ಕೊಟ್ಟೂರು:ಜುಲೈ:12:- ತಾಲೂಕಿನ
ಅಪ್ಪು ಅಭಿಮಾನಿ ಬಳಗ ಸಂಘದ ಅಧ್ಯಕ್ಷರಾದ ಪ್ರಕಾಶ್ ರಾಂಪುರ ಅವರ ನೇತೃತ್ವದಲ್ಲಿ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 60ನೇ ವರ್ಷದ ಹುಟ್ಟುಹಬ್ಬವನ್ನು ಉತ್ತಂಗಿ ರುದ್ರಮ್ಮನ ವೃದ್ರಾಶ್ರಮ ಮತ್ತು ಅನಾಥಾಶ್ರಮದಲ್ಲಿ ರುದ್ರಮ್ಮ ಇವರಿಂದ ಕೇಕ್ ಅನ್ನು ಕತ್ತರಿಸಿ ಶಿವರಾಜ್ ಕುಮಾರ್ ಅವರ 60 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಯಿತು
![](https://haisandur.com/wp-content/uploads/2022/07/IMG-20220712-WA0174.jpg)
ನಂತರ ಡಾ. ಶಿವರಾಜಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಅಪ್ಪು ಅಭಿಮಾನಿಯಾದ ಪ್ರಕಾಶ್ ರಾಂಪುರದ ಇವರು 6000 ರೂ ಗಳ ರೇಷನ್ ಕಿಟ್ಟನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ರುದ್ರಾಶ್ರಮದ ಉತ್ತಂಗಿ ರುದ್ರಮ್ಮನವರಿಗೆ ಸನ್ಮಾನ ಮಾಡಿ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ನೀಡಲಾಯಿತು.
ಪುನೀತ್ ರಾಜಕುಮಾರ್ ಅವರ ಅಭಿಮಾನಿಯಾದ ಪ್ರಕಾಶ್ ರಾಂಪುರ ಮಾತಾನಾಡಿ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಆದರ್ಶಗಳನ್ನು ಪಾಲಿಸುತ್ತೇನೆ ಇದೇ ರೀತಿ ನನ್ನ ಕೈಲಾದ ಸಹಾಯವನ್ನು ಮಾಡುತ್ತೇನೆ. ಹಾಗೂ ಎಲ್ಲರೂ ಕೈಲಾದ ಸಹಾಯವನ್ನು ಮಾಡಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಪ್ರಕಾಶ್ ರಾಂಪುರವರು ಮಾತನಾಡಿದರು.
ಈ ಸಂದರ್ಭದಲ್ಲಿ ಕೆ.ಎಂ.ಎಂ ಗುರುಸ್ವಾಮಿ, ಕೆ ಅಜ್ಜಯ್ಯ, ಜಿ .ರಾಜಕುಮಾರಪ್ಪ, ಮರಿಯಪ್ಪ, ಆರ್ ಶಿವಪ್ರಸಾದ್, ಬಣಕಾರ್ ಕೊಟ್ರೇಶ್, ಪ್ರಸಾದ್ ಎಲ್. ಕೊಟ್ರೇಶ್ ಹಾಗೂ ಇತರರು ಉಪಸ್ಥಿತರಿದ್ದರು.
ವರದಿ: ಶಿವರಾಜ್ ಕನ್ನಡಿಗ