ಕೋವಿಡ್ ಸಾಂಕ್ರಾಮಿಕ ರೋಗ ತಡೆಗಟ್ಟಲು ಹಾಗೂ ಜನವಿರೋಧಿ ಕೃಷಿ ಕಾನೂನುಗಳು ಮತ್ತು ಕಾರ್ಮಿಕ ವಿರೋಧಿ ಕಾನೂನುಗಳನ್ನು ವಾಪಸ್ಸು ಪಡೆಯಲು ಒತ್ತಾಯಿಸಿ ಮನವಿ.

0
107

ಜನವಿರೋಧಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರ ಐತಿಹಾಸಿಕ ಹೋರಾಟವು ಇಂದು ಮೇ 26 ಕ್ಕೆ ಆರು ತಿಂಗಳು ಸಂಪೂರ್ಣಗೊಳ್ಳಲಿದೆ.
ಟ್ರೇಡ್ ಯೂನಿಯನ್ ಗಳ ಅಖಿಲ ಭಾರತ ಮುಷ್ಕರ ಆರು ತಿಂಗಳುಗಳನ್ನು ಪೂರ್ತಿಗೊಳಿಸಿದೆ ಜೊತೆಗೆ ದೇಶದಲ್ಲಿ ಮಾರಣಾಂತಿಕ ಕೋವಿಡ್ ಸೋಂಕು ಹಾಗೂ ಗ್ರಾಮೀಣ ಗ್ರಾಮೀಣ ಪ್ರದೇಶಗಳಲ್ಲಿ ತೀವ್ರವಾಗಿ ಹೆಚ್ಚುತ್ತಿದೆ, ಜನಸಾಮಾನ್ಯರು ಸಮರ್ಪಕ ಚಿಕಿತ್ಸೆ ಸಿಗಲಾರದೆ ಸಾವಿಗೀಡಾಗುತ್ತಿದ್ದಾರೆ.

ಇನ್ನೊಂದೆಡೆ ಸರ್ಕಾರಗಳು ತಮ್ಮ ವೈಫಲ್ಯ ಮುಚ್ಚಿಕೊಳ್ಳುವ ಸಲುವಾಗಿ ಬೇಕಾಬಿಟ್ಟಿ ಘೋಷಿಸಿರುವುದರಿಂದಾಗಿ ಅಗತ್ಯ ಆಹಾರದ ಕೊರತೆಯಿಂದಾಗಿ ಹಸಿವಿನಿಂದ ಜನತೆ ಸಾಯುವಂತಾಗಿದೆ.
ಅಲ್ಲದೆ ಇದ್ದ ದುಡಿಮೆಯನ್ನು ಕಳೆದುಕೊಂಡು ಅತ್ಯಂತ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ತೀವ್ರವಾಗಿ ಹೆಚ್ಚುತ್ತಿರುವ ನಿರುದ್ಯೋಗದ ಮಧ್ಯೆಯೇ ಜನತೆ ಇದ್ದ ದುಡಿಮೆಯನ್ನು ಕಳೆದುಕೊಂಡು ಕಂಗಾಲಾಗಿರುವ ಕೆಟ್ಟ ಸ್ಥಿತಿ, ಆಹಾರದ ಕೊರತೆ ಹಾಗೂ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯವಿರುವ ಆಸ್ಪತ್ರೆಗಳು ,ಔಷಧಿ ,ಆಕ್ಸಿಜನ್, ವೆಂಟಿಲೇಟರ್ ಸಿಬ್ಬಂದಿ ನೇಮಕ ಇತ್ಯಾದಿ ಸೌಲಭ್ಯಗಳನ್ನು ಹಾಗೂ ಆಹಾರ ಭದ್ರತೆ ಒದಗಿಸಿ ಜನರ ಪ್ರಾಣಗಳನ್ನು ರಕ್ಷಿಸಬೇಕಾದ ಸರ್ಕಾರ ಹೃದಯ ಹೀನವಾಗಿ ಕಾರ್ಪೊರೇಟ್ ಪರ ನೀತಿಗಳನ್ನು ನಿರ್ಲಜ್ಜವಾಗಿ ಅನುಸರಿಸುತ್ತಿರುವುದು ಖಂಡನೀಯ.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಸಂಡೂರು ತಾಲೂಕು ಸಮಿತಿ ಕೇಂದ್ರ ಸರ್ಕಾರವು ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿನ ವಿಫಲತೆಯನ್ನು ತೀವ್ರವಾಗಿ ಖಂಡಿಸುತ್ತವೆ.
ದೇಶದ ಜನರ ಸಂಕಷ್ಠಗಳಿಗೆ ಪ್ರಧಾನಿಗಳು ಹಾಗೂ ರಾಜ್ಯದ ಮುಖ್ಯಮಂತ್ರಿಗಳು ಸಂಪೂರ್ಣ ನಿರ್ಲಕ್ಷ ತೋರಿಸಿದ್ದಾರೆ.

ಮೂರು ಜನವಿರೋಧಿ ಕೃಷಿ ಕಾನೂನುಗಳು ಮತ್ತು ನಾಲ್ಕು ಕಾರ್ಮಿಕ ವಿರೋಧಿ ಕಾನೂನುಗಳನ್ನು ತಕ್ಷಣ ರದ್ದುಪಡಿಸಬೇಕೆಂದು ನಾವು ಒತ್ತಾಯಿಸುತ್ತೇವೆ.
ದೇಶವ್ಯಾಪಿ ಪ್ರತಿಭಟನೆಯ ಭಾಗವಾಗಿ ಇಂದು ಕರ್ನಾಟಕ ರಾಜ್ಯವ್ಯಾಪಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿ- ಯುವಜನ- ಮಹಿಳೆಯರು, ರೈತ-ಕಾರ್ಮಿಕರು ಹಾಗೂ ಜನಸಾಮಾನ್ಯರು ಮನೆ ಮನೆಯೆದುರು “ಕಪ್ಪುದಿನ” ಘೋಷಣೆಯ ಪ್ರತಿಭಟನೆ ನಡೆಸಿ ಈ ಕೆಳಕಂಡ ಬೇಡಿಕೆಗಳನ್ನು ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಡೇರಿಸಲು ಮುಂದಾಗಬೇಕು. ಇಲ್ಲವಾದಲ್ಲಿ ರಾಷ್ಟ್ರವ್ಯಾಪಿ ತೀವ್ರವಾದ ಹೋರಾಟಕ್ಕೆ ಜನತೆ ಮುಂದಾಗಬೇಕಾಗುತ್ತದೆ ಎಂದು ಡಿವೈಎಫ್ಐ ಸಂಡೂರು ತಾಲೂಕು ಸಮಿತಿ ಆಗ್ರಹಿಸುತ್ತವೆ.

ಬೇಡಿಕೆಗಳು
1) ಆಮ್ಲಜನಕ ವೆಂಟಿಲೇಟರ್ ಔಷಧಿ ಮತ್ತು ಆಸ್ಪತ್ರೆಯಲ್ಲಿ ಹಾಸಿಗೆಗಳನ್ನು ಒದಗಿಸಲು ಪಿಎಂ ಕೇರ್ ನ ಬೃಹತ್ ಹಣವನ್ನು ಬಳಸಬೇಕು. ಸೆಂಟ್ರಲ್ ವಿಸ್ಟಾ ಯೋಜನೆಯನ್ನು ನಿಲ್ಲಿಸಿ ಅದರ ಹಣವನ್ನು ಸಹ ಕೋವಿಡ್ ರೋಗ ನಿಯಂತ್ರಣಕ್ಕೆ ಬಳಸಬೇಕು.
2) ಆರೋಗ್ಯ ಸೌಲಭ್ಯಗಳು ಎಲ್ಲರಿಗೂ ಉಚಿತವಾಗಿ ಲಭ್ಯವಾಗುವಂತೆ ಮಾಡಬೇಕು.ಎಲ್ಲಾ ನಾಗರಿಕರಿಗೆ ಉಚಿತ ಸಾವ್ರತ್ರಿಕ ಲಸಿಕೆ ನೀಡಬೇಕು.
3) ಖಾಸಗಿ ಆರೋಗ್ಯ ವ್ಯವಸ್ಥೆಯನ್ನು ನಿಯಂತ್ರಿಸಲು ತಕ್ಷಣವೇ ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳಬೇಕು.
4) ಆರೋಗ್ಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಬೇಕಾಗುವಷ್ಟು ಹಣವನ್ನು ನಿಗದಿಪಡಿಸಬೇಕು.
5) ತೆರಿಗೆದಾರರಲ್ಲದ ಕುಟುಂಬಗಳ ಖಾತೆಗೆ ತಕ್ಷಣ rs.10000 ಹಾಕಬೇಕು.6) ಆರು ತಿಂಗಳವರೆಗೆ ಅಗತ್ಯವಿರುವ ಎಲ್ಲರಿಗೂ 10 ಕೆಜಿ ಆಹಾರಧಾನ್ಯಗಳನ್ನು ಉಚಿತವಾಗಿ ನೀಡಬೇಕು. ದ್ವಿದಳ ಧಾನ್ಯ, ಎಣ್ಣೆ ಸಕ್ಕರೆ ಮುಂತಾದ ಇತರ ಅಗತ್ಯ ವಸ್ತುಗಳನ್ನು ಪಿಡಿಎಸ್ -ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ಒದಗಿಸಬೇಕು
7) ಮನರೇಗಾ ಉದ್ಯೋಗ ಖಾತ್ರಿ ಕೆಲಸವನ್ನು 200 ದಿನಕ್ಕೆ ವಿಸ್ತರಿಸಿ, ಕೂಲಿಯನ್ನು rs.600 ಹೆಚ್ಚಿಸಬೇಕು ಹಾಗೂ ನಗರ ಉದ್ಯೋಗ ಖಾತ್ರಿ ಯೋಜನೆಯನ್ನು ಪ್ರಾರಂಭಿಸಬೇಕು.
8) ಖಾಸಗಿ ವಲಯದಲ್ಲಿ ಉದ್ಯೋಗ ಕಳೆದುಕೊಂಡವರಿಗೆ ಪರಿಹಾರ ಒದಗಿಸಬೇಕು.
9) ಎಲ್ಲಾ ನೊಂದಾಯಿತ ನೊಂದಾಯಿತ ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆಯನ್ನು ನೀಡಬೇಕು.
10) ಪಡಿತರ ವ್ಯವಸ್ಥೆಯಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಉಚಿತವಾಗಿ ನೀಡಿ.
11) ಶೈಕ್ಷಣಿಕ ಕ್ಷೇತ್ರದ ಸೆಮಿಸ್ಟರ್ ಶುಲ್ಕ ಸೇರಿದಂತೆ ಎಲ್ಲಾ ತರಹದ ಶುಲ್ಕಗಳನ್ನು ಹಿಂತೆಗೆದುಕೊಳ್ಳಬೇಕು. ಎಲ್ಲಾ ಶೈಕ್ಷಣಿಕ ಸೌಲಭ್ಯಗಳು ಅಗತ್ಯ ಗ್ಯಾಜೆಟ್ಗಳು ಮತ್ತು ಇಂಟರ್ನೆಟ್ ಸೇವೆಗಳನ್ನು ಎಲ್ಲಾ ಬಡವರಿಗೆ ಹಾಗೂ ಸಾಮಾಜಿಕವಾಗಿ ದುರ್ಬಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಒದಗಿಸಬೇಕು.
ಎಸ್.ಕಾಲುಬಾ.ಅದ್ಯಕ್ಷರು. ಎಚ್.ಸ್ವಾಮಿ, ಕಾರ್ಯದರ್ಶಿ ಡಿ.ವೈ.ಎಫ್.ಐ.ಸಂಡೂರು ತಾಲೂಕು ಸಮಿತಿ.

LEAVE A REPLY

Please enter your comment!
Please enter your name here