ಸತತ 5 ಗಂಟೆಗಳ ಕಾಲ ಬಲಗೈನಲ್ಲಿ ರಾಷ್ಟ್ರಧ್ವಜ ಹಿಡಿದು ಸುಮಾರು 42 ಕಿಲೋ ಮೀಟರ್ನ ವಿನೂತನ ಮ್ಯಾರಥಾನ್ ಓಟ ನಡೆಸುವ ಮುಖಾಂತರ ದೇಶದ ಯುವಕರಿಗೆ ಜಾಗೃತಿ ಮೂಡಿಸಿರುವ ಕಾರ್ಯ ಅಭಿನಂದನಾರ್ಹ!
ಆಮ್ಲಜನಕದ ಪ್ರಮಾಣ ಕಡಿಮೆಯಿರುವ ಪ್ರದೇಶದಲ್ಲಿ ಕೈಗೊಂಡಿದ್ದ ಸಾಹಸದ ಕಾರ್ಯವು ಮೋಹನ್ ಕುಮಾರ್ ದಾನಪ್ಪರ ಧೈರ್ಯ ಮತ್ತು ದೇಶಾಭಿಮಾನ ತೋರಿಸುತ್ತಿದೆ. ಈ ಪ್ರಯತ್ನ ಮಾಡಿದ ರಾಜ್ಯದ ಮತ್ತು ದೇಶದ ಪ್ರಥಮ ವ್ಯಕ್ತಿಯಾಗಿರುವುದು ರಾಜ್ಯಕ್ಕೆ ಹೆಮ್ಮೆಯ ಸಂಗತಿ. ನಿಮ್ಮ ಈ ಕಾರ್ಯವು ದಾಖಲೆಯಾಗಿ ಉಳಿಯಲೆಂದು ಆಶಿಸುತ್ತೇನೆ.
ಮೋಹನ್ ಕುಮಾರ್ ದಾನಪ್ಪ ಅವರ ಇಂತಹ ಸಮಾಜಮುಖಿ ಕಾರ್ಯಗಳನ್ನು ನಡೆಯುತ್ತಿರುವುದು. ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರಾಜ್ಯದ ಕೀರ್ತಿ ಇನ್ನಷ್ಟು ಎತ್ತರಕ್ಕೆ ಎರುವಂತಾಗಲಿ ಎಂದು ಅಭಿನಂದನೆ ಪತ್ರದಲ್ಲಿ ತಿಳಿಸಿರುತ್ತಾರೆ
The post ಕಾರ್ಗಿಲ್ನಲ್ಲಿ ವಿನೂತನ ಮ್ಯಾರಥಾನ್ ಮಾಡಿದ ರಾಜ್ಯದ ಪ್ರಥಮ ವ್ಯಕ್ತಿ ಮೋಹನ್ ಕುಮಾರ್ ದಾನಪ್ಪ- ಸಿಎಂ ಸಿದ್ದರಾಮಯ್ಯ! appeared first on Hai Sandur kannada fortnightly news paper.
]]>The post ಮೋಹನ್ ಕುಮಾರ್ ದಾನಪ್ಪಗೆ ಭಾರತೀಯ ಸೇನೆಯ ಕ್ಯಾಪ್ ತೊಡಿಸಿ ಪ್ರಶಂಸಿಸಿದ ಕರ್ನಲ್ ಪುನೀತ್ ಕಟಾರಿಯಾ! appeared first on Hai Sandur kannada fortnightly news paper.
]]>The post ಮೋಹನ್ ಕುಮಾರ್ ದಾನಪ್ಪಗೆ ಭಾರತೀಯ ಸೇನೆಯ ಕ್ಯಾಪ್ ತೊಡಿಸಿ ಪ್ರಶಂಸಿಸಿದ ಕರ್ನಲ್ ಪುನೀತ್ ಕಟಾರಿಯಾ! appeared first on Hai Sandur kannada fortnightly news paper.
]]>The post ದೋಷಪೂರಿತ ವರ್ಗಾವಣೆಯಿಂದಾಗಿ ಹಲವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ; KSPDOWD ರಾಜ್ಯಾಧ್ಯಕ್ಷ ರಾಜು ವಾರದ appeared first on Hai Sandur kannada fortnightly news paper.
]]>ಪ್ರಮುಖ ಬೇಡಿಕಗಳು:-
1) ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಲ್ಲಾ ಹುದ್ದೆಯನ್ನು ಗ್ರೂಪ್ B ದರ್ಜೆಗೆ ಉನ್ನತೀಕರಿಸುವ ಬೇಡಿಕೆ ಸತತ 12 ವರ್ಷಗಳಲ್ಲಿಂದ ಮನವಿ ಸಲ್ಲಿಸಿದ್ರು ಕ್ರಮ ಕೈಗೊಂಡಿಲ್ಲ ಹಾಗೆಯೇ ನಾಮಕಾವಸ್ತೆಗಾಗಿ 1500 ಹಿರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ಸೃಷ್ಟಿಸಿ ಯಾವುದೇ ರೀತಿಯಲ್ಲಿ C&R ಮಾಡದೆಯೇ ಹಾಗೂ ಸೂಕ್ತ ವರ್ಗಾವಣೆ ನಿಯಮಗಳನ್ನ ರೂಪಿಸದಯೇ ಪಿಡಿಒ ಹುದ್ದೆಯನ್ನ ರಾಜ್ಯ ವೃಂದವೆಂದು ಪರಿಗಣಿಸಿ, ತರಾತುರಿಯಲ್ಲಿ ವರ್ಗಾವಣೆ ಮಾಡಲಾಗಿದೆ,
√ಇದರಿಂದ 500+ ಪಿಡಿಒ ಅವರ ತಮ್ಮ ಕುಟುಂಬನ್ನು ದೂರ ದೂರದ ಜಿಲ್ಲೆಗೆ ಸಿಫ್ಟ್ ಮಾಡಬೇಕಾದ ಸಮಸ್ಯೆಯಲ್ಲಿ ಸಿಲುಕಿದ್ದಾರೆ.
√ವರ್ಗಾವಣೆ ಇತಿಹಾಸದಲ್ಲೇ “ಸಿ” ವೃಂದದ ಹುದ್ದೆಯೊಂದಕ್ಕೆ ಕೌನ್ಸಿಲಿಂಗ್ ಮಾಡದಯೇ ಬೃಹತ್ ವರ್ಗಾವಣೆ ಮಾಡಿರುವುದು ರಾಜ್ಯದಲ್ಲಿ ಇದೇ ಮೊದಲಾಗಿದೆ,
√ಇದರ ನೇರ ಮತ್ತು ಕೆಟ್ಟ ಪರಿಣಾಮ ನೌಕರರ ಮೇಲೆ ಬೀರಿದ್ದು, 100ಕ್ಕೂ ಹೆಚ್ಚು ನೌಕರರು ಪಿಡಿಒ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ,
√ಇದರ ಜೊತೆಗೆ ದೋಷಪೂರಿತ ವರ್ಗಾವಣೆಯಿಂದಾಗಿ ಹಲವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬಂದಿದ್ದಾರೆ,
√ನೌಕರರು ಯಾವುದೇ ಅರ್ಜಿಯನ್ನು ವರ್ಗಾವಣೆಗೆ ನೀಡದಿದ್ದರೂ ಹಾಸನದಿಂದ- ಬೆಳಗಾವಿಗೆ, ಮಂಗಳೂರಿನಿಂದ- ಕಲಬುರಗಿಗೆ,ಮಡಿಕೇರಿಯಿಂದ- ಚಾಮರಾಜನಗರಕ್ಕೆ,
ಬಿಜಾಪುರದಿಂದ-ಮೈಸೂರಿಗೆ, ದೂರ ದೂರದ ಜಿಲ್ಲೆಗೆ ವರ್ಗಾವಣೆ ಮಾಡಿರಿವುದರಿಂದ, ನಾವು ನೆಮ್ಮದಿಯಿಂದ ಕರ್ತವ್ಯವನ್ನು ನಿರ್ವಹಿಸಲು ಸಾಧ್ಯವೇ?
√ನಾವು ಸಂಸಾರವನ್ನು ಬಿಟ್ಟು ದೂರದ ಜಿಲ್ಲೆಗೆ ಹೋಗಿ ಬದುಕಲು ಸಾಧ್ಯವೇ?
ನಾವು ಮನುಷ್ಯರಲ್ಲವೇ, ಈ ವರ್ಗಾವಣೆಯಲ್ಲಿ ಮನ ಬಂದಂತೆ ಮಾಡಲಾಗಿದೆ ಎಂದು ಪಿಡಿಒ ಅವರ ದೂರೆತಿದ್ದು ನಮ್ಮ ಕುಟುಂಬವನ್ನ ಬೀದಿಗೆ ತಂದೆಂತೆಯಾಗಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ,
3) ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆ ಸೃಷ್ಟಿಯಾಗಿ ಹದಿಮೂರು ವರ್ಷಗಳು ಕಳೆದರೂ ಒಂದು ಕ್ರಮಬದ್ದ ಜೇಷ್ಠತಾ ಪಟ್ಟಿಯನ್ನು ತಯಾರಿಸಲು ಇದುವರೆಗೂ ಸಾಧ್ಯವಾಗಿಲ್ಲ. ನ್ಯಾಯಾಲಯದ ಪ್ರಕರಣಗಳನ್ನು ಬೇಕಾದಂತೆ ವ್ಯಾಖ್ಯಾನಿಸಿಕೊಂಡು ಕಳೆದ ನಾಲ್ಕು ವರ್ಷಗಳಿಂದ ಒಂದೇ ಒಂದು ಬಡ್ತಿಯನ್ನು ನೀಡದಿರುವುದು ನಮ್ಮ ವೃತ್ತಿಯ ಬಗ್ಗೆ ಬಹಳಷ್ಟು ಜಿಗುಪ್ಸೆಯನ್ನು ಮೂಡಿದೆ.
4) ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಅಪರಿಮಿತ ಒತ್ತಡಗಳು, ಅವೈಜ್ಞಾನಿಕ ಗುರಿನಿಗದಿ ಮಾಡುವುದು, ತುರ್ತು ಕಾಲಮಿತಿಯೊಳಗೆ ಪ್ರಗತಿ ಸಾಧಿಸಿ ಎನ್ನುವ ಆದೇಶಗಳಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಬಹಳಷ್ಟು ನೊಂದು ಹೈರಾಣಾಗಿದ್ದಾರೆ. ನಾವು ವಹಿಸಿದ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದರೂ ದುರದ್ದೇಶದಿಂದ ಪಿಡಿಒ ಅವರನ್ನು ಅಮಾನತು, ವರ್ಗಾವಣೆಯಂತಹ ಶಿಕ್ಷೆಗಳನ್ನು ನೀಡಿ ಅವಮಾನಿಸಲಾಗುತ್ತಿದೆ.
ಈ ಮೇಲಿನ ವಿಷಯಗಳಿಗೆ ಸಬಂಧಿಸಿದಂತೆ ಹಲವಾರು ಬಾರಿ ಮನವಿಗಳನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಇದರಿಂದ ನಮ್ಮ ಸಮಸ್ಯೆಗಳನ್ನ ಪರಿಗಣಿಸಿ, ಸೂಕ್ತ ಪರಿಹಾರ ನೀಡದಿರವುದು ಬಹಳಷ್ಟು ನೋವುಂಟು ಆಗಿದೆ.
ಆದ್ದರಿಂದ ನಮ್ಮ ಬೆಡಿಕೆಗಳನ್ನು ಹಾಗೂ ಸಮಸ್ಯೆಗಳನ್ನು 15ದಿನದೊಳಗೆ ಬಗೆಹರಿಸದಿದ್ದರೆ ಹೋರಾಟದ ಹಾದಿಯನ್ನು ನಮ್ಮ ಸಂಘ ಹಿಡಿಯಬೇಕಾದೀತೆಂದು ಈ ಮೂಲಕ ಅಂತಿಮವಾಗಿ ಮನವಿ ಮಾಡುತ್ತೆವೆ ಎಂದು ತಿಳಿಸಿದ್ದಾರೆ.
The post ದೋಷಪೂರಿತ ವರ್ಗಾವಣೆಯಿಂದಾಗಿ ಹಲವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ; KSPDOWD ರಾಜ್ಯಾಧ್ಯಕ್ಷ ರಾಜು ವಾರದ appeared first on Hai Sandur kannada fortnightly news paper.
]]>The post ಕಾರ್ಗಿಲ್ ನಲ್ಲಿ ಕನ್ನಡಿಗನ ಕಲರವ, 5 ಗಂಟೆ ಮ್ಯಾರಥಾನ್ ಮಾಡಿದ ಮೋಹನ್ ಕುಮಾರ್ ದಾನಪ್ಪ appeared first on Hai Sandur kannada fortnightly news paper.
]]>ಭಾರತ ಸೇನೆಯ ರಾಂಕ್ ಹವಾಲ್ದಾರ್ ಆನಂದ್ ಕಂಚಗಾರ್ ರವರು ಧ್ವಜ ನೀಡುವ ಮೂಲಕ ಮ್ಯಾರಾಥಾನ್ ಗೆ ಚಾಲನೆ ನೀಡಿದರು. ಕಾರ್ಗಿಲ್ ನಗರದಿಂದ ಕಾರ್ಗಿಲ್ ನಗರದಿಂದ ಹರ್ದಾಸ್, ಚನಿ ಗೌನ್ಡ್, ಕಾಖಾಸರ್, ಖಾರ್ಬ್ಸ್, ಕಾಕ್ಸರ್, ಥಾಸ್ಗಮ್, ಸೋಮತ್, ಮುಖಾಂತರ ಕಾರ್ಗಿಲ್ ಯುದ್ದ ಸ್ಮಾರಕಕ್ಕೆ ತಲುಪಿದರು,
ನಂತರ ಕರ್ನಲ್ ಪುನೀತ್ ಕಠಾರಿಯಾರವರು ಸ್ವಾಗತಿಸಿ ಸೇನೆಯ ಟೋಪಿ (ಕ್ಯಾಪ್) ತೊಡಿಸಿ ಪ್ರಶಂಸಿಸಿದರು!
ನಂತರ ಮಾತಾನಾಡಿದ ಮೋಹನ್ ದಾನಪ್ಪ ದೇಶಕ್ಕೆ ಹೆಚ್ಚು ಸೈನಿಕರನ್ನ ನೀಡಿದ ರಾಜ್ಯ ಕರ್ನಾಟಕ, ಆದರೆ ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸಮಯ ಕಳೆಯುವುದು, ನಿರ್ಲಕ್ಷ್ಯತನ ಮತ್ತು ಸಾಮಾಜಿಕ ಜಾಲದ ಮೂಲಕ ಹಣ ಸಂಪಾದಿಸುವ ಪ್ರವೃತ್ತಿಗೆ ಬಿದ್ದು ದೇಶ ಸೇವೆಯ ಬಗ್ಗೆ ಇಚ್ಛೆ ಇಲ್ಲದೇ ಇರುವುದರಿಂದ ಭಾರತೀಯ ಸೇನೆಗೆ ಸೇರದೆ ಸೇರದಿರುವುದು ಮತ್ತು ನೇಮಕಾತಿಗಳಲ್ಲಿ ತೊಡಗದಿರುವುದು ದುರಂತ, ದೇಶ ಸೇವೆಗಿಂತ ಮಹತ್ತರ ಕಾರ್ಯ ಸೇನೆ ಹೊರತುಪಡಿಸಿ ಮತ್ತೊಂದಿಲ್ಲ, ಹಾಗಾಗಿ ದೇಶದ ಪ್ರತಿಯೊಬ್ಬ ಯುವಕರು ತಮ್ಮ ಮೊದಲ ಆದ್ಯತೆಯ ವೃತ್ತಿ ಸೇನೆಯಾಗಬೇಕೆಂದರು,
ಕರ್ನಾಟಕದಿಂದ 3150 ಕಿ.ಮೀ ದೂರದಲ್ಲಿರುವ ಕೇಂದ್ರಾಡಳಿತ ಪ್ರದೇಶದ ಲಡಾಖ್ ನ ಕಾರ್ಗಿಲ್ ಗೆ ಆಗಮಿಸಿ ಸಮುದ್ರ ಮಟ್ಟಕ್ಕಿಂತ 10.800 ಅಡಿಗಳಷ್ಟು ಎತ್ತರವಿರುವ ಪ್ರದೇಶದಲ್ಲಿ ಸತತ 5 ಗಂಟೆಗಳ ಕಾಲ ರಾಷ್ಟ್ರಧ್ವಜ ಹಿಡಿದು 42 ಕಿಲೋ ಮೀಟರು ಓಟ ಓಡಿದ್ದು ಕರ್ನಾಟಕದಿಂದ ಪ್ರಥಮ ಪ್ರಯತ್ನವೆಂದು ಹರ್ಷಿಸಿದರು.
ಈ ಜಾಗೃತಿ ಓಟದ ಯಶಸ್ಸನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟಿನ ಎಎಸ್ಜಿಐ ಕೆ.ಎಂ.ನಟರಾಜ್ ಮತ್ತು ಎಂಎಸ್ಐಎಲ್ನ ನಿರ್ದೇಶಕ ಡಾ.ಎ.ಎಂ.ಚಂದ್ರಪ್ಪ, ಮಾಜಿ ಎಎಜಿ ಅರುಣ್ ಶ್ಯಾಮ್, ಡಿಎಸ್ಜಿಐ ಹೆಚ್. ಶಾಂತಿ ಭೂಷಣ್. ಎಸ್ಪಿಸಿ ಎಸ್. ರಾಜಶೇಖರ್, ಸಿಜಿಸಿ ಎ.ರಾಜೇಶ್ ರವರಿಗೆ ಸಲ್ಲಿಸಿದರು. ಈ ಜಾಗೃತಿ ಓಟಕ್ಕೆ ರಾಜ್ಯದ ರಾಜ್ಯಪಾಲರು, ರಾಜ್ಯದ ಸಚಿವರು, ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳು, ಹೈಕೋರ್ಟಿನ ಎಎಜಿ.ಎಎಸ್ಪಿಐಗಳು, ಸಿಜಿಸಿಗಳು ಹಾಗೂ ಹಲವಾರು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇದೆ ಸಂಧರ್ಭದಲ್ಲಿ ತಮ್ಮ ಮ್ಯಾರಥಾನ್ ಓಟಕ್ಕೆ ಸೇನೆ ಮತ್ತು ಪೊಲೀಸ್ ಭದ್ರತೆ ಹಾಗೂ ತುರ್ತು ಚಿಕಿತ್ಸೆಗೆ ಆಂಬುಲೆನ್ಸ್ ನೀಡಿ ಸಹಕರಿಸಿದ ಕಾರ್ಗಿಲ್ ಜಿಲ್ಲೆ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಕಾರ್ಗಿಲ್ ಮತ್ತು ದ್ರಾಸ್ ನಗರ ಪೊಲೀಸ್ ಠಾಣೆಯವರಿಗೆ ಹಾಗೂ ತಮ್ಮ ನೆರವಿಗಿದ್ದ ಎನ್. ಸೈಯ್ಯದ್ ವಾರೀಶ್ ಮತ್ತು ಮನೋಜ್ ಕುಮಾರ್ ದಾನಪ್ಪಗೆ ಧನ್ಯವಾದಗಳನ್ನ ಅರ್ಪಿಸಿದರು,
The post ಕಾರ್ಗಿಲ್ ನಲ್ಲಿ ಕನ್ನಡಿಗನ ಕಲರವ, 5 ಗಂಟೆ ಮ್ಯಾರಥಾನ್ ಮಾಡಿದ ಮೋಹನ್ ಕುಮಾರ್ ದಾನಪ್ಪ appeared first on Hai Sandur kannada fortnightly news paper.
]]>