ಸಿಂಧನೂರು ನಗರದ ರಾಮ ಕಿಶೋರ ಕಾಲೋನಿಯಲ್ಲಿರುವ ವಿವೇರಾ ಗ್ರ್ಯಾಂಡ್ 38 ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ 200 ಸಸಿಗಳನ್ನ ವಿತರಣೆ ಮಾಡಲಾಯಿತು.
ಪ್ರತಿ ವರ್ಷ ವನಸಿರಿ ಫೌಂಡೇಶನ್ ವತಿಯಿಂದ ಸಸಿಗಳನ್ನು ವಿತರಣೆ ಮಾಡುತ್ತಿರುವ ಕಾರ್ಯಕ್ಕೆ ಮಹಿಳೆಯರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿ, ಸಂತೋಷ ಸಡಗರದಿಂದ ಸಸಿಗಳನ್ನು ನೆಡುವ ಸಂಕಲ್ಪ ಮಾಡಿದರು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಅದ್ಯಕ್ಷರಾದ ಅಮರೇಗೌಡ ಮಲ್ಲಾಪುರ, ಜಿಲ್ಲಾ ಮಹಿಳಾ ಅಧ್ಯಕ್ಷೆ ಸಂಗೀತ ಸಾರಂಗಮಠ,ಗೌರವ ಅಧ್ಯಕ್ಷೆ ರಾಜೇಶ್ವರಿ ತಡಕಲ್, ಎನ್. ಶಿವ ಲಯನ್ಸ್ ಕ್ಲಬ್ ಸಿಂಧನೂರು, ಹಲವಾರು ಮಹಿಳೆಯರು, ಯುವಕರು ಉಪಸ್ಥಿತರಿದ್ದರು.
ವರದಿ:ಅವಿನಾಶ್ ದೇಶಪಾಂಡೆ ✍️