ಕೋಗಳಿ ಗ್ರಾಮದಲ್ಲಿ ಪಂಡಿತ ಪುಟ್ಟರಾಜರಿಗೆ ನುಡಿ ನಮನ

0
138

ವಿಜಯನಗರ:ಜುಲೈ:12:-ಕೊಟ್ಟೂರು ತಾಲೂಕಿನ ಕೋಗಳಿ ಗ್ರಾಮದಲ್ಲಿ ಗಾನಯೋಗಿ, ಶಿವಯೋಗಿ, ತ್ರಿಭಾಷ ಪಂಡಿತ, ಅಂಧ ಅನಾಥರ ತಂದೆ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಪುಣ್ಯರಾಧನೆ ಕಾರ್ಯಕ್ರಮವನ್ನ ಕೋಗಳಿ ಗ್ರಾಮದ ಶ್ರೀ ಗುರು ಪಂಚಾಕ್ಷರ ಗವಾಯಿಗಳ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು,

ಕಾರ್ಯಕ್ರಮದಲ್ಲಿ ಕೊಟ್ಟೂರಿನ ಚಾಣುಕೋಟಿ ಮಠದ ಶ್ರೀ ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಹಂಪಸಾಗರದ ಶಿವಲಿಂಗ ರುದ್ರಮುನಿ ಸ್ವಾಮಿಗಳು ದಿವ್ಯ ಸಾನಿಧ್ಯವಹಿಸಿ ಮಾತನಾಡಿ, ಭಾವಪೂರ್ಣ ನುಡಿ ನಮನ ಕಾರ್ಯಕ್ಕೆ ಶುಭ ಹಾರೈಸಿದರು.

ಕೆ. ಬಸವರಾಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಕಾರ್ಯಕ್ರಮದಲ್ಲಿ ಹೊಂಬಾಳಿ ಕೊಟ್ರೇಶಪ್ಪ, ಗಚ್ಚಿನ ಕೊಟ್ರೇಶಪ್ಪ, ಬಿ. ಕೆಂಚಪ್ಪ,ಕೆ ನಿಜಗುಣ, ಶೆಟ್ರು ಪಂಪಣ್ಣ, ಅಶೋಕಯ್ಯ, ಹಂಚಿನಾಳ ರಮೇಶ, ಉಮಾಶಂಕರ, ಉತ್ತಗಿ ಬನ್ನೇಪ್ಪ ಶಂಕ್ರಯ್ಯ, ಚಂದ್ರಯ್ಯ, ಮುಂತಾದವರು ಉಪಸ್ಥಿತರಿದ್ದರು. ಬೆಳಿಗ್ಗೆ ಯಿಂದ ಸಾಯಂಕಾಲದವರೆಗೂ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ಥಳೀಯ ಹಾಗೂ ಹೊರಗಿನ ಕಲಾವಿಧರು ಭಾಗವಹಿಸಿದ್ದರು. ಕಲಾವಿದರಿಗೆ ಸನ್ಮಾನಿಸಲಾಯಿತು.
ವಿ ರವಿ ನಿರೂಪಿಸಿದರು, ಕೆ. ಸಿದ್ದಪ್ಪ ಸ್ವಾಗತಿಸಿದರು, ಮರುಳಾಸಿದ್ದಯ್ಯ ವಂದಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here