ಉಜ್ಜಿನಿ : ಪೂರ್ವ ಜಗದ್ಗುರುಗಳ ಕತೃ ಗದ್ದುಗೆಗಳ ಜೀರ್ಣೋಧ್ಧಾರ ಕಾರ್ಯಕ್ಕೆ ಪೀಠ ಮುಂದಾಗುತ್ತದೆ ಎಂದು ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.
ಉಜ್ಜಯಿನಿ ಪೀಠದಲ್ಲಿ ಸೋಮವಾರ ನಡೆದ ಪೂರ್ವ ಉಜ್ಜಯಿನಿ ಪೀಠದ ಪೀಠಾಚಾರ್ಯರಾದ ಚನ್ನಬಸವೇಶ್ವರ ಭಗವತ್ಪಾದ ಶಿವಾಚಾರ್ಯ ಜಗದ್ಗುರುಗಳು ಹಾಗೂ ಕೇದಾರ ಪೀಠದ ವಿಶ್ವೇಶ್ವರಲಿಂಗ ಭಗವತ್ಪಾದ ಶಿವಾಚಾರ್ಯ ಜಗದ್ಗುರುಗಳ ಕತೃ ಗದ್ದುಗೆಗಳಿಗೆ ಶಿಲಾಮಂಟಪದ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಭಕ್ತರ ಆಶಯದಂತೆ ಪೀಠದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪೀಠದ ಪುರೋಹಿತರಾದ ಯು.ಎಂ.ಸಿದ್ಧಲಿಂಗಯ್ಯ, ಬೆಳ್ಳಕಟ್ಟೆ ಲೋಕೇಶ್, ಪೀಠದ ವ್ಯವಸ್ಥಾಪಕ ವೀರೇಶ್,ಮುಖಂಡರಾದ ಎ.ಎಂ.ಚನ್ನವೀರಸ್ವಾಮಿ,ಕಮ್ಮಾರ ಎರಿಸ್ವಾಮಿ, ರಾಚೋಟಪ್ಪ, ಬಂಗಾರಿ ಶಿವಣ್ಣ ಮುಂತಾದ ಭಕ್ತರು ಪಾಲ್ಗೊಂಡಿದ್ದರು.
ಕೊಟ್ಟೂರು ತಾಲ್ಲೂಕಿನ ಉಜ್ಜಯಿನಿ ಪೀಠದಲ್ಲಿ ಪೂರ್ವ ಶಿವಾಚಾರ್ಯರ ಕತೃ ಗದ್ದುಗೆಗಳ ಶಿಲಾಮಂಟಪದ ಭೂಮಿ ಪೂಜೆ ಸಿದ್ಧಲಿಂಗಶಿವಾಚಾರ್ಯರ ನೇತೃತ್ವದಲ್ಲಿ ನಡೆಯಿತು.
ವರದಿ: ಶಿವರಾಜ್ ಕನ್ನಡಿಗ