ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಜಯಂತಿಯ ಅಂಗವಾಗಿ ಭಾವಚಿತ್ರಕ್ಕೆ ಬ್ರಾಹ್ಮಣರ ಓಣಿಯ ಶ್ರೀ ರಾಮಮಂದಿರದಲ್ಲಿ ಪೂಜೆ ಸಲ್ಲಿಸಿ, ಸಿಂಧನೂರಿನ ಪೋಲಿಸ್ ಸಿಬ್ಬಂದಿಗಳಿಗೆ, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ, ನಿರ್ಗತಿಕರಿಗೆ ದಡೇಸಗೂರು ಉಮಲೂಲಿ, ಹಂಚಿನಾಳ ಕ್ಯಾಂಪ್ ಚೆಕ್ ಪೋಸ್ಟ್ನ ಪೋಲಿಸ್ ಸಿಬ್ಬಂದಿಗಳಿಗೆ, ತುರುವಿಹಾಲ ಪಟ್ಟಣದಲ್ಲಿ ಪೋಲಿಸ್ ಸಿಬ್ಬಂದಿಗಳಿಗೆ,ಆರೋಗ್ಯ ಕೇಂದ್ರದಲ್ಲಿ ವೈದ್ಯರಿಗೆ, ಸಿಬ್ಬಂದಿಗಳಿಗೆ, ಆಹಾರದ ಪೋಟ್ಟಣಗಳನ್ನು ಬ್ರಾಹ್ಮಣ ಸಮಾಜದ ಯುವಕರಿಂದ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅವಿನಾಶ ದೇಶಪಾಂಡೆ, ಹನುಮೇಶ ಜಾಗೀರದಾರ, ಜಗನ್ನಾಥರಾವ್ ಕರಡೋಣಿ, ಗುರುರಾಜ ಕುಲಕರ್ಣಿ ಒಳಬಳ್ಳಾರಿ, ಜಗನ್ನಾಥ ದೇಶಪಾಂಡೆ,ಆನಂದ ಗೌರಕರ್, ಚಿಂತಾಮಣಿ ಜೋಶಿ, ಪ್ರಲ್ಹಾದ ಕುಲಕರ್ಣಿ, ಕೃಷ್ಣ ಮಲ್ಕಸಮುದ್ರ, ಪ್ರಭಾಕರ ಕುಲಕರ್ಣಿ ಸೇರಿದಂತೆ ಹಲವರಿದ್ದರು.