ಹೊಸಪೇಟೆ (ವಿಜಯನಗರ) : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಗ್ರಾಮ ಸಂಪರ್ಕ ಯೋಜನೆಯಡಿ ಹೂವಿನಹಡಗಲಿ ತಾಲೂಕಿನ ಹ್ಯಾರಡ ಗ್ರಾಮದ ಜನನಿ ಪುಷ್ಪಕಲಾ ಯುವಕ ಸಂಘದ ಕಲಾ ತಂಡದವರು ಫೆ.21 ರಂದು ಹೂವಿನಹಡಗಲಿ ತಾಲೂಕಿನ ಕೊಂಬಳಿ ಮತ್ತು ಮುದ್ಲಗಟ್ಟೆ ಗ್ರಾಮಗಳಲ್ಲಿ ಮತ್ತು ಫೆ.22ರಂದು ಕಾಂತೇಬೆನ್ನೂರ ಮತ್ತು ಮೈಲಾರದಲ್ಲಿ ಬೀದಿನಾಟಕ ಪ್ರದರ್ಶಿಸಿ ಸರ್ಕಾರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿದರು.
ಸಂಘದ ಟಿ.ಚಮನ್ ಸಾಹೇಬ್, ಎಂ ಮಂಜುನಾಥ್, ಎಸ್ ಕೃಷ್ಣಪ್ಪ ಗೋವಿಂದ, ಹನುಮಯ್ಯ, ಹೊಸಂತ ಕುಮರಿ, ಮಮತ ಕೆ.ಎಸ್, ರವಿಕುಮಾರ್, ಮಹಾಂತೇಶ, ಸೇರಿ ಇತರರು ನಾಟಕ ಪ್ರದರ್ಶಿಸಿ, ಗ್ರಾಮದಲ್ಲಿ ಸಂಚರಿಸಿ, ತಮಟೆ ಬಾರಿಸಿ, ಹಾಡು ಹೇಳಿ ಸರ್ಕಾರದ ಗ್ಯಾರಂಟಿ ಯೋಜನೆಗಳು, ಶುಚಿತ್ವ ನೀರಿನ ಮಿತ ಬಳಕೆ ಬಗ್ಗೆ ಜಾಗೃತಿ ಮೂಡಿಸಿದರು.