ಕೊಟ್ಟೂರು ಪಟ್ಟಣದ ಆರಾಧ್ಯ ದೈವ ಶ್ರೀ ಗುರು ಕೊಟ್ಟೂರೇಶ್ವರ ದೇವಸ್ಥಾನದ ಪ್ರಧಾನ ಧರ್ಮಕರ್ತರಾದ ಸಿ.ಹೆಚ್.ಎಂ. ಗಂಗಾಧರಯ್ಯ ಮೇಲೆ ಬುಧವಾರ ಎಫ್.ಐ.ಆರ್. ದಾಖಲಾಗಿದೆ. ದೇವಸ್ಥಾನದಲ್ಲಿ ಡಿ ದರ್ಜೆ ಕೆಲಸ ಮಾಡುವ ನಾಗರಾಜ್ ಎಂಬುವವರು ದೂರು ನೀಡಿದ ಅನ್ವಯ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಗರಾಜ್ ಎಂಬವ ವ್ಯಕ್ತಿ ಡಿ ದರ್ಜೆ ನೌಕರ 6 ವರ್ಷಗಳಿಂದ ಕೊಟ್ಟೂರೇಶ್ವರ ಹಿರೇಮಠದಲ್ಲಿ ಕೆಲಸ ನಿರ್ವಹಿಸುತ್ತಿದ್ದು,
ಇತ್ತೀಚೆಗೆ ಧರ್ಮಕರ್ತರಾದ ಗಂಗಾಧರಯ್ಯ ನಾಗರಾಜನಿಗೆ 3 ತಿಂಗಳಿನಿಂದಲೂ ಕೆಲಸ ಮಾಡುವ ಸಂದರ್ಭದಲ್ಲಿ ಕಿರುಕುಳ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿ ನಾಗರಾಜನ ಮೇಲೆ ಕೈ ಮಾಡಿದ್ದು, ಈ ಘಟನೆಗೆ ನೊಂದು ನಾಗರಾಜ್ ಹಿಂದಿನ ತಿಂಗಳ ಇಪ್ಪತ್ತೆಂಟು ನೇ ತಾರೀಖಿನಂದು ಮಾನಸಿಕವಾಗಿ ನೊಂದು ವಿಷ ಸೇವಿಸಿದ್ದು,
ಕೊಟ್ಟೂರು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿರುತ್ತಾರೆ. ಬುಧವಾರ ಠಾಣೆಗೆ ಬಂದು ದೂರು ನೀಡಿದ ಅನ್ವಯ ಕೊಟ್ಟೂರು ಪೊಲೀಸರು ಎಫ್.ಐ.ಆರ್. ದಾಖಲಿಸಿ ಐ.ಪಿ.ಸಿ.323 & 504 ರನ್ವಯ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ವರದಿ:- ಶಿವರಾಜ್ ಕನ್ನಡಿಗ