ಕರೋನಾ ನಿಯಂತ್ರಣಕ್ಕೆ ಸರ್ಕಾರ ಜನತಾಕರ್ಪು ಹಾಗೂ ಲಾಕ್ಡೌನ್ ಗೆ ಅದೇಶ ನೀಡಿದ್ದು, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು ಸಂಡೂರು ನ ಪ್ರತಿಷ್ಠಿತ ಬಿಕೆಜಿ ಕಂಪನಿಯು ಮುಖ್ಯ ಬೀದಿಗಳಲ್ಲಿ ನೂರು ಹಾಸಿಗೆಯ ಅಸ್ಪತ್ರಯಲ್ಲಿ ರೋಗ ನಿರೋಧಕ ದ್ರಾವಣ ಸ್ಯಾನಿ ಟೈಸರ್ ಸಿಂಪರಣೆ ಮಾಡುವಲ್ಲಿ ಮುಂದಾಗಿದ್ಫಾರೆ.
ಕಳೆದ ವರ್ಷ ಲಾಕ್ ಡೌನ್ ಸಂಧರ್ಭದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಸಮಾಜದ ಹಾಗೂ ಸಾರ್ವಜನಿಕರ ಒಳಿತಿಗಾಗಿ ತಾಲೂಕಿನ ಪ್ರತಿ ಹಳ್ಳಿಗೂ ಸ್ಯಾನಿ ಟೈಸರ್ ಸಿಂಪರಣೆ ವ್ಯವಸ್ತೆವನ್ನು ಮಾಡಿದ್ದರು.
ಈ ಬಾರಿಯೂ ಸಹ ಜನರ ಆರೋಗ್ಯ ಕಾಪಾಡುವಲ್ಲಿ ವಾರಿಯರ್ಸ್ ಗಳಾಗಿ ಎಲ್ಲರೂ ಕರೋನಾ ಮಹಾಮಾರಿಯಿಂದ ತಪ್ಪಿಡಿಕೊಳ್ಳಲು ಮನೆಯಲ್ಲಿದ್ದರೆ ಬಿಕೆಜಿ ಕಂಪನಿಯ ಸಿಬ್ಬಂದಿಯು ಪಟ್ಟಣದ ಪ್ರಮುಖ ಬೀದಿ ಮತ್ತು ಪ್ರಮುಖ ಸ್ಥಳಗಳಲ್ಲಿ ರೋಗ ನಿರೋಧಕ ದ್ರಾವಣ ಸಿಂಪರಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಈ ಸಮಯದಲ್ಲಿ ಬಿಕೆಜಿ ಕಂಪನಿಯ ವಾಹನ ಚಾಲಕರಾದ ಮಹೇಶ್ ಹಾಗೂ ಎಲೆಕ್ಟ್ರಿಷಿಯನ್ ಬೆಟ್ಟಪ್ಪ ಇದ್ದರು.