ಬಳ್ಳಾರಿ : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಇಂದು ನಗರ ಶಾಸಕ ಗಾಲಿ ಸೋಂಶೇಖರ ರೆಡ್ಡಿ, ರಾಜ್ಯ ಸಫಾಯಿ ಕರ್ಮಾಚಾರಿ ಅಭಿವೃದ್ದಿ ನಿಗಮದ ಅಧ್ಯಕ್ಷ ಹೆಚ್.ಹನುಮಂತಪ್ಪ., ಜಿಲ್ಲಾಧಿಕಾರಿ ನಕುಲ್, ಕಾಂಗ್ರೆಸ್ ಮುಖಂಡ ಮುಂಡ್ರಿಗಿ ನಾಗರಾಜ್, ಬಿಜೆಪಿ ಮುಖಂಡರುಗಳಾದ ಮೋತ್ಕರ್ ಶ್ರೀನಿವಾಸ್, ಎಸ್.ಮಲ್ಲನಗೌಡ ಮೊದಲಾದವರು ಅಂಬೇಡ್ಕರ್ ಭವನದ ಮುಂದಿನ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸೋಮಶೇಖರ ರೆಡ್ಡಿ ಅವರು ದೇಶದ ದಮನಿತರಿಗೆ ಸಂವಿಧಾನದ ಮೂಲಕ ಧ್ವನಿ ನೀಡಿದ ಮಹನೀಯ ಅಂಬೇಡ್ಕರ್ ಈ ದೇಶದ ಆಸ್ತಿ ಎಂದರು.