ಬಳ್ಳಾರಿ:ಸೆ.17ರಂದು; ಜಾತಿ ನಿಂದನೆ ಮತ್ತು ಗುತ್ತಿಗೆದಾರರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಆರೋಪದ ಮೇಲೆ ಬಂಧಿತರಾಗಿರುವ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಂಗಳವಾರ ಕರ್ನಾಟಕ ಅಹಿಂದ ಜನ ಸಂಘ ಯುವ ಘಟಕದ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಎಂ.ಜಿ ಕನಕ ಅವರು ಆಗ್ರಹಿಸಿದರು.
ನಗರದಲ್ಲಿ ಮಂಗಳವಾರ ಮಾತನಾಡಿದ ಅವರು ಆಡಿಯೋ ಟೇಪ್ ಕೇಳಲು ಅಸಹ್ಯಕರವಾಗಿದೆ ಮತ್ತು ಒಬ್ಬ ಶಾಸಕರಾಗಿ ತಮ್ಮ ಜವಾಬ್ದಾರಿಯನ್ನು ಮರೆತು ಮಹಿಳೆಯರಿಗೆ ಇಷ್ಟೊಂದು ಅಗೌರವ ತೋರಿರುವುದು ಅವರ ವ್ಯಕ್ತಿತ್ವದ ಬಗ್ಗೆ ತೋರಿಸುತ್ತದೆ.
ಮಹಿಳೆಯರಿಗೆ ಅಗೌರವ ತೋರಿದ ಹಾಗೂ ಜಾತಿನಿಂದನೆ ಮಾಡಿದ ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಶಾಸಕ ಮುನಿರತ್ನ ಅವರು ರಾಜೀನಾಮೆ ನೀಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಂ.ಜಿ ಕನಕ ಎಚ್ಚರಿಕೆ ನೀಡಿದರು.