ಸತ್ತೂರದಲ್ಲಿರುವ ಕರ್ನಾಟಕ ಗ್ಯಾಸ್ ಇಂಡಸ್‍ಸ್ಟ್ರೀಸ್‍ಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಭೇಟಿ, ಪರಿಶೀಲನೆ

0
106

ಧಾರವಾಡ : ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಇಂದು ಬೆಳಿಗ್ಗೆ ಸತ್ತೂರದಲ್ಲಿರುವ ಕರ್ನಾಟಕ ಗ್ಯಾಸ್ ಇಂಡಸ್ಟ್ರೀಸ್‍ಗೆ ಭೇಟಿ ನೀಡಿ, ಆಕ್ಸಿಜನ್ ದಾಸ್ತಾನು, ಲಭ್ಯತೆ, ಸಕಾಲಕ್ಕೆ ಆಸ್ಪತ್ರೆಗಳಿಗೆ ಸರಬರಾಜು ಆಗುತ್ತಿರುವ ಕುರಿತು ಪರಿಶೀಲಿಸಿದರು.

ಇದೇ ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ತುರ್ತಾಗಿ ಆಕ್ಸಿಜನ್ ಸರಬರಾಜು ಮಾಡುವ ಕುರಿತು ಸಿಬ್ಬಂದಿಗಳು ಅಣಕು ಪ್ರದರ್ಶನ ಮೂಲಕ ಹುಬ್ಬಳ್ಳಿಯ ಕೆಲವು ಆಸ್ಪತ್ರೆಗಳಿಗೆ ಆಕ್ಸಿಜನ್ ಸಿಲಿಂಡರ್‍ಗಳನ್ನು ನಿಗದಿತ ಅವಧಿಯಲ್ಲಿ ಸರಬರಾಜು ಮಾಡಿ ತೋರಿಸಿದರು. ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ, ಕಾನೂನು ವಿವಿಯ ಕುಲಸಚಿವ ಮತ್ತು ನೋಡಲ್ ಅಧಿಕಾರಿ ಮಹಮ್ಮದ ಜುಬೇರ, ಎಸಿಪಿ ಅನುμÁ ಜಿ., ತಹಸಿಲ್ದಾರ ಸಂತೋಷ ಬಿರಾದರ, ಆರ್‍ಟಿಓ ಅಧಿಕಾರಿಗಳಾದ ಅಪ್ಪಯ್ಯ ನಾಲ್ವತವಾಡಮಠ, ಬಿ. ಶಂಕರಪ್ಪ, ಜಿಲ್ಲಾ ಔಷಧ ನಿಯಂತ್ರಣಾಧಿಕಾರಿ ಮಲ್ಲಿಕಾರ್ಜುನ ಕೆ.ಎಸ್. ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದು, ಅಣಕು ಪ್ರದರ್ಶನ ಸಾಕ್ಷಿಕರಿಸಿದರು.

LEAVE A REPLY

Please enter your comment!
Please enter your name here