ಮಂಡ್ಯ.ಮೇ.24 – ಜಿಲ್ಲೆಗೆ ಅಜೀಂ ಪ್ರೇಮ್ ಜೀ ಫೌಂಡೇಷನ್ ವತಿಯಿಂದ 50 ಜಂಬೋ ಸಿಲಿಂಡರ್ ಬಂದಿದ್ದು ಇದರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಎಸ್.ಅಶ್ವಥಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ವಿಪ್ರೋ ಎಪ್ಲಾಯಿಸ್ ಅಸೋಸಿಯೆಷನ್ ವತಿಯಿಂದ ನೀಡಿದ ಜಂಬೋ ಸಿಲಿಂಡರ್ ಗಳನ್ನು ಸ್ವೀಕರಿಸಿ ಮಾತನಾಡಿದ ಅವರು,
ವಿಪ್ರೋ ಸಂಸ್ಥೆ ವತಿಯಿಂದ ಕೋವಿಡ್ -19 ಸಂಬಂಧ ಮುಂದಿನ ದಿನಗಳಲ್ಲಿ ಆಹಾರಕಿಟ್, ಇನ್ನಿತರ ವ್ಯವಸ್ಥೆಗೆ ಕ್ರಮವಹಿಸಿದ್ದಾರೆ ಈ ನಿಟ್ಟಿನಲ್ಲಿ ಜಿಲ್ಲೆಗೆ ಸೌಲಭ್ಯಗಳನ್ನು ನೀಡಲು ಮುಂದೆ ಬಂದಿರುವ ಸಂಸ್ಥೆಯ ನಡೆ ಸ್ವಾಗತಾರ್ಹ ಎಂದರು.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸೋಮಶೇಖರ್ .ಜಿ.ಎಸ್, ಆರೋಗ್ಯಾಧಿಕಾರಿ ಡಾ.ಮಂಚೇಗೌಡ, ವಿಪ್ರೋ ಸಂಸ್ಥೆಯ ಶಶಿಧರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.