ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಸುಟ್ಟಕೋಡಿಹಳ್ಳಿ ಗ್ರಾಮದ ಸರಕಾರಿ ಶಾಲೆಯ ಮೈದಾನದಲ್ಲಿ ವಿದ್ಯಾರ್ಥಿಗಳು ಆಟವಾಡಲು ಸರಿಯಾದ ಮೈದಾನ ಇಲ್ಲಾ ಮಳೆಗಾಲದಲ್ಲಿ ಮಳೆಬಂದರೆ ಸಾಕು. ಶಾಲೆ ಮೈದಾನದಲ್ಲಿ ತಗ್ಗು ಪ್ರದೇಶ ನಿರ್ಮಾಣವಾಗಿರುವ ಅವರಣದಲ್ಲಿ ನೀರು ನಿಂತು ಕೆರೆಯಂತಾಗಿ.ಗ್ರಾಮದ ವಿಧ್ಯಾರ್ಥಿಗಳು ಮೈದಾನದಲ್ಲಿ ಅಟ ವಾಡುವುದನ್ನು ಬಿಟ್ಟು ಮೈದಾನದಲ್ಲಿ ಮೀನು ಹಿಡಿಯುವ ಪರಿಸ್ಥಿತಿ ವಿಧ್ಯಾರ್ಥಿಗಳಿಗೆ ಇದೆ ಮತ್ತು ಈ ನೀರಿನಿಂದ ವಿದ್ಯಾರ್ಥಿಗಳಿಗೆ ಸಾಂಕ್ರಮಿಕ ರೋಗಗಳು ಹರಡಲು ನಿರ್ಮಾಣವಾಗಿದೆ.
ಕೂಡಲೇ ಶಾಸಕರು ಮತ್ತು ಸಂಭಂದ ಪಟ್ಟ ಅಧಿಕಾರಿಗಳು ಈ ಶಾಲೆಯ ವಿಧ್ಯಾರ್ಥಿಗಳಿಗೆ ಮೈದಾನದಲ್ಲಿ ಅಟವಾಡಲು ಸ್ವಚ್ಛತೆಯಿಂದ ಕೂಡಿದ ಮೈದಾನ ನಿರ್ಮಾಣ ಮಾಡಿಕೊಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಮೈದಾನಕ್ಕಾಗಿ ಸಂಭಂದ ಪಟ್ಟ ಕಛೇರಿಯ ಮುಂಭಾಗದಲ್ಲಿ ಗ್ರಾಮದ ಪೋಷಕರು ಮತ್ತು ವಿದ್ಯಾರ್ಥಿಗಳು. ಪ್ರತಿಭಟನೆ ಮಾಡುತ್ತೇವೆ ಎಂದು “ಹಾಯ್ ಸಂಡೂರ್” ಪತ್ರಿಕೆ ಪತ್ರಿಕೆಯಲ್ಲಿ ಸುಧ್ದಿ ಪ್ರಸಾರವಾಗಿತ್ತು.
ಈ ಸಾಮಾಜಿಕ ಕಳಕಳಿಯ ಅಧಿಕಾರಿಗಳು ಸ್ಪಂದಿಸಿ ಶಾಲೆಯ ಮೈದಾನ ಸ್ವಚ್ಛತೆಗೆ ಮುಂದಾದ ಸಂಭಂದಪಟ್ಟ ಅಧಿಕಾರಿಗಳಿಗೆ ರಾಂಪುರ ಗ್ರಾಮಪಂಚಾಯಿತಿ ಸದ್ಯಸರಾದ ಸುಟ್ಟಕೋಡಿಹಳ್ಳಿ ಕರಿಬಸಮ್ಮ ರೇವಣ್ಣ. ಮತ್ತು ಸಿ.ಪಿ.ಐ.ಎಂ.ಎಲ್. ಸಂಘಟನೆ ಕೊಟ್ಟೂರು ತಾಲೂಕು ಕಾರ್ಯದರ್ಶಿ ಜೆ.ಮಲ್ಲಿಕಾರ್ಜುನ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು.
ವರದಿ:ಶಿವರಾಜ್ ಕನ್ನಡಿಗ