ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ದೇವಸ್ಥಾನದ ಹತ್ತಿರ ಕನ್ನಡ ನಾಡು ಹಿತ ರಕ್ಷಣಾ ವೇದಿಕೆ ರಾಜ್ಯ ಘಟಕ ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ಶ್ರೀಮತಿ ಗೀತಾ ಗಿರಿಜಾ ಮತ್ತು ರಾಜ್ಯ ಘಟಕದ ಸಂಸ್ಥಾಪಕ ಅಧ್ಯಕ್ಷರಾಗಿರ್ತಕ್ಕಂತ ಶ್ರೀ ಕೃಷ್ಣಮೂರ್ತಿ ಅವರು ತಮ್ಮ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು.
ಡಾ.ಎ.ಕೆ. ಬಸವರಾಜ್ ನಾಗರಕಟ್ಟೆ ಅವರನ್ನು ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಶ್ರೀ ಗುರು ಕೊಟ್ಟೂರೇಶ್ವರ ದೇವಾಲಯ ಮುಂಭಾಗದಲ್ಲಿ ಮತ್ತು ಬೆಳ್ಳಿ ರಥದಲ್ಲಿ ಇರುವ ತಾಯಿ ಭುವನೇಶ್ವರಿಯ ದೇವಿಯ ಸನ್ನಿಧಿಯಲ್ಲಿ ಆಯ್ಕೆ ಮಾಡಲಾಯಿತು
ಈ ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ದೇವರ ಮನೆ ಕೊಟ್ರೇಶ್ ಮತ್ತು ಜಿಲ್ಲಾ ಡಿಎಸ್ಎಸ್ ಸಂಚಾಲಕರಾಗಿರುವಂತ ತೆಗ್ಗಿನಕೇರೆ ಕೊಟ್ರೇಶ್ ಮತ್ತು ಕನ್ನಡ ಅಧ್ಯಾಪಕರ ಬಳಗ ಹಾಗೂ ವಿದ್ಯಾರ್ಥಿ ಮಿತ್ರರು ಕನ್ನಡ ಪರ ಕಾಳಜಿ ಇರುವ ಸ್ನೇಹಿತರು ಸಾಕ್ಷಿಯಾಗಿದ್ದರು ಇದೇ ಸಂದರ್ಭದಲ್ಲಿ ತಾಲೂಕು ಘಟಕದ ಅಧ್ಯಕ್ಷರಾಗಿ ಜುಂಜಿ ವರ್ಷವರ್ಧನ ಆಯ್ಕೆಯಾದರು ಮತ್ತು ಉಪಾಧ್ಯಕ್ಷರಾಗಿ ಎಂ ವಾಮದೇವ ನಾಗರಕಟ್ಟಿ ಅವರನ್ನು ಆಯ್ಕೆ ಮಾಡಲಾಯಿತು ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ ಶ್ರೀ ಪದ್ಮಣ್ಣ ಸಾಹಿತಿಗಳು ಮತ್ತು ಉಪನ್ಯಾಸಕರು ಹಾಗೂ ಶಿವಪ್ರಕಾಶ್ ಅವರನ್ನು ಆಯ್ಕೆ ಮಾಡಲಾಯಿತು