ಕೊಟ್ಟೂರು: ಮೇ 10 ರಂದು ನಡೆಯುವ ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತವನ್ನು ಕ್ರಮ ಸಂಖ್ಯೆ 03 ರ ಹಸ್ತದ ಗುರುತಿಗೆ ಮತವನ್ನು ಹಾಕಿ ಹಾಗೂ ಹಾಕಿಸಿ ಪ್ರಚಂಡ ಬಹುಮತದಿಂದ ಆರಿಸಿ ತಂದು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮತ್ತೊಮ್ಮೆ ಆಶೀರ್ವದಿಸುವಂತೆ ಯುವ ಮುಖಂಡರು ಕಾರ್ತಿಕ್ ಎಂ. ಮನವಿ ಮಾಡಿ ಮತ ಯಾಚನೆ ಮಾಡಲಾಯಿತು.i
ಈ ಸಮಯದಲ್ಲಿ ಗ್ರಾಮದ ಹಿರಿಯರು ಮತ್ತು ತಾಯಂದಿರು ಪಕ್ಷದ ನಾಯಕರು ಹಾಗೂ ಯುವನಾಯಕರು ಸ್ವಾಗತಿಸಿದ ರೀತಿಗೆ ಪ್ರೀತಿಗೆ ನಾನು ಯಾವಾಗಲೂ ಚಿರಋಣಿ. ನಿಮ್ಮೆಲ್ಲರ ಪ್ರೀತಿ ಅಭಿಮಾನವೇ ನನಗೆ ಶ್ರೀರಕ್ಷ ಎಂದರು.
ಈ ಸಂಧರ್ಭದಲ್ಲಿ ಗ್ರಾಮದ ಹೊಸಕೋಡಿಹಳ್ಳಿ ಮುಖಂಡರು ಹಾಗೂ ಭೀಮನಾಯ್ಕ ಯೂಥ್ಸ್
ಕ್ಲಬ್ ಕಾಂಗ್ರೆಸ್ ಯುವ ನಾಯಕರಾದ ಎಂ.ಎಂ.ಜೆ. ಮಂಜುನಾಥ್, ಎನ್. ಟಿ. ಕೊಟ್ರೇಶ್, ಉಲ್ಲಾಸ್, ಶರಣು, ನವೀನ, ಭಾಸ್ಕರ್, ಮತ್ತು ಪಕ್ಷದ ಕಾರ್ಯಕರ್ತರು ಇದ್ದರು.
ವರದಿ: ಶಿವರಾಜ್ ಕನ್ನಡಿಗ