ಬಳ್ಳಾರಿ,ಮಾ.01:ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳ ಕುರಿತು ಧಾತ್ರಿ ರಂಗ ಸಂಸ್ಥೆಯ ಕಲಾ ತಂಡದವರಿಂದ ಶುಕ್ರವಾರ ಸಂಡೂರು ತಾಲೂಕಿನ ಡಿ.ಅಂತಾಪುರ, ಕೋಡಾಲು ಗ್ರಾಮಗಳಲ್ಲಿ ಬೀದಿನಾಟಕ ಪ್ರದರ್ಶಿಸಿದರು.
ಕಲಾವಿದರು ಗ್ರಾಮದಲ್ಲಿ ಸಂಚರಿಸಿ, ತಮಟೆ ಬಾರಿಸಿ, ಹಾಡು ಹೇಳುವ ಮೂಲಕ ಮತ್ತು ನಾಟಕ ಪ್ರದರ್ಶನ ಮೂಲಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಅರಿವು ಮೂಡಿಸಿದರು.
ಗ್ರಾಮದಲ್ಲಿ ಶುಚಿತ್ವ, ನೀರಿನ ಮಿತ ಬಳಕೆ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಜನ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ನ ಸದಸ್ಯರು, ಮುಖಂಡರು ಮತ್ತು ಅಧಿಕಾರಿ ವರ್ಗದವರು, ಸಾರ್ವಜನಿಕರು ಉಪಸ್ಥಿತರಿದ್ದರು.