ಕೊಟ್ಟೂರು:ಡಿ:14:ಪಟ್ಟಣದ ಡಾ.ಪಂಡಿತ್ ಪುಟ್ಟರಾಜ್ ಕವಿ ಗವಾಯಿಗಳವರ ಸೇವಾ ಸಮಿತಿ ಪರಮ ಪೂಜ್ಯ ಡಾ.ಪುಟ್ಟರಾಜ್ ಕವಿ ಗವಾಯಿಗಳವರ 13ನೇ ವರ್ಷದ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಡಿಸೆಂಬರ್ 18ರ ಭಾನುವಾರ ಸಂಜೆ 6.30ಕ್ಕೆ ಇಲ್ಲಿನ ಇಂದು ಕಾಲೇಜ್ನಲ್ಲಿ ಹಮ್ಮಿಕೊಂಡಿದೆ.
ಹೆಸರಾಂತ ಗಾಯಕರಾದ ಸುಬ್ರಮಣ್ಯ ಧಾರೇಶ್ವರ ಮತ್ತು ಕನ್ನಡ ಖಾಸಗಿ ವಾಹಿನಿಯ ಸರಿಗಮಪ ಪಿಯರ್ಲೆಸ್ ಸಿಂಗರ್ ಸಾಧ್ವಿನಿ ಕೊಪ್ಪ ರವರಿಂದ ಇಂಪಾದ ಗಾಯನದ ಮೂಲಕ ಸ್ವರ ನಮನ ನಡೆಯಲಿದೆ.
ಇದಕ್ಕೂ ಮೊದಲು 13ನೇ ವರ್ಷದ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಜಿ.ಪಂ.ಮಾಜಿ ಸದಸ್ಯ ಎಂ.ಎಂ.ಜೆ.ಹರ್ಷವರ್ಧನ ಉದ್ಘಾಟಿಸಲಿದ್ದಾರೆ.
ಇಂದು ಕಾಲೇಜಿನ ಆಡಳಿತಾಧಿಕಾರಿ ಹೆಚ್.ಎನ್.ವೀರಭದ್ರಪ್ಪ, ಅಧ್ಯಕ್ಷತೆ ವಹಿಸಲಿದ್ದು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಸಂಗೀತ ಆಸಕ್ತರು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಡಾ.ಪಂಡಿತ್ ಪುಟ್ಟರಾಜ್ ಕವಿ ಗವಾಯಿಗಳವರ ಸೇವಾ ಸಮಿತಿ ಬಳಗದ ಪ್ರಮುಖರಾದ ಸುಧಾಕರ ಪಾಟೀಲ್ ಕೋರಿದ್ದಾರೆ.
ವರದಿ: ಶಿವರಾಜ್ ಕನ್ನಡಿಗ