ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿ: ಬಸನಗೌಡ ಬಾದರ್ಲಿ.

0
189

ಸಿಂಧನೂರು ನೂತನವಾಗಿ ನೇಮಕ ಮಾಡಲಾದ ತಾಲೂಕ ಅಲ್ಪಸಂಖ್ಯಾತರ ನಗರ ಘಟಕದ ಅಧ್ಯಕ್ಷರಾದ ಅಮೀನ್ ಸಾಬ್ ತಂದೆ ಖಾದರ್ ಸಾಬ್ (ಬುಡ್ಡ ಸಾಬ್ ಡೊಂಗ್ರಿ) ಇವರನ್ನು ಹಾಗೂ ಗ್ರಾಮೀಣ ಘಟಕಕ್ಕೆ ಶ್ರೀ ದಾದಾಪೀರ್ ತಂದೆ ರಾಜ್ ಮೊಹಮ್ಮದ್ ಸಾಕಿನ್ ದಡೇಸುಗೂರು ಅವರನ್ನು ನೇಮಕಾತಿ ಮಾಡಲಾಯಿತು ನಂತರ ಮಾತನಾಡಿದ ಬಸನಗೌಡ ಬಾದರ್ಲಿ ಅವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಕಾಂಗ್ರೆಸ್ ಪಕ್ಷ ಸಂಘಟನೆಗೆ ಕ್ರಿಯಾಶೀಲರಾಗಿ ಸೇವೆ ಸಲ್ಲಿಸಿ, ಪಕ್ಷದ ಎಲ್ಲಾ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು ಎಂದು ಯೂತ್ ಕಾಂಗ್ರೆಸ್ ಮಾಜಿ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ಅವರು ಸಲಹೆ ನೀಡುವ ಮೂಲಕ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ಟಿ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ವೆಂಕಟೇಶ ರಾಗಲಪರ್ವಿ ಅವರು ಹಾಗೂ ಯೂನುಸ್ ಪಾಷಾ ದಡೇಸುಗುರು,ಯುವ ಕಾಂಗ್ರೆಸ್ ತಾಲೂಕ ಮಾಜಿ ಅಧ್ಯಕ್ಷರಾದ ಖಾಜಾ ಹುಸೇನ್ ರೌಡಕುಂದ,ಇಲಿಯಾಸ್ ಪಟೇಲ್,ಹಬೀಬಿ ಖಾಜಿ, ಅವರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ:ಅವಿನಾಶ ದೇಶಪಾಂಡೆ

LEAVE A REPLY

Please enter your comment!
Please enter your name here