The post ಖಾಲಿ ಹೊಟ್ಟೆಯಲ್ಲಿ ಪ್ರತಿದಿನ 1 ಚಮಚ ಎಳ್ಳು ತಿನ್ನುವುದರಿಂದ ಆಗುವ ಪ್ರಯೋಜನಗಳು.! appeared first on Hai Sandur kannada fortnightly news paper.
]]>ಈ ಚಿಕ್ಕ ಬೀಜ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇದು ವಿಶ್ವದ ಆರೋಗ್ಯಕರ ಆಹಾರಗಳಲ್ಲಿ ಒಂದಾಗಿದೆ. ಈ ಚಿಕ್ಕ ಎಳ್ಳನ್ನು ಲಘುವಾಗಿ ಹುರಿದು ಆಹಾರಕ್ಕೆ ಸೇರಿಸುವುದರಿಂದ ಆಹಾರವು ತುಂಬಾ ರುಚಿಕರವಾಗಿರುತ್ತದೆ. ಜೊತೆಗೆ ಇದನ್ನು ಹಸಿಯಾಗಿಯೂ ತಿನ್ನಬಹುದು.
ಎಳ್ಳಿನ ಬೀಜಗಳ ವಿಧಗಳು:-
ಎಳ್ಳು ದೈನಂದಿನ ಅಡುಗೆಯಲ್ಲಿ ಬಳಸಲಾಗುವ ಚಿಕ್ಕ ಬೀಜವಾಗಿದೆ. ಈ ಎಳ್ಳು ಬಿಳಿ ಮತ್ತು ಕಪ್ಪು ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಎಳ್ಳು ಬೀಜಗಳನ್ನು ಸುವಾಸನೆಗಾಗಿ ಏಷ್ಯಾದಲ್ಲಿ ಹೆಚ್ಚಾಗಿ ಆಹಾರಕ್ಕೆ ಸೇರಿಸಲಾಗುತ್ತದೆ. ಹೀಗೆ ಬಳಸಲಾಗುವ ಈ ಪುಟ್ಟ ಬೀಜದ ಕಾಳಿನಲ್ಲಿ ಹಲವಾರು ಆರೋಗ್ಯಕರ ಪ್ರೆಯೋಜನಗಳಿವೆ. ಹಾಗಾದರೆ ಎಳ್ಳು ನಮ್ಮ ದೇಹಕ್ಕೆ ಎಷ್ಟು ಒಳ್ಳೆಯದು?
ಎಳ್ಳಿನಲ್ಲಿರುವ ಹಲವಾರು ಆರೋಗ್ಯಕರ ಪ್ರಯೋಜನಗಳೇನು ಎನ್ನುವುದನ್ನು ತಿಳಿಯೋಣ.
ಕಪ್ಪು ಎಳ್ಳು ಬೀಜಗಳಿಗಿಂತ ಬಿಳಿ ಎಳ್ಳು ಕಬ್ಬಿಣದಲ್ಲಿ ಸಮೃದ್ಧವಾಗಿದೆ. ಆದರೆ ಕಪ್ಪು ಎಳ್ಳು ಬಿಳಿ ಎಳ್ಳಿಗಿಂತ ಉತ್ತಮ ಪರಿಮಳವನ್ನು ಹೊಂದಿರುತ್ತದೆ. ಅಲ್ಲದೆ ಕಪ್ಪು ಎಳ್ಳು ಬಿಳಿ ಎಳ್ಳಿಗಿಂತ 60% ಹೆಚ್ಚು ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ.
ಎಳ್ಳಿನ ಎಣ್ಣೆಯು ಒಮೆಗಾ -6 ಕೊಬ್ಬಿನಾಮ್ಲಗಳು, ಫ್ಲೇವನಾಯ್ಡ್ ಫೀನಾಲಿಕ್ ಉತ್ಕರ್ಷಣ ನಿರೋಧಕಗಳು, ವಿಟಮಿನ್ಗಳು ಮತ್ತು ಆಹಾರದ ಫೈಬರ್ಗಳಂತಹ ಫೈಟೊನ್ಯೂಟ್ರಿಯಂಟ್ಗಳಲ್ಲಿ ಸಮೃದ್ಧವಾಗಿದೆ. ಹಾಗಾದರೆ ಈ ಎಳ್ಳನ್ನು ಪ್ರತಿನಿತ್ಯ ಸೇವಿಸುವುದರಿಂದ ಆಗುವ ಲಾಭಗಳೇನು ಎಂಬುದನ್ನು ಈಗ ನೋಡೋಣ.
ಎಳ್ಳಿನ ಬೀಜಗಳಲ್ಲಿರುವ ಪೌಷ್ಟಿಕಾಂಶ:-
ಎಳ್ಳಿನಲ್ಲಿ ಪ್ರೋಟೀನ್, ಜಿಂಕ್ ಮತ್ತು ಐರನ್ ಹೆಚ್ಚಿದ್ದು, ಇದರಲ್ಲಿ ಹೆಚ್ಚು ಆ್ಯಂಟಿ ಆಕ್ಸಿಡೆಂಟ್ಗಳಿದ್ದು, ಜೀವಕೋಶದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. 30 ಜನರ ಮೇಲೆ ನಡೆಸಿದ ಒಂದು ಸಣ್ಣ ಅಧ್ಯಯನವು 4 ವಾರಗಳ ಕಾಲ ಪ್ರತಿದಿನ 2.5 ಗ್ರಾಂ ಕಪ್ಪು ಎಳ್ಳು ಸೇವಿಸುವುದರಿಂದ ಸಾಮಾನ್ಯವಾಗಿ ರಕ್ತದೊತ್ತಡದ ಮಟ್ಟವು ಕಡಿಮೆಯಾಗುತ್ತದೆ ಎಂದು ಕಂಡುಹಿಡಿದಿದೆ.
ಎಳ್ಳಿನಲ್ಲಿರುವ ಆರೋಗ್ಯಕರ ಪ್ರಯೋಜನಗಳು: –
13.ಯಕೃತ್ತಿನ ಆರೋಗ್ಯ
ಆಲ್ಕೋಹಾಲ್ ಕುಡಿಯುವ ಅಭ್ಯಾಸ ಹೊಂದಿರುವ ಜನರು ಯಕೃತ್ತನ್ನು ವೇಗವಾಗಿ ಹಾನಿಗೊಳಿಸಿಕೊಳ್ಳುತ್ತಾರೆ. ಅಂತಹವರು ದಿನಾಲೂ ಎಳ್ಳು ಬೆಲ್ಲ ತಿಂದರೆ ಮದ್ಯಪಾನದಿಂದ ಯಕೃತ್ ಗೆ ಆಗುವ ಹಾನಿ ತಡೆದು ಯಕೃತ್ ಕಾರ್ಯದ ಆರೋಗ್ಯ ಸುಧಾರಿಸುತ್ತದೆ.
ಎಳ್ಳಿನ ಎಣ್ಣೆಯ ಪ್ರಯೋಜನಗಳು:-
3.ಆರೋಗ್ಯಕರ ಕೂದಲು
ಎಳ್ಳಿನಲ್ಲಿರುವ ಪೋಷಕಾಂಶಗಳು ನೆತ್ತಿ ಮತ್ತು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ. ಅದಕ್ಕಾಗಿ ನೀವು ಎಳ್ಳಿನ ಬೀಜಗಳಿಂದ ಪಡೆದ ತೈಲದೊಂದಿಗೆ ನಿಮ್ಮ ಕೂದಲಿಗೆ ಚಿಕಿತ್ಸೆ ನೀಡುವುದರ ಜೊತೆಗೆ ಎಳ್ಳನ್ನು ಪ್ರತಿದಿನ ತೆಗೆದುಕೊಳ್ಳಬೇಕು. ಇದು ಆರೋಗ್ಯಕರ ಕೂದಲನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ.
ಎಳ್ಳಿನ ಬೀಜಗಳ ಸೇವನೆಯಿಮದಾಗುವ ಅಡ್ಡ ಪರಿಣಾಮಗಳು:
ಸುನೀತಾ.ಬಿ
The post ಖಾಲಿ ಹೊಟ್ಟೆಯಲ್ಲಿ ಪ್ರತಿದಿನ 1 ಚಮಚ ಎಳ್ಳು ತಿನ್ನುವುದರಿಂದ ಆಗುವ ಪ್ರಯೋಜನಗಳು.! appeared first on Hai Sandur kannada fortnightly news paper.
]]>The post ಬೆಳ್ಳುಳ್ಳಿ ಇಲ್ಲದ ಆಹಾರ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. appeared first on Hai Sandur kannada fortnightly news paper.
]]>1) ಒಂದೆರಡು ಬೆಳ್ಳುಳ್ಳಿಯನ್ನು ಹಾಲಿನೊಂದಿಗೆ ಸೇವಿಸುವುದರಿಂದ ಹೊಟ್ಟೆ ಹುಳು ಮಾಯವಾಗುತ್ತದೆ.
2) ತುಪ್ಪದೊಂದಿಗೆ ಉರಿದು ಸೇವಿಸುವುದರಿಂದ ಅಗ್ನಿ ಮಾಧ್ಯ ಅಥವಾ ಉದರ ಶೂಲೆ ಗುಣವಾಗುತ್ತದೆ.
3) ಅರ್ಧಗಂಟೆಗೆ ಒಮ್ಮೆ ಬೆಳ್ಳುಳ್ಳಿಯ ರಸವನ್ನು ಸೇವಿಸುತ್ತಿದ್ದರೆ ಕಾಲರ ಗುಣವಾಗುತ್ತದೆ ಮತ್ತು ಊರಲ್ಲಿ ಕಾಲರ ಬಂದಾಗ ಮುನ್ನೆಚ್ಚರಿಕೆಗೆ ತೆಗೆದುಕೊಳ್ಳಬಹುದು.
4) ಇದರ ರಸವನ್ನು ಸೇವಿಸುವುದರಿಂದ ಕ್ಯಾನ್ಸರ್ ಕಣಗಳನ್ನು ಸಾಯಿಸಬಹುದು ಮತ್ತು ಲೇಪಿಸುವುದರಿಂದ ಗಾಯ ಗುಣಪಡಿಸಬಹುದು.
5) ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದರಿಂದ ಜ್ವರ ಗುಣವಾಗುವುದು.
6) ಬೆಳ್ಳುಳ್ಳಿ ರಸವನ್ನು ನಿಂಬೆ ರಸದೊಂದಿಗೆ ಬೆರೆಸಿ ಸ್ವಲ್ಪ ಬೆಲ್ಲ ಹಾಕಿ ಶರಭತ್ ಮಾಡಿ ಎರಡರಿಂದ ಮೂರು ಗಂಟೆಗೆ ಒಮ್ಮೆ ಕೊಡುತ್ತಿದ್ದರೆ ಮಕ್ಕಳ ಬಿಡದೆ ಇರುವ ಕೆಮ್ಮು ಗುಣವಾಗುತ್ತದೆ.
7) ಬೆಳ್ಳುಳ್ಳಿ ಹೊಳಪನ್ನು ಸ್ವಲ್ಪ ಬೆಲ್ಲದೊಂದಿಗೆ ಅರೆದು ಗಂಟಲಿಗೆ ಹಚ್ಚುವುದರಿಂದ ಗಂಟಲುಗಳಲೆ ಗುಣವಾಗುತ್ತದೆ.
8) ಬೆಳ್ಳುಳ್ಳಿಯ ರಸಕ್ಕೆ ಸಮ ಪ್ರಮಾಣದಲ್ಲಿ ಜೇನುತುಪ್ಪ ಸೇರಿಸಿ ಹಚ್ಚುವುದರಿಂದ ಅರೆದಲೆ ಸೂಲೆ ಗುಣವಾಗುತ್ತದೆ.
9) ಬೆಳ್ಳುಳ್ಳಿಯ ರಸವನ್ನು ಬೆಚ್ಚಗೆ ಮಾಡಿ ಎರಡರಿಂದ ಮೂರು ಹನಿ ಕಿವಿಗೆ ಬಿಡುವುದರಿಂದ ಕಿವಿ ನೋವು ಗುಣವಾಗುತ್ತದೆ ಮತ್ತು ಕಿವಿಯಲ್ಲಿ ಯಾವುದೇ ಹುಳು ಸೇರಿಕೊಂಡರು ಹೊರಗೆ ಬರುತ್ತದೆ.
10) ಸ್ವಲ್ಪ ತುಪ್ಪ ಹಾಕಿ ಬೆಳ್ಳುಳ್ಳಿಯನ್ನು ಹುರಿದು ತುಪ್ಪವನ್ನು ಸೇರಿಸಿ ಅರೆದು ಒಂದು ಚಮಚ ಜೇನು ಸೇರಿಸಿ ತಿನ್ನುತ್ತಿದ್ದರೆ ಉಬ್ಬಸ ಗುಣವಾಗುತ್ತದೆ.
11) ಬೆಳ್ಳುಳ್ಳಿಯ ರಸವನ್ನು ಜೇನುತುಪ್ಪದೊಂದಿಗೆ ಸೇರಿಸಿ ಚರ್ಮರೋಗಕ್ಕೆ ಹಚ್ಚಿದರೆ ಚರ್ಮರೋಗ ಗುಣವಾಗುತ್ತದೆ.
12) ಬೆಳ್ಳುಳ್ಳಿ ರಸಕ್ಕೆ ಉಪ್ಪು ಸೇರಿಸಿ ಹಚ್ಚಿದರೆ ಚೇಳಿನ ವಿಷ ಇಳಿಯುತ್ತದೆ.
13) ಬೆಳ್ಳುಳ್ಳಿ ಎಸಳಿಗೆ ಎಳ್ಳೆಣ್ಣೆ ಸೇರಿಸಿ ಸೈಂಧವ ಲವಣ ಸೇರಿಸಿ ಪ್ರತಿದಿನ ಬೆಳಿಗ್ಗೆ ಸೇವಿಸುತ್ತಿದ್ದರೆ ವಾತ ಜ್ವರ ಗುಣವಾಗುತ್ತದೆ.
14) 20 ಗ್ರಾಂ ಬೆಳ್ಳುಳ್ಳಿ ಸಮ ಪ್ರಮಾಣದ ಶುಂಠಿ ಲಕ್ಕಿ ಸೊಪ್ಪು ಸಮ ಪ್ರಮಾಣ 8 ಪಾಲು ನೀರು ಹಾಕಿ ಕುದಿಸಿ ಅರ್ಧಕ್ಕೆ ಇಳಿಸಿ ಸೋಸಿ ಎರಡು ಹತ್ತು ಸೇವಿಸುವುದರಿಂದ ವಾತರೋಗ ಗುಣವಾಗುತ್ತದೆ.
15) ದುಷ್ಟ ಹುಣ್ಣಿನ ಮೇಲೆ ಬೆಳ್ಳುಳ್ಳಿ ರಸವನ್ನು ಹಚ್ಚುವುದರಿಂದ ಹುಳು ಆಗುವುದಿಲ್ಲ.
16) ದುಷ್ಟ ಜಂತುಗಳು ಕಚ್ಚಿದಾಗ ಬೆಳ್ಳುಳ್ಳಿಯನ್ನು ಹಚ್ಚುವುದು ಮತ್ತೆ ಹೊಟ್ಟೆಗೆ ತೆಗೆದುಕೊಳ್ಳುವುದರಿಂದ ವಿಷ ಇರುವುದಿಲ್ಲ.
17) ನಾಲ್ಕು ಎಸಳು ಬೆಳ್ಳುಳ್ಳಿಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಮಂಡಿ ನೋವು ಗುಣವಾಗುತ್ತದೆ.
18) ಎಳ್ಳೆಣ್ಣೆಯಲ್ಲಿ ಬೆಳ್ಳುಳ್ಳಿಯನ್ನು ಚಚ್ಚಿ ಕುದಿಸಿ ಕಪ್ಪಾದ ಮೇಲೆ ಬೆಳ್ಳುಳ್ಳಿಯನ್ನು ತೆಗೆದು ಎಣ್ಣೆಯನ್ನು ಸೀಸೆಯಲ್ಲಿ ಭದ್ರವಾಗಿಟ್ಟು ನೋವಿರುವ ಜಾಗದಲ್ಲಿ ಹಚ್ಚುವುದರಿಂದ ನೋವು ನಿವಾರಣೆಯಾಗುತ್ತದೆ.
19) ಆರು ಏಳು ಎಸಳು ಬೆಳ್ಳುಳ್ಳಿಯನ್ನು ಅಕ್ಕಿಯಲ್ಲಿ ಹಾಕಿ ಅನ್ನ ಮಾಡಿ ತಿನ್ನುವುದರಿಂದ ವಾತರೋಗಗಳು ನಿವಾರಣೆಯಾಗುತ್ತದೆ ಮತ್ತು ತಡೆಯಲಾಗದ ಗ್ಯಾಸ್ಟ್ರಿಕ್ ಗುಣವಾಗುತ್ತದೆ.
20) ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಹಾಲಿನಲ್ಲಿ ಬೇಯಿಸಿ ತುಪ್ಪದಲ್ಲಿ ಕೆಂಪಾಗಿ ಹುರಿದು ಇತರೆ ಸಾಮಗ್ರಿಗಳನ್ನು ಸೇರಿಸಿ ನಾನು ತಯಾರಿಸಿದ ಔಷಧಿ ಪಾರ್ಶ್ವ ವಾಯು ಮತ್ತು ವಾತರೋಗಕ್ಕೂ ತುಂಬಾ ಒಳ್ಳೆಯ ಔಷಧಿಯಾಗಿದೆ.
21) ಬೆಳ್ಳುಳ್ಳಿ ಮತ್ತು ಶುಂಠಿ ಪುಡಿಯನ್ನು ಶುಂಠಿ ಪೇಸ್ಟ್ ಸೇರಿಸಿ ಹಚ್ಚಿದರೆ ತಲೆನೋವು ಗುಣವಾಗುತ್ತದೆ.
22) ಚಳಿಗಾಲದಲ್ಲಿ ಹೆಚ್ಚು ಉಪಯೋಗಿಸುವುದರಿಂದ ಶಾಖ ಹೆಚ್ಚಿಸಿ ದೇಹದ ನೋವು ನಿವಾರಣೆ ಮಾಡುತ್ತದೆ.
23) ಪ್ರತಿ ದಿನ ಎರಡು ಎಸಳು ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದರಿಂದ ಬಿಪಿ ಹತೋಟಿಗೆ ಬರುತ್ತದೆ.
ಸಂಗ್ರಹ ವರದಿ
The post ಬೆಳ್ಳುಳ್ಳಿ ಇಲ್ಲದ ಆಹಾರ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. appeared first on Hai Sandur kannada fortnightly news paper.
]]>The post ಸುವರ್ಣಗಡ್ಡೆಯನ್ನು ಹೀಗೆ ಬಳಸಿ ಮೂಲವ್ಯಾಧಿ ಬೇಗನೆ ಮಾಯವಾಗುವುದು appeared first on Hai Sandur kannada fortnightly news paper.
]]>ದಿನನಿತ್ಯ ಜೀವನಶೈಲಿಯಲ್ಲಿ ಕೆಲವೊಂದು ಅನಾರೋಗ್ಯ ಸಮಸ್ಯೆಗಳು ಬೆಂಬಿಡದೆ ಕಾಡುತ್ತವೆ. ಅಂತಹವುಗಳಲ್ಲಿ ಮೂಲವ್ಯಾಧಿ ಕೂಡ ಒಂದು. ಮೂಲವ್ಯಾಧಿ ಒಮ್ಮೆ ಬಂದರೆ ಅದನ್ನು ನಿಯಂತ್ರಿಸಬಹುದು ಹೊರತು ಸಂಪೂರ್ಣವಾಗಿ ನಿವಾರಣೆ ಮಾಡಲು ಸಾಧ್ಯವಿಲ್ಲ.
ಕೊನೆಯ ಆಯ್ಕೆ ಎಂದರೆ ಅದು ಶಸ್ತ್ರಚಿಕಿತ್ಸೆಯೇ ಆಗಿರುತ್ತದೆ. ಹೀಗಾಗಿ ಆಹಾರದ ಮೂಲಕ ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಮುಖ್ಯವಾಗಿರುತ್ತದೆ.
ಮೂಲವ್ಯಾಧಿ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸುವರ್ಣಗಡ್ಡೆ ಅತ್ಯಂತ ಉತ್ತಮ ಆಹಾರ ಎನ್ನುತ್ತಾರೆ ವೈದ್ಯರು. ಹಾಗಾದರೆ ಹೇಗೆ ಬಳಕೆ ಮಾಡಬೇಕು, ಯಾವಾಗ ಬಳಸಬೇಕು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಮೂಲವ್ಯಾಧಿಯ ಲಕ್ಷಣಗಳೆಂದರೆ
ಮಲವಿಸರ್ಜನೆಯ ತೊಂದರೆ
ನೋವು, ಮಲವನ್ನು ಹಾದುಹೋಗಲು ಅಸಮರ್ಥತೆ
ಆಯಾಸ , ಕರುಳಿನ ಚಲನೆಯ ಸಮಯದಲ್ಲಿ ನೋವು ಅಥವಾ ರಕ್ತಸ್ರಾವ ಕಂಡುಬರುತ್ತದೆ.
ಸುವರ್ಣಗಡ್ಡೆ :- ಸುವರ್ಣಗಡ್ಡೆ ಆಲೂಗೆಡ್ಡೆಯಂತೆ ಮಣ್ಣಿನಡಿಯಲ್ಲಿ ಬೆಳೆಯುತ್ತದೆ. ಒಮ್ಮೆ ತೆಗದರೂ ಅದರ ಬೇರುಗಳು ಮತ್ತೆ ಗಡ್ಡೆಯಾಗಿ ಬೆಳೆಯುತ್ತದೆ. ಈ ಗಡ್ಡೆಯ ಸೇವನೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದಕ್ಕೆ ಕಾರಣವೆಂದರೆ ಎಲ್ಲಾ ಪೋಷಕಾಂಶಗಳು ತರಕಾರಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ, ಇದು ದೇಹದ ಉತ್ತಮ ಕಾರ್ಯನಿರ್ವಹಣೆಗೆ ಅವಶ್ಯಕವಾಗಿದೆ.
ಸುವರ್ಣಗಡ್ಡೆಯಲ್ಲಿ ನಾರಿನಾಂಶ ಹಾಗೂ ಲೋಳೆಯ ಅಂಶ ಉತ್ತಮವಾಗಿರುತ್ತದೆ. ಹೀಗಾಗಿ ಕರುಳಿನ ಆರೋಗ್ಯವನ್ನು ಕಾಪಾಡಲು, ಜೀರ್ಣಕ್ರಿಯೆ ಉತ್ತಮವಾಗಲು ಹಾಗೂ ಮಲವಿಸರ್ಜನೆ ಸರಿಯಾಗಿ ಆಗಲು ಕೂಡ ಸಹಾಯ ಮಾಡುತ್ತದೆ.
ಮೂಲವ್ಯಾಧಿಗೆ ಬೆಸ್ಟ್ :- ಮೂಲವ್ಯಾಧಿ ಸಮಸ್ಯೆ ಇದ್ದವರು ಅಗತ್ಯವಾಗಿ ಸುವರ್ಣಗಡ್ಡೆಯನ್ನು ತಿನ್ನಬೇಕು. ಇದರಿಂದ 2 ವಾರದೊಳಗೆ ಸಮಸ್ಯೆಯನ್ನು ನಿವಾರಣೆ ಮಾಡಬಹುದಾಗಿದೆ. ಗರಿಷ್ಠ ಪ್ರಯೋಜನಗಳನ್ನು ಪಡೆಯಲು, ಸುವರ್ಣ ಗಡ್ಡೆಯನ್ನು ತಿಂದ ನಂತರ ಮಜ್ಜಿಗೆ ತೆಗೆದುಕೊಳ್ಳಿ. ಉತ್ತಮ ಫಲಿತಾಂಶಗಳನ್ನು ನೋಡಲು ಕನಿಷ್ಠ 2 ವಾರಗಳವರೆಗೆ ಇದನ್ನು ಮಾಡಿ.
ಸುವರ್ಣಗಡ್ಡೆಯ ಬಳಕೆ :- ಸುವರ್ಣಗಡ್ಡೆಯನ್ನು ಹೀಗೆ ಬಳಸಿ, ಮೊದಲು ಕೈಗೆ ಸಾಸಿವೆ ಎಣ್ಣೆಯನ್ನು ಹಚ್ಚಿ. ಅದರ ನಂತರ ನಿಮ್ಮ ಕೈಗಳನ್ನು ಉಪ್ಪು ನೀರಿನಲ್ಲಿ ತೊಳೆಯಿರಿ. ನಂತರ ತರಕಾರಿ ಸಿಪ್ಪೆ ತೆಗೆಯಿರಿ. ಅದನ್ನು ಕತ್ತರಿಸಿ ಸ್ವಲ್ಪ ಸಮಯ ಕುದಿಸಿ ನಂತರ ನೀವು ಇತರ ತರಕಾರಿಗಳನ್ನು ತಯಾರಿಸುವ ವಿಧಾನವನ್ನು ಬಳಸಿ ಆದರೆ ಹೆಚ್ಚು ಮಸಾಲೆಗಳನ್ನು ಸೇರಿಸಬೇಡಿ. ಇದನ್ನು ಮಾಡುವಾಗ, ಸ್ವಲ್ಪ ಜೀರಿಗೆ, ಕೊತ್ತಂಬರಿ ಸೊಪ್ಪು, ಕರಿಮೆಣಸು, ಕಲ್ಲು ಉಪ್ಪು ಸೇರಿಸಿ ಚೆನ್ನಾಗಿ ರೋಸ್ಟ್ ಮಾಡಿ ತಿನ್ನಬಹುದು. ಅಥವಾ ಪಲ್ಯ. ಸಾಂಬಾರ್ ರೀತಿಯಲ್ಲಿಯೂ ನೀವು ಇದನ್ನು ಬಳಕೆ ಮಾಡಬಹುದು.
ಇತರ ಮನೆಮದ್ದುಗಳೆಂದರೆ…
ನಿಮಗೆ ಬಾಯಾರಿಕೆಯಾದಾಗ ಸಾಕಷ್ಟು ನೀರು ಕುಡಿಯಿರಿ. 10 ನಿಮಿಷಗಳ ಕಾಲ ಉಗುರು ಬೆಚ್ಚಗಿನ ನೀರಿನಲ್ಲಿ ಕುಳಿತುಕೊಳ್ಳಿ. ಸರಿಯಾದ ಸಮಯಕ್ಕೆ ಊಟವನ್ನು ಮಾಡಿ.
ಮಲಗುವ ಮುನ್ನ ಒಂದು ಕಪ್ ಉಗುರುಬೆಚ್ಚಗಿನ ಹಾಲಿಗೆ 1 ಟೀಚಮಚ ದೇಸಿ ಹಸುವಿನ ತುಪ್ಪವನ್ನು ತೆಗೆದುಕೊಳ್ಳಿ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಮಲವನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ಮೂಲವ್ಯಾಧಿ ಸಮಸ್ಯೆಯನ್ನು ನಿಯಂತ್ರಿಸಬಹುದು.
ಪವಿತ್ರಾ ಭಟ್.
ವಿಜಯಕರ್ನಾಟಕ.
The post ಸುವರ್ಣಗಡ್ಡೆಯನ್ನು ಹೀಗೆ ಬಳಸಿ ಮೂಲವ್ಯಾಧಿ ಬೇಗನೆ ಮಾಯವಾಗುವುದು appeared first on Hai Sandur kannada fortnightly news paper.
]]>The post ವಿಟಮಿನ್ ಬಿ12 ಅಂಶ ಹೆಚ್ಚಿರುವ ಮೊಟ್ಟೆ, ಹಾಲು, ಮೊಸರು, ಸ್ವಲ್ಪ ಜಾಸ್ತಿ ಸೇವಿಸಿ… appeared first on Hai Sandur kannada fortnightly news paper.
]]>ಉತ್ತಮ ಆರೋಗ್ಯಕ್ಕೆ ನಮಗೆ ಎಲ್ಲಾ ಪೋಷಕಾಂಶಗಳು ನಿಯಮಿತ ಪ್ರಮಾಣದಲ್ಲಿ ಅಗತ್ಯವಾಗಿವೆ. ಪ್ರೋಟೀನುಗಳು, ಖನಿಜಗಳು ಮತ್ತು ವಿಟಮಿನ್ನುಗಳು ಇವುಗಳಲ್ಲಿ ಪ್ರಮುಖವಾಗಿವೆ ಹಾಗೂ ನಿತ್ಯದ ಎಲ್ಲಾ ಕಾರ್ಯಗಳಿಗೆ ಅವಶ್ಯವಾಗಿವೆ. ಇವುಗಳಲ್ಲಿ ಒಂದಾದರೂ ಪೋಷಕಾಂಶದಲ್ಲಿ ಕೊರತೆ ಉಂಟಾದರೆ ಇದು ಗಂಭೀರ ಕಾಯಿಲೆಗೆ ಕಾರಣವಾಗಬಹುದು.
ವಿಟಮಿನ್ ಬಿ12 ಇಂತಹ ಒಂದು ಅತ್ಯಂತ ಅವಶ್ಯಕ ಪೋಷಕಾಂಶವಾಗಿದೆ ಹಾಗೂ ಇದರ ಕೊರತೆಯಿಂದ ಮೆದುಳು ಮತ್ತು ನರವ್ಯವಸ್ಥೆಯ ಮೇಲೆ ಗಂಭೀರ ಪ್ರಭಾವ ಬೀರುತ್ತದೆ. ಈ ಅವಶ್ಯಕ ಪೋಷಕಾಂಶದ ಬಗ್ಗೆ ನಾವೆಲ್ಲರೂ ಅರಿತಿರಬೇಕಾದ ಮಾಹಿತಿಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ, ಬನ್ನಿ, ನೋಡೋಣ:
ವಿಟಮಿನ್ ಬಿ12 ದೇಹಕ್ಕೆ ಏಕಾಗಿ ಇಷ್ಟು ಅವಶ್ಯಕ?
ತಜ್ಞರ ಪ್ರಕಾರ, ವಿಟಮಿನ್ ಬಿ12 ಪೋಷಕಾಂಶವನ್ನು ‘ಕೋಬಾಲಾಮೈನ್’ ಎಂದೂ ಕರೆಯಲಾಗುತ್ತದೆ. ಇದು ಮೆದುಳಿನ ಕಾರ್ಯನಿರ್ವಹಣೆಗೆ ಅತಿ ಅವಶ್ಯವಾದ ಪೋಷಕಾಂಶವಾಗಿದೆ.
ಅಲ್ಲದೇ ಕೆಂಪು ರಕ್ತಕಣಗಳ ರಚನೆಗೆ ಮತ್ತು ಡಿ ಎನ್ ಎ ನಿಯಂತ್ರಣಕ್ಕೂ ಅಗತ್ಯವಾಗಿದೆ. ವಿಟಮಿನ್ ಬಿ12 ಕೊರತೆ ಎದುರಾದರೆ ದೇಹದಲ್ಲಿ ನರಮಂಡಲಕ್ಕೆ ಸಂಬಂಧಿಸಿದ ತೊಂದರೆಗಳು ಎದುರಾಗಬಹುದು.
ವಿಟಮಿನ್ ಬಿ12 ಕೊರತೆಯಿಂದ ಎದುರಾಗುವ ಕಾಯಿಲೆಗಳು
ತಜ್ಞರ ಪ್ರಕಾರ ಉತ್ತಮ ಆರೋಗ್ಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ನಮಗೆ ವಿಟಮಿನ್ ಬಿ12 ಲಭಿಸುತ್ತಲೇ ಇರಬೇಕು. ಈ ಪೋಷಕಾಂಶ ಸಾಕಷ್ಟು ಪ್ರಮಾಣದಲ್ಲಿ ಲಭಿಸದೇ ಹೋದರೆ ಮೊದಲಾಗಿ ಇವರ ದೇಹದ ತೂಕ ಇಳಿಯಲು ಪ್ರಾರಂಭಿಸುತ್ತದೆ.
ಸ್ನಾಯುಗಳು ಶಿಥಿಲಗೊಳ್ಳತೊಡಗುತ್ತವೆ ಹಾಗೂ ಚರ್ಮದ ಬಣ್ಣ ಹಳದಿಯಾಗಲು ತೊಡಗುತ್ತದೆ. ವಿಟಮಿನ್ ಬಿ12 ಕೊರತೆಯಿಂದ ನರವ್ಯವಸ್ಥೆಗೆ ಹಾನಿ ಎದುರಾಗುತ್ತದೆ.
ಈ ವ್ಯಕ್ತಿಗಳು ಭ್ರಮಾಧೀನರಾಗಲು ತೊಡಗುತ್ತಾರೆ ಹಾಗೂ ಅರಿವಿಗೆ ಸಂಬಂಧಿಸಿದ ಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗದೇ ಹೋಗುತ್ತಾರೆ. ಕೆಂಪು ರಕ್ತಕಣಗಳು ಸಾಕಷ್ಟು ಪ್ರಮಾಣದಲ್ಲಿ ಸೃಷ್ಟಿಯಾಗದೇ ಹೋಗುತ್ತವೆ.
ಈ ಬಗೆಯ ರಕ್ತಹೀನತೆಯನ್ನು ಮೆಗಾಲೊಬ್ಲಾಸ್ಟಿಕ್ ರಕ್ತಹೀನತೆ ಎಂದು ಕರೆಯಲಾಗುತ್ತದೆ ( ಪರ್ನಿಶಿಯಸ್ ಅನೀಮಿಯಾ ಅಥವಾ ವಿನಾಶಕಾರಿ ರಕ್ತಹೀನತೆ).
ದೇಹದ ಪಾದ, ಹಸ್ತದ ಭಾಗಗಳಲ್ಲಿ ಚಿಕ್ಕದಾಗಿ ಸೂಜಿ ಚುಚ್ಚಿದಂತಹ ಅನುಭವ, ಬಾಯಿಯ ಹುಣ್ಣುಗಳು, ಖಿನ್ನತೆ, ನಾಲಿಗೆ ಕೆಂಪಗಾಗಿ ಉರಿಯುವುದು (ಗ್ಲಾಸೈಟಿಸ್), ಇಲ್ಲದ ಸದ್ದುಗಳು ಕೇಳಿಸುವುದು (ಟೈನಿಟಸ್), ಹಸಿವಿಲ್ಲದಿರುವುದು, ತೂಕ ಇಳಿಕೆ, ದೃಷ್ಟಿ ಮಂಜಾಗುವುದು ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು.
ಹದಿನೆಂಟು ವರ್ಷಕ್ಕೂ ಮೀರಿದ ಪ್ರತಿ ವಯಸ್ಕ ವ್ಯಕ್ತಿಗಳು ಕನಿಷ್ಟ ದಿನಕ್ಕೆ 2.4 ಮೈಕ್ರೋಗ್ರಾಂನಷ್ಟು ವಿಟಮಿನ್ ಬಿ12 ಸೇವಿಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸ್ಸು ಮಾಡಿದೆ.
ವಿಟಮಿನ್ ಬಿ12 ಮೂಲಗಳು
ವಿಟಮಿನ್ ಬಿ12 ಹಲವಾರು ಮಾಂಸಾಹಾರಗಳಲ್ಲಿ ಹೇರಳವಾಗಿ ಲಭ್ಯವಿದೆ. ಕೋಳಿ, ಕುರಿ ಮಾಂಸ, ಮೀನು ಮತ್ತು ಮೊಟ್ಟೆಗಳಲ್ಲಿ ಇದು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಪ್ರಾಣಿಜನ್ಯ ಆಹಾರಗಳಲ್ಲಿಯೂ ಇದು ಲಭ್ಯವಿದೆ.
ವಿಶೇಷವಾಗಿ ಮೊಟ್ಟೆಯಲ್ಲಿ ವಿಟಮಿನ್ ಬಿ2 ಮತ್ತು ವಿಟಮಿನ್ ಬಿ12 ಎರಡೂ ಇರುತ್ತವೆ. ಒಂದು ಮೊಟ್ಟೆಯ ಸೇವನೆಯಿಂದ ದೈನಂದಿನ ಅಗತ್ಯದ 46 ಶೇಖಡಾ ವಿಟಮಿನ್ ಬಿ12 ಪಡೆಯಬಹುದು.
ಆ ಪ್ರಕಾರ ದಿನಕ್ಕೆ ಎರಡು ಮೊಟ್ಟೆಗಳನ್ನು ಸೇವಿಸಿದರೆ ಉಳಿದ ಎಂಟು ಶೇಖಡಾವನ್ನು ಇತರ ಆಹಾರಗಳ ಮೂಲಕ ಪಡೆದು ಪೂರೈಸಿಕೊಳ್ಳಬಹುದು.
ವಿಟಮಿನ್ ಬಿ12 ಇರುವ ಸಸ್ಯಜನ್ಯ ಆಹಾರಗಳು
ವಿಟಮಿನ್ ಬಿ12 ಹಲವಾರು ಸಸ್ಯಜನ್ಯ ಆಹಾರಗಳಲ್ಲಿಯೂ ಲಭ್ಯವಿದೆ. ಆದರೆ ಮುಖ್ಯವಾಗಿ ಹಾಲು, ಮೊಸರು ಮತ್ತು ಚೀಸ್ ನಲ್ಲಿ ಇವು ಹೆಚ್ಚಿನ ಪ್ರಮಾಣದಲ್ಲಿವೆ.
ಉಳಿದಂತೆ ಬಾದಾಮಿ, ಗೋಡಂಬಿ, ಓಟ್ಸ್ ಮತ್ತು ತೆಂಗಿನ ಹಾಲಿನಲ್ಲಿಯೂ ಮಿತ ಪ್ರಮಾಣದಲ್ಲಿದೆ. ಆದ್ದರಿಂದ ವಿಟಮಿನ್ ಬಿ12 ಅನ್ನು ಪಡೆಯಲು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸಾಕಷ್ಟು ಪ್ರಮಾಣದಲ್ಲಿ ನಿತ್ಯವೂ ಸೇವಿಸುವುದು ಸಸ್ಯಾಹಾರಿ ವ್ಯಕ್ತಿಗಳಿಗೆ ಅಗತ್ಯವಾಗಿದೆ.
ಮೊಸರು ವಿಟಮಿನ್ ಬಿ 12 ನ ಉತ್ತಮ ಮೂಲವಾಗಿದೆ. ಮೊಸರು ಸೇವನೆಯು ವಿಟಮಿನ್ ಬಿ 12 ಮಟ್ಟವನ್ನು ಸುಧಾರಿಸಲು ಮತ್ತು ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಸೋಯಾ ಪನೀರ್, ಧಾನ್ಯಗಳು, ಹಾಲು ಇವುಗಳನ್ನು ಸೇವಿಸಬಹುದು. ಇವೆಲ್ಲವೂ ವಿಟಮಿನ್ ಬಿ 12 ನ ಉತ್ತಮ ಮೂಲಗಳಾಗಿವೆ
ಒಂದು ವೇಳೆ ದೇಹದಲ್ಲಿ ವಿಟಮಿನ್ ಬಿ12 ಕೊರತೆ ಇದ್ದರೆ, ನೀವು ಈ ಕೆಳಗಿನ ಸಂಗತಿಗಳನ್ನು ಅರಿತಿರಬೇಕು
ವಿಟಮಿನ್ ಬಿ12 ಕೊರತೆ ಇರುವ ವ್ಯಕ್ತಿಗಳಿಗೆ ಮದ್ಯ ನಿಷಿದ್ಧವಾಗಿದೆ. ಒಂದು ವೇಳೆ ವ್ಯಸನಿಯಾಗಿದ್ದರೆ ಇದನ್ನು ತ್ಯಜಿಸುವ
ಪ್ರಾಮಾಣಿಕ ಪ್ರಯತ್ನವನ್ನು ತಕ್ಷಣವೇ ಪ್ರಾರಂಭಿಸಬೇಕು.
ಮದ್ಯಸೇವನೆ ಈ ಕೊರತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಫೋಲಿಕ್ ಆಮ್ಲದ ಸೇವನೆ ಅಥವಾ ಈ ಅಂಶವಿರುವ ಔಷಧಿಗಳನ್ನು ಸೇವಿಸುತ್ತಿದ್ದರೆ ವೈದ್ಯರ ಸಲಹೆ ಪಡೆದು ಇವುಗಳ ಪ್ರಮಾಣವನ್ನು ತಗ್ಗಿಸಬೇಕು.
ಈ ಲಕ್ಷಣಗಳಲ್ಲಿ ಯಾವೊಂದು ಕಂಡುಬಂದರೂ ತಕ್ಷಣ ವೈದ್ಯರಿಂದ ಪರೀಕ್ಷೆಗೊಳಪಟ್ಟು ಚಿಕಿತ್ಸೆಯನ್ನು ಪ್ರಾರಂಭಿಸಬೇಕು.
ಅಲಕ್ಷಿಸಿದರೆ ಇದು ಸರಿಪಡಿಸಲಾಗದಷ್ಟು ಹಾನಿ ಉಂಟು ಮಾಡಬಹುದು ಹಾಗೂ ಈ ನಿರ್ಲಕ್ಷ್ಯ ಮಾರಣಾಂತಿಕವೂ ಆಗಬಹುದು.
The post ವಿಟಮಿನ್ ಬಿ12 ಅಂಶ ಹೆಚ್ಚಿರುವ ಮೊಟ್ಟೆ, ಹಾಲು, ಮೊಸರು, ಸ್ವಲ್ಪ ಜಾಸ್ತಿ ಸೇವಿಸಿ… appeared first on Hai Sandur kannada fortnightly news paper.
]]>The post ಮೊಸರಿನ ಸೇವನೆಯಿಂದ ಯಾವೆಲ್ಲಾ ಕಾಯಿಲೆಯಿಂದ ದೂರವಿರಬಹುದು? appeared first on Hai Sandur kannada fortnightly news paper.
]]>ಪ್ರತಿದಿನ ಮೊಸರು ತಿನ್ನುವುದರಿಂದ, ನಮಗೆ ಹೊಟ್ಟೆಯ ಸಮಸ್ಯೆಗಳು ನಿವಾರಣೆಯಾಗುತ್ತದೆ. ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿ ಕೆಲಸ ಮಾಡುತ್ತದೆ. ಮೊಸರು ದೇಹವನ್ನು ತಾಜಾವಾಗಿಡಲು ಸಹ ಸಹಾಯ ಮಾಡುತ್ತದೆ. ಹೃದಯ ಸಂಬಂಧಿತ ಕಾಯಿಲೆ ಇರುವವರಿಗೆ ಮೊಸರು ತಿನ್ನಲು ಸೂಚಿಸಲಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಮೊಸರು ಸೇವನೆಯು ಅಂತಹ ಜನರಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.
ಮೊಸರಿನ ಅದ್ಭುತ ಪ್ರಯೋಜನಗಳು :
ಆದರೆ ನೆನಪಿರಲಿ ಶೀತ ಮತ್ತು ಕೆಮ್ಮು ಇರುವವರು ಮೊಸರು ತಿನ್ನಬಾರದು ಎನ್ನುತ್ತಾರೆ ಆರೋಗ್ಯ ತಜ್ಞರು.
The post ಮೊಸರಿನ ಸೇವನೆಯಿಂದ ಯಾವೆಲ್ಲಾ ಕಾಯಿಲೆಯಿಂದ ದೂರವಿರಬಹುದು? appeared first on Hai Sandur kannada fortnightly news paper.
]]>The post ಮಕ್ಕಳಲ್ಲಿ ಇಮ್ಯೂನಿಟಿ ಪವರ್ಅನ್ನು ಹೆಚ್ಚಿಸುವುದು ಹೇಗೆ? appeared first on Hai Sandur kannada fortnightly news paper.
]]>ಈ ಸಮಯದಲ್ಲಿ ನಾವು ಉತ್ತಮ ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಅದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕು. ಅಂತಹ ಶಿಫಾರಸು ಮಾಡಲಾಗಿರುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬೂಸ್ಟರ್ಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ: ಅವುಗಳೆಂದರೆ
a. ವಿಟಮಿನ್ ಸಿ
b. ವಿಟಮಿನ್ ಡಿ
c. ವಿಟಮಿನ್ ಎ4. ವಿಟಮಿನ್ ಇ
d. ಝಿಂಕ್ ಸಪ್ಲಿಮೆಂಟ್ಸ್
e. ಒಮೆಗಾ -3 ಫ್ಯಾಟಿ ಆ್ಯಸಿಡ್
ಈ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ನಾವು ನಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಕೆಲವು ವೈದ್ಯರು ಔಷಧಗಳು ಮತ್ತು ಝಿಂಕ್ನಂತಹ ಕೆಲವು ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಆದರೆ ಮಾತ್ರೆಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರ ಬದಲು ಹಾಲು / ಪೂರಕಗಳು, ಪ್ರೋಟೀನ್ ಶೇಕ್ಸ್ ಇತ್ಯಾದಿಗಳನ್ನು ಸೇವಿಸುವುದು ಒಳ್ಳೆಯದು. ಆದರೆ ಹಾಲು / ಪೂರಕಗಳು, ಪ್ರೋಟೀನ್ ಶೇಕ್ಸ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುಬಹುದೇ ಎಂಬುದು ಪ್ರಶ್ನೆ, ಕೋವಿಡ್ -19 ವಿರುದ್ಧ ಹೋರಾಡಲು ವಿಟಮಿನ್ ಪೂರಕಗಳು ಜನರಿಗೆ ಸಹಾಯ ಮಾಡುತ್ತವೆ ಎಂಬ ಅಂಶವನ್ನು WHO (ವಿಶ್ವ ಆರೋಗ್ಯ ಸಂಸ್ಥೆ) ನಿರಾಕರಿಸಿದೆ. ಈ ಮಾತ್ರೆಗಳು ಬೆಳೆಯುತ್ತಿರುವ ಮಕ್ಕಳ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ಹೆಚ್ಚು ಜಿಂಕ್ ಮಾತ್ರೆಗಳನ್ನು ಸೇವಿಸುವುದರಿಂದ ನರಮಂಡಲದ ಮೇಲೆ ಹಾನಿಮಾಡುವುದು, ರಕ್ತಹೀನತೆಗೆ ಕಾರಣಹಾಗುವುದು ಹಾಗೂ ಕಾಪರ್ ಕೊರತೆ ಆಗುವುದು. ಹಾಗೆಯೇ ಮಕ್ಕಳು ದೀರ್ಘ ಕಾಲದವರೆಗೆ ಮಾತ್ರೆಗಳನ್ನು ಸೇವಿಸಿದದ್ದರೆ ಅವರಲ್ಲಿ ಬಾಯಿ ಹುಣ್ಣು ಆಗುವುದು ಹಾಗೂ ಸ್ನಾಯು ನೋವನ್ನು ಉಂಟುಮಾಡುತ್ತದೆ. ಮಾತ್ರೆಗಳ ಬದಲಿಗೆ ಪೋಷಕರು ನೀಡಬಹುದಾದ ಪೂರಕಗಳನ್ನು ಕೇಳಗೆ ಪಟ್ಟಿ ಮಾಡಲಾಗಿದೆ.
1. ಮನೆಯಲ್ಲಿ ಬೇಯಿಸಿದ ಊಟ,
2. ಹೆಚ್ಚಿದ ವ್ಯಾಯಾಮ (ಏರೋಬಿಕ್ಸ್, ಜಾಗಿಂಗ್, ಸೈಕ್ಲಿಂಗ್ ಅಥವಾ ಯೋಗ ಸಹಾಯ ಮಾಡಬಹುದು)
3. ಕನಿಷ್ಠ 8 ಗಂಟೆಗಳ ನಿದ್ರೆ
4. ಹೆಚ್ಚಾಗಿ ನೀರಿನ ಸೇವನೆ
ಎಲ್ಲಾ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ, ಕೊಠಡಿ / ಮನೆಯನ್ನು ಪರಿಣಾಮಕಾರಿಯಾಗಿ ಗಾಳಿ ಬರುವಂತೆ ನೋಡಿಕೊಳ್ಳಿ ಮಗುವಿಗೆ ಒಂದು ವೇಳಾಪಟ್ಟಿಯನ್ನು ಮಾಡಿ ಅನುಸರಿಸಲು ಹೇಳಿ, ನಿಮ್ಮ ಮಗುವಿಗೆ ಲಸಿಕೆ ಲಭ್ಯವಾದ ತಕ್ಷಣ ಅದನ್ನು ಪಡೆಯಿರಿ ಮತ್ತು ಆರೋಗ್ಯ ತಜ್ಞರಿಂದ ಸಲಹೆ ಪಡೆಯಿರಿ. ಝಿಂಕ್ ಹಾಗೂ ವಿಟಮಿನ್ ಮಾತ್ರೆಗಳ ಬದಲಿಗೆ ನೀವು ಜಿಂಕ್/ ವಿಟಮಿನ್ಪ್ರೋ ಟೀನ್ಗಳಂತಹ ಆಹಾರಗಳನ್ನು ಮಕ್ಕಳಿಗೆ ನೀಡಿ. ಝಿಂಕ್ ಆಹಾರಗಳಾದ ಬೀಜಗಳು, ಬೀನ್ಸ್, ಬಾಳೆಹಣ್ಣುಗಳು, ಸಿಂಪಿ, ಧಾನ್ಯಗಳು, ಚೀಸ್ ನಂತಹ ಡೈರಿ ಆಹಾರಗಳು ಮತ್ತು ಇನ್ನೂ ಅನೇಕ ಆಹಾರಗಳನ್ನು ನೀಡಿ ಹಾಗೂ ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವ ಆಹಾರವೆಂದರೆ – ದ್ರಾಕ್ಷಿಹಣ್ಣು, ಕಿತ್ತಳೆ, ಕೋಸುಗಡ್ಡೆ, ಆಲೂಗಡ್ಡೆ, ಮೆಣಸು ಮತ್ತು ಇನ್ನೂ ಅನೇಕ ಆಹಾರಗಳನ್ನು ನೀಡಿ. ಮಗುವಿಗೆ ಅಗತ್ಯವಿದ್ದಾಗ ವೈದ್ಯರು ಸ್ವತಃ ಪೂರಕಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡುತ್ತಾರೆ ಮತ್ತು ಅದನ್ನು ನಿರ್ಬಂಧಿತ ರೀತಿಯಲ್ಲಿ ತೆಗೆದುಕೊಳ್ಳಿ.
The post ಮಕ್ಕಳಲ್ಲಿ ಇಮ್ಯೂನಿಟಿ ಪವರ್ಅನ್ನು ಹೆಚ್ಚಿಸುವುದು ಹೇಗೆ? appeared first on Hai Sandur kannada fortnightly news paper.
]]>The post ಹಣ್ಣು ಗಳನ್ನು ಕೃತಕವಾಗಿ ಹೇಗೆ ಹಣ್ಣಾಗಿಸುತ್ತಾರೆ:ಇಲ್ಲಿದೆ ವಿವರ appeared first on Hai Sandur kannada fortnightly news paper.
]]>ಹಣ್ಣುಗಳನ್ನು ಕೃತಕವಾಗಿ ಹಣ್ಣು ಮಾಡಿಸುವುದು ಹೇಗೆ?
ಈ ಪ್ರಕ್ರಿಯೆಗಾಗಿ ಎತಲಿನ್ ಮತ್ತು ಅಸಿಟಲಿನ್ ಎಂಬ ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡಲಾಗುತ್ತದೆ. ಇವುಗಳು ಬಹಳ ತೊಂದರೆ ನೀಡುವ ಹೈಡ್ರೋಕಾರ್ಬನ್ ಗಳಾಗಿವೆ. ಇವು ಹಣ್ಣುಗಳ ಹಣ್ಣಾಗುವಿಕೆಯಲ್ಲಿ ಸಹಾಯಮಾಡುತ್ತವೆ ಹಾಗೂ ಹಣ್ಣುಗಳ ಬಣ್ಣವನ್ನು ಕೂಡ ಬದಲಾಯಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಬಳಸುವ ಪ್ರಮುಖ ರಾಸಾಯನಿಕ ವಸ್ತುವೆಂದರೆ ಕ್ಯಾಲ್ಸಿಯಂ ಕಾರ್ಬೈಡ್. ಇದನ್ನು ಮಸಾಲಾ ಎಂದು ಕೂಡ ಕರೆಯಲಾಗುತ್ತದೆ.
ಕೃತಕವಾಗಿ ಹಣ್ಣು ಮಾಡಿದ ಹಣ್ಣುಗಳು ನೈಸರ್ಗಿಕವಾಗಿ ಹಣ್ಣಾಗಿರುವ ಹಣ್ಣುಗಳಂತೆಯೇ ಬಹಳ ಮೆತ್ತಗೆ ಹಾಗೂ ನೈಸರ್ಗಿಕವಾಗಿಯೇ ಹಣ್ಣಾಗಿದೆ ಎಂಬ ರೀತಿಯಲ್ಲಿ ಕಾಣಿಸುತ್ತದೆ. ಆದರೆ ನೈಸರ್ಗಿಕವಾಗಿ ಆದ ಹಣ್ಣುಗಳಿಗೂ ಕೃತಕವಾಗಿ ಹಣ್ಣು ಮಾಡಿದ ಹಣ್ಣುಗಳಿಗೂ ರುಚಿಯಲ್ಲಿ ಸಾಕಷ್ಟು ವ್ಯತ್ಯಾಸವಿರುತ್ತದೆ. ಇದಕ್ಕೆ ಕಾರಣ, ಕೃತಕವಾಗಿ ಹಣ್ಣು ಮಾಡಲು ಬಳಸಿರುವ ರಾಸಾಯನಿಕ ವಸ್ತುಗಳು.
ಕೃತಕವಾಗಿ ಹಣ್ಣು ಮಾಡಿದ ಹಣ್ಣುಗಳ ರುಚಿ ಅಷ್ಟೇನೂ ಸೊಗಸಾಗಿ ಇರುವುದಿಲ್ಲ. ಇದಕ್ಕೆ ಪ್ರಮುಖ ಕಾರಣ ಕೃತಕವಾಗಿ ಹಣ್ಣು ಮಾಡಲು ಬಳಸುವ ರಾಸಾಯನಿಕ ವಸ್ತುಗಳು ಮೇಲ್ಭಾಗವನ್ನು ಮಾತ್ರ ಬದಲಾಯಿಸುತ್ತದೆ, ಆದರೆ ಹಣ್ಣಿನ ಒಳಗಿರುವ ಭಾಗವು ಇನ್ನೂ ಹಣ್ಣು ಆಗಿರುವುದಿಲ್ಲ, ಅದು ಕಾಯಿಯಾಗಿ ಉಳಿದಿರುತ್ತದೆ.
ಹಲವು ಅಧ್ಯಯನಗಳು ಹೇಳುವ ಪ್ರಕಾರ ಕಾರ್ಬೈಡ್ ಅತಿಯಾದ ಸೇವನೆ ಕ್ಯಾನ್ಸರ್ ಗೆ ಕಾರಣ ವಾಗಬಹುದು ಕಾರ್ಬೈಡ್ ನಲ್ಲಿ ಪಾಸ್ಪರಸ್ ಹೈಡ್ರೇಡ್ ಹಾಗೂ ಆರ್ಸೆನಿಕ್ ಅಂಶಗಳಿವೆ ಇದರಿಂದ ವಾಂತಿ ತಲೆಸುತ್ತು ಸುಸ್ತು ಎದೆಯಲ್ಲಿ ಹಾಗೂ ಹೊಟ್ಟೆಯಲ್ಲಿ ಉರಿದಂತೆ ಆಗುವುದು ಕಣ್ಣಿನಲ್ಲಿ ಉರಿದಂತಾಗುವುದು ಕಣ್ಣುಗಳ ದೃಷ್ಟಿಯನ್ನು ಕಳೆದುಕೊಳ್ಳುವುದು ಹಾಗೂ ಉಸಿರಾಟದ ಪ್ರಕ್ರಿಯೆಯ ತೊಂದರೆಯಾಗಬಹುದು.
ಕ್ಯಾಲ್ಸಿಯಂ ಕಾರ್ಬೈಡ್ ನಲ್ಲಿ ಆಲ್ಕಲೈನ್ ಅಂಶವು ಹೆಚ್ಚಾಗಿರುವುದರಿಂದ ಇದು ಹೊಟ್ಟೆಯೊಳಗಿರುವ ತೆಳುವಾದ ಪದರ ಕೂಡ ತೊಂದರೆ ಮಾಡಿ ಹೊಟ್ಟೆ ಹಾಗೂ ಕರುಳಿನ ಕೆಲಸಗಳಿಗೆ ಹಿಂಸೆ ನೀಡುತ್ತದೆ. ಅಸಿಟಲಿನ್ ಎಂಬ ಅಂಶವು ಇದರಲ್ಲಿ ಹೆಚ್ಚಾಗಿರುವುದರಿಂದ ಮೆದುಳಿನ ಕಾರ್ಯ ಚಟುವಟಿಕೆಗಳು ಕೂಡ ತೊಂದರೆ ಮಾಡಬಹುದು.
ಇತ್ತೀಚಿನ ದಿನಗಳಲ್ಲಿ ನಾವು ಬಳಸುವ ಎಷ್ಟ್ಟೋ ವಸ್ತುಗಳನ್ನು ನೈಸರ್ಗಿಕ ರೀತಿಯಲ್ಲಿ ಬಳಸುತ್ತಿಲ್ಲ. ಹಣ್ಣಿನ ವಿಷಯಕ್ಕೆ ಬಂದರೆ ನೈಸರ್ಗಿಕವಾಗಿ ಹಣ್ಣಾದ ಹಣ್ಣು ಹೆಚ್ಚಿನ ಪೋಷಕಾಂಶಗಳನ್ನು ಒಳಗೊಂಡಿದ್ದು ,ಯಾವುದೇ ರೀತಿಯ ಅಡ್ಡಪರಿಣಾಮಗಳನ್ನು ಬೀರುವುದಿಲ್ಲ.ಆದರೆ ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ವಸ್ತುಗಳನ್ನು ಬಳಸಿ ಅವುಗಳನ್ನು ಕೃತಕವಾಗಿ ಹಣ್ಣು ಮಾಡುವ ಮೂಲಕ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ. ಆದರೆ ಆ ಹಣ್ಣುಗಳನ್ನು ಖರೀದಿಸಿ ನಾವು ಉತ್ತಮ ಹಣ್ಣುಗಳು ಎಂದು ಭಾವಿಸಿ ಸೇವಿಸುತ್ತೇವೆ. ಆದರೆ ಒಂದು ವಿಪರ್ಯಾಸದ ವಿಷಯವೇನೆಂದರೆ ಸಾಮಾನ್ಯವಾಗಿ ರೈತರು ತಾವು ಬೆಳೆದ ಯಾವುದೇ ಹಣ್ಣುಗಳಿಗೆ ಕೃತಕವಾಗಿ ಹಣ್ಣಾಗುವ ಪದಾರ್ಥಗಳನ್ನು ಬಳಸುವುದಿಲ್ಲ.
ಹಣ್ಣುಗಳನ್ನು ಕೃತಕವಾಗಿ ಹಣ್ಣಾಗುವಂತೆ ಮಾಡುವವರು ವರ್ತಕರು.ರೈತರಿಂದ ಅತಿ ಕಡಿಮೆ ಬೆಲೆಗೆ ಹಣ್ಣುಗಳನ್ನು ಖರೀದಿಸಿ ಅವುಗಳನ್ನು ನೈಸರ್ಗಿಕವಾಗಿ ಹಣ್ಣಾಗಲು ಬಿಡದೆ, ಅವುಗಳನ್ನು ರಾಸಾಯನಿಕಗಳನ್ನು ಬಳಸಿ ಹಣ್ಣು ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಈ ರೀತಿ ಕೃತಕವಾಗಿ ಹಣ್ಣಾದ ಹಣ್ಣುಗಳು ಆರಂಭದಲ್ಲಿ ಯಾವುದೇ ತೊಂದರೆಗಳನ್ನು ನೀಡದಿದ್ದರೂ ಅವುಗಳನ್ನು ದೀರ್ಘಾವಧಿಯಲ್ಲಿ ಸೇವಿಸಿದರೆ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಬರುತ್ತವೆ. ಆದರೆ ಕೃತಕವಾಗಿ ಮಾಡಿದ ಹಣ್ಣು ಮತ್ತು ನೈಸರ್ಗಿಕವಾಗಿ ಹಣ್ಣಾದ ಹಣ್ಣಿನ ನಡುವೆ ಇರುವ ವ್ಯತ್ಯಾಸಗಳನ್ನು ನಾವು ಮೊದಲು ತಿಳಿದುಕೊಳ್ಳಬೇಕು.
The post ಹಣ್ಣು ಗಳನ್ನು ಕೃತಕವಾಗಿ ಹೇಗೆ ಹಣ್ಣಾಗಿಸುತ್ತಾರೆ:ಇಲ್ಲಿದೆ ವಿವರ appeared first on Hai Sandur kannada fortnightly news paper.
]]>The post ಇದೊಂದು ಪುಟ್ಟ ಕಥೆ:ಮೊಸರನ್ನ ತಿನ್ನುವುದರ ಗುಟ್ಟು. appeared first on Hai Sandur kannada fortnightly news paper.
]]>ರಾಜ್ಯದ ಹಿತದೃಷ್ಟಿಯಿಂದ, ಕಾಲಕಾಲಕ್ಕೆ ಮಳೆ ,ಬೆಳೆ ಚೆನ್ನಾಗಿ ಆಗಲಿ, ರಾಜ್ಯ ಸುಭೀಕ್ಷವಾಗಿರಲಿ ಎಂಬ ಆಶಯದಿಂದ ಆಗೊಮ್ಮೆ ಈಗೊಮ್ಮೆ ಎಂಬಂತೆ ಅರಮನೆಯಲ್ಲಿ ಯಜ್ಞ ,ಯಾಗ, ಹೋಮ, ಹವನ, ಮಾಡಿಸುತ್ತಿದ್ದನು. ಹಾಗೆ ಈ ಸಲವೂ ಸಹ ಏರ್ಪಡಿಸಿದನು. ರಾಜ್ಯದ ಎಲ್ಲಾ ಮೂಲೆಗಳಿಂದಲೂ ಜನ ಬರತೊಡಗಿದರು . ಯಾರಿಗೂ ಯಾವುದೇ ರೀತಿಯ ಕೊರತೆಯಾಗದಂತೆ ವ್ಯವಸ್ಥೆಯನ್ನು ಮಾಡಿಸಿದನು.ಪೂಜಾ ಕಾರ್ಯಗಳನ್ನು ನೆರವೇರಿಸಲು ಹೆಚ್ಚು ಸಂಖ್ಯೆಯಲ್ಲಿ ವಿಪ್ರೋತ್ತಮರು ಸೇರಿದ್ದರು. ಆಯಾ ದಿನದ ಹೋಮ ಹವನ ಮುಗಿದ ನಂತರ ಸ್ವಾದಿಷ್ಟವಾದ ಭೋಜನ, ಭೂರಿ ದಕ್ಷಿಣೆಗಳು ಸೇರಿದಂತೆ ಯಥೋಚಿತ ಸತ್ಕಾರವು ನಡೆಯುತ್ತಿತ್ತು.
ಪ್ರತಿದಿನ ಊಟದ ಸಮಯಕ್ಕೆ ಸ್ವಯಂ ರಾಜನೇ ಋತ್ವಿಜರುಗಳು ಕುಳಿತ ಪಂಕ್ತಿಯ ಮಧ್ಯೆ ಕೈಮುಗಿದು ನಡೆಯುತ್ತಾ , ನಿಧಾನವಾಗಿ ಊಟ ಮಾಡಿ,ಭೋಜನ ಸ್ವಾದಿಷ್ಟವಾಗಿದೆಯಾ? ಎಂದು ನಮ್ರತೆಯಿಂದ ಉಪಚರಿಸಿ ಎಲ್ಲವೂ ವ್ಯವಸ್ಥಿತವಾಗಿ ನಡೆದಿದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದನು. ಪ್ರತಿದಿನವೂ ರಾಜನು ಊಟ ಮಾಡುತ್ತಿರುವ ಬ್ರಾಹ್ಮಣರನ್ನು ಗಮನಿಸುವಾಗ ಬೇಕಾದಷ್ಟು ಭಕ್ಷ ಭೋಜ್ಯಗಳನ್ನು ತಿಂದು ತೇಗುತ್ತಿದ್ದರೂ ಕೊನೆಯಲ್ಲಿ ಮಾತ್ರ ಎಲ್ಲಾ ಬ್ರಾಹ್ಮಣರು ಎರಡು ತುತ್ತಾದರೂ ಮೊಸರನ್ನ ತಿನ್ನದೆ ಏಳುತ್ತಿರಲಿಲ್ಲ.ರಾಜನಿಗೆ ತುಂಬಾ ಆಶ್ಚರ್ಯವಾಯಿತು.
ಒಂದೆರಡು ದಿನದ ನಂತರ ರಾಜನೇ ಖುದ್ದಾಗಿ ನಿಂತು.ಎಲೆಯ ಮೇಲೆ ಚೆಲ್ಲುವಷ್ಟು ಸುಗ್ರಾಸ ಭೋಜನವನ್ನು ಬಡಿಸಲು ತಿಳಿಸಿದನು. ಎಂದಿನಂತೆ ರಾಜನು ಬಂದು ನೋಡಿದಾಗ ಎಲೆಯಲ್ಲಿ ಸಾಕಷ್ಟು ಚೆಲ್ಲಿದ್ದರೂ,ಮೊಸರನ್ನ ಮಾತ್ರ ಇಷ್ಟಪಟ್ಟೇ ತಿನ್ನುತ್ತಿರುವುದನ್ನು ಕಂಡು ಅಲ್ಲಿದ್ದ ಬ್ರಾಹ್ಮಣರನ್ನು ಉದ್ದೇಶಿಸಿ, ಬ್ರಾಹ್ಮಣೋತ್ತಮರೇ ನೀವು ಹೊಟ್ಟೆ ಹಿಡಿಯಲಾರದಷ್ಟು ಊಟ ಮಾಡಿದ ಮೇಲೂ ಈ ಮೊಸರು ಅನ್ನ ಹೊಟ್ಟೆಗೆ ಹೇಗೆ ಹಿಡಿಯುತ್ತದೆ. ಎಂದು ಕೇಳಿದನು. ಆಗ ಅಲ್ಲಿದ್ದ ಅನುಭವಿ ಬ್ರಾಹ್ಮಣರು ರಾಜ ನೀನು ಈಗ ಹೋಗು ನಾಳೆ ನಿನಗೆ ಉತ್ತರ ಕೊಡುತ್ತೇವೆ ಎಂದರು.
ಮರುದಿನ ಮತ್ತೆ ಹೋಮ ನಡೆವ ಜಾಗದಲ್ಲಿ ಸಾಕಷ್ಟು ಜನ ಸೇರಿದ್ದಾರೆ. ಹಿರಿಯ ಪುರೋಹಿತರು ರಾಜನು ಇದ್ದಲ್ಲಿಗೆ ಹೋಗಿ “ಮಹಾರಾಜ ನೀನು ಈ ದಿನ ಹೊರಗಡೆ ನಿಂತಿರುವ ಜನಗಳ ಗುಂಪಿನಿಂದಲೇ ಸಾಮಾನ್ಯ ಜನರು ನಡೆದು ಬರುವಂತೆ ಹೋಮ ನಡೆಯುವ ಸ್ಥಳಕ್ಕೆ ಬರಬೇಕು”. ಎಂದರು.
ರಾಜನು ಆಯಿತು ಎಂದ. ಹಾಗೆ ಹೊರಗೆ ಬಂದು ನೋಡಿದರೆ ಒಂದು ಇರುವೆಯು ಹೋಗಲಾರದಷ್ಟು ಜನ ತುಂಬಿದ್ದರು.
ಎಲ್ಲಾ ಕಡೆ ನೂಕುನುಗ್ಗಲು.
ಆದರೂ ಪುರೋಹಿತರು ಹೇಳಿದ ಆದೇಶದ ಮೇಲೆ ರಾಜನು ಜನಗಳ ಗುಂಪು ಎಲ್ಲಿಂದ ಆರಂಭವಾಗುತ್ತದೆಯೋ ಆ ಜಾಗಕ್ಕೆ ಹೋಗಿಅಂತೂ ಹೇಗೋ ನುಗ್ಗಿ, ನುಸುಳಿಕೊಳ್ಳುತ್ತಾ, ಅಂತೂ ಇಂತೂ ಹೋಮ ನಡೆಯುವ ಸ್ಥಳಕ್ಕೆ ಬಂದನು.
ರಾಜನು ಬಂದಮೇಲೆ ಹೋಮಕ್ಕೆ ಪೂರ್ಣಹುತಿಯನ್ನು ಹಾಕಲಾಯಿತು. ವೇದೋಕ್ತ ಮಂತ್ರಗಳ ಘೋಷಣೆ ಮಾಡಿದರು. ರಾಜನಿಗೆ ಯಥೋಚಿತ ಆಶೀರ್ವಾದವನ್ನು ಮಾಡಿದರು. ನಂತರ ಬ್ರಾಹ್ಮಣರು “ರಾಜನ್, ನೀನು ಇಲ್ಲಿಗೆ ಜನಗಳ ಗುಂಪಿನಲ್ಲಿ ನುಗ್ಗಿ ಬಂದೆ ಅಲ್ಲವೇ” ಎಂದರು. ಹೌದು ಹಾಗೆ ಬರಬೇಕು ಎಂದಿದ್ದಕ್ಕೆ , ಬರಬೇಕಾಯಿತು ಎಂದನು. ಬ್ರಾಹ್ಮಣರು ನಗುತ್ತಾ “ರಾಜಾ ನೋಡಿದಿಯಾ? ಬರಬೇಕು ಎಂದರೆ ನೀನು ಹೇಗೆ ಬಂದೆಯೋ ಹಾಗೆ ನಮಗೆ ಎಷ್ಟೇ ಹೊಟ್ಟೆ ತುಂಬಿದ್ದರೂ ಮೊಸರು ಅನ್ನಕ್ಕೂ ಹೀಗೆ ಜಾಗ ಸಿಗುತ್ತದೆ. ಹಾಗೆ ಎರಡೇ ಎರಡು ತುತ್ತು ಮೊಸರು ಅನ್ನ ತಿಂದಮೇಲೆ ನಮ್ಮ ಊಟ ಸಂಪನ್ನವಾಗುವುದು” ಎಂದರು. ಸಾತ್ವಿಕ ಆಹಾರ ಮೊಸರನ್ನವನ್ನು ಊಟದ ಕಡೆಯಲ್ಲಿ ತಿನ್ನುವುದರಿಂದ ಹುಳಿ ತೇಗು, ತಿಂದ ಆಹಾರ ಜಾಸ್ತಿಯಾಗಿ ಉಬ್ಬಳಿಕೆ ಬರುವುದು, ಬಿಕ್ಕಳಿಕೆ, ಖಾರದ ತೇಗು, ಸಿಹಿಯ ವಾಕರಿಕೆಗಳ ತೊಂದರೆ ಬರುವುದಿಲ್ಲ. ತಿಂದ ಆಹಾರ ಸರಾಗವಾಗಿ ಜೀರ್ಣವಾಗುತ್ತದೆ. ಹೀಗೆ ರಸಗವಳದ ನಂತರ ತಾಂಬೂಲ ಸೇವನೆ ಮಾಡಿ ವಿಶ್ರಾಂತಿ ತೆಗೆದುಕೊಂಡರೆ, ಇದನ್ನು ಸಂತೃಪ್ತ, ಸಂತುಷ್ಟ, ಸಮೃದ್ಧ , ಸ್ವಾದಿಷ್ಟವಾದ ಭೋಜನ ಎನ್ನುತ್ತಾರೆ. ಇದೇ ಮೊಸರು ಅನ್ನ ತಿನ್ನುವುದರ ಗುಟ್ಟು ಎಂದು ರಾಜನಿಗೆ ತಿಳಿಯಿತು.
ಇದು ನಮ್ಮ ಅಜ್ಜಿ ಹೇಳಿದ ಕಥೆ. ಇಂಥ ತುಂಬಾ ಕಥೆಗಳನ್ನು ಕಣ್ಣು ಬಾಯಿ ಅಗಲಿಸಿಕೊಂಡು ರಾತ್ರಿ-ಹಗಲು ಕೇಳುತ್ತಿದ್ದೆವು.
ವಂದನೆಗಳೊಂದಿಗೆ,
ಬರಹ:ಆಶಾ ನಾಗಭೂಷಣ.
The post ಇದೊಂದು ಪುಟ್ಟ ಕಥೆ:ಮೊಸರನ್ನ ತಿನ್ನುವುದರ ಗುಟ್ಟು. appeared first on Hai Sandur kannada fortnightly news paper.
]]>The post ಅಜಿನೋಮೋಟೋ ಎಂಬ ಸಕ್ಕರೆ ರೂಪದ ವಸ್ತು,ಎಳೆ ಮಕ್ಕಳಿಗೆ ಅದು ಬ್ರೈನ್ ಟ್ಯೂಮರ್,ಕ್ಯಾನ್ಸರ್ ಮುಂತಾದ ಮಾರಣಾಂತಿಕ ಖಾಯಿಲೆಗಳಿಗೆ ಕಾರಣವಾಗುತ್ತದೆ. appeared first on Hai Sandur kannada fortnightly news paper.
]]>ಆದರೆ ನನಗೆ ಅರ್ಥವಾಗದಿರುವ ವಿಚಾರವೇನೆಂದೆರೆ ಅದೇಕೆ ಆರೋಗ್ಯ ಇಲಾಖೆ ಆರೋಗ್ಯಕ್ಕೆ ಮಾರಕವಾದ
ಈ ವಸ್ತುವನ್ನು ನಿಷೇಧಿಸುವಂತೆ ಸರ್ಕಾರಕ್ಕೆ ವರದಿ ನೀಡುತ್ತಿಲ್ಲ?
ವರದಿ ನೀಡಿಯೂ ಸರ್ಕಾರ ನಿಷೇಧಿಸುತ್ತಿಲ್ಲವಾದರೆ ಇದರಲ್ಲಿ ಯಾರ ಹಿತಾಸಕ್ತಿ ಕಾಪಾಡಲಾಗುತ್ತಿದೆ?
ಈ ಕುರಿತು ಜನಸಾಮಾನ್ಯರು ಯೋಚಿಸಬೇಕಾಗಿದೆ, ಚಿಂತಿಸಬೇಕಾಗಿದೆ, ನಿಷೇಧಿಸುವಂತೆ ಪ್ರತಿಭಟಿಸಬೇಕಾಗಿದೆ ಅಥವಾ ಯಕಶ್ಚಿತ್ ಆ ವಸ್ತು ಹಾಕಿದ ಆಹಾರವನ್ನು ಬಹಿಷ್ಕರಿಸಬೇಕಾಗಿದೆ.
The post ಅಜಿನೋಮೋಟೋ ಎಂಬ ಸಕ್ಕರೆ ರೂಪದ ವಸ್ತು,ಎಳೆ ಮಕ್ಕಳಿಗೆ ಅದು ಬ್ರೈನ್ ಟ್ಯೂಮರ್,ಕ್ಯಾನ್ಸರ್ ಮುಂತಾದ ಮಾರಣಾಂತಿಕ ಖಾಯಿಲೆಗಳಿಗೆ ಕಾರಣವಾಗುತ್ತದೆ. appeared first on Hai Sandur kannada fortnightly news paper.
]]>The post ಕರಿಬೇವನ್ನು,ತಿನ್ನದೆ ಅದನ್ನು ತಟ್ಟೆಯ ಮೂಲೆಗೆ ತಳ್ಳುವವರೇ ಹೆಚ್ಚು. appeared first on Hai Sandur kannada fortnightly news paper.
]]>ಕರಿಬೇವಿನಲ್ಲಿ ನಾರಿನಂಶ, ಪ್ರೋಟಿನ್, ಕ್ಯಾಲ್ಸಿಯಂ, ಕ್ಯಾರೊಟೀನ್ ಹಾಗೂ ಹಲವಾರು ಬಗೆಯ ಅಮೈನೋ ಅಮ್ಲಗಳು ಹೇರಳವಾಗಿವೆ.
ನೆಗಡಿ, ಕೆಮ್ಮು, ಅಸ್ತಮಾದಂಥ ಶ್ವಾಸಕೋಶದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ಕರಿಬೇವಿನಲ್ಲಿ, ವಾಯುಕಾರಕ ಅಂಶವನ್ನು ತೆಗೆದುಹಾಕುವ ಗುಣವಿದ್ದು, ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.
ಅನಗತ್ಯ ವಿಷ ಪದಾರ್ಥವನ್ನು ದೇಹದಿಂದ ಹೊರ ಹಾಕಲು ಸಹಾಯ ಮಾಡುತ್ತದೆ. ಕರಗಿಸುವಲ್ಲಿ, ತೂಕ ನಿಯಂತ್ರಣದಲ್ಲಿ ಸಹಕಾರಿ.
ಕರಿಬೇವಿನ ಸೇವನೆಯಿಂದ ಚರ್ಮದ ಕಾಂತಿ ಹೆಚ್ಚುತ್ತದೆ.
ಕರಿಬೇವಿನಲ್ಲಿರುವ ಆಯಂಟಿ ಆಕ್ಸಿಡೆಂಟ್ಸ್ ದೇಹದ ಸಕ್ಕರೆ ಅಂಶವನ್ನು ನಿಯಂತ್ರಿಸಬಲ್ಲದು.
ಲಿವರ್ ಸಂಬಂಧಿತ ಕಾಯಿಲೆಗಳಿಂದ ರಕ್ಷಿಸುತ್ತದೆ.
ಕರಿಬೇವಿನಲ್ಲಿರುವ ಫೋಲಿಕ್ ಆಮ್ಲ ಮತ್ತು ಅಧಿಕವಾದ ಕಬ್ಬಿಣದ ಅಂಶ ರಕ್ತಹೀನತೆಯನ್ನು ನಿವಾರಿಸುತ್ತದೆ.
ಕರಿಬೇವಿನ ರಸವನ್ನು, ಬೆಲ್ಲದಲ್ಲಿ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಮುಂಜಾನೆ ಕುಡಿದರೆ ರಕ್ತಹೀನತೆ ನಿಯಂತ್ರಣಕ್ಕೆ ಬರುತ್ತದೆ.
ಕರಿಬೇವನ್ನು ಕುದಿಸಿ, ಕಷಾಯ ಮಾಡಿ ಕುಡಿಯುವುದರಿಂದ ಮೂತ್ರಕ್ಕೆ ಸಂಬಂಧಿಸಿದ ಕಾಯಿಲೆಗಳು ಗುಣಮುಖವಾಗುತ್ತವೆ.
ಅಪೌಷ್ಟಿಕತೆಯಿಂದ ಕೂದಲು ಬಿಳಿಯಾಗುವುದನ್ನು ಕರಿಬೇವು ತಡೆಯಬಲ್ಲದು.
ಪ್ರತಿದಿನ ಬೆಳಗ್ಗೆ ಕರಿಬೇವಿನ ಎಲೆ ತಿನ್ನುವುದರಿಂದ, ಕೊಬ್ಬರಿ ಎಣ್ಣೆಯಲ್ಲಿ ಕರಿಬೇವನ್ನು ಕುದಿಸಿ ತಲೆಗೆ ಹಚ್ಚುವುದರಿಂದ ಬಾಲ ನೆರೆ ತಡೆಯಬಹುದು.
ಕೂದಲು ಸೊಂಪಾಗಿ ಬೆಳೆಯಲು, ಕರಿಬೇವಿನಲ್ಲಿರುವ ಕಬ್ಬಿಣಾಂಶ ಸಹಾಯ ಮಾಡುತ್ತದೆ.
The post ಕರಿಬೇವನ್ನು,ತಿನ್ನದೆ ಅದನ್ನು ತಟ್ಟೆಯ ಮೂಲೆಗೆ ತಳ್ಳುವವರೇ ಹೆಚ್ಚು. appeared first on Hai Sandur kannada fortnightly news paper.
]]>