ಸ್ವಾಭಿಮಾನಿ ಶಾಲಾ ಪ್ರಶಸ್ತಿ ಸಂಭ್ರಮ: ಬಿ ಕೆ ವಿ ಸರಕಾರಿ ಪ್ರೌಢಶಾಲೆ ನಿಂಬಳಗೆರೆ

0
237

ಕೊಟ್ಟೂರು: ನಿಂಬಳಗೇರಿಯ ಸ್ವಾಭಿಮಾನಿ ಶಾಲಾ ಪ್ರಶಸ್ತಿ ಸಂಭ್ರಮ ವಿಜ್ಞಾನ ದಿನಾಚರಣೆ ಮತ್ತು ಎ ಟಿ ಏಲ್ ಕಮ್ಯುನಿಟಿ ಡೇ ಬಿ ಕೆ ವಿ ಸರಕಾರಿ ಪ್ರೌಢಶಾಲೆ ನಿಂಬಳಗೆರೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯವಾಗಿ ಫಕೀರಪ್ಪ ಭಾಗವಹಿಸಿದ್ದರು.

ಬುಡ್ರಿ ಗಂಗಮ್ಮ ಮಹಾಂತೇಶ್ ಗ್ರಾಮ ಪಂಚಾಯಿತಿ ಅಧ್ಯಕ್ಷರು ನಿಂಬಳಗೆರೆ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿದರು

ವಿಶೇಷ ಉಪನ್ಯಾಸಕರಾಗಿ ಇಸ್ರೋದ ಖ್ಯಾತ ವಿಜ್ಞಾನಿಗಳಾದ ಡಾಕ್ಟರ್ ವಿ ಗಿರೀಶ್ ಉಪ ನಿರ್ದೇಶಕರು ಇಸ್ರೋ ಬೆಂಗಳೂರು ಇವರು ಗ್ರಾಮೀಣ ಪ್ರದೇಶಗಳಲ್ಲಿ ವಿಜ್ಞಾನ ಮಹತ್ವವನ್ನು ವಿವರಿಸಿ ವಿದ್ಯಾರ್ಥಿಗಳಿಗೆ ವಿಜ್ಞಾನದ ಮಹತ್ವವನ್ನು ಹಾಗೂ ಸಮಾಜಕ್ಕೆ ವಿಜ್ಞಾನದ ಕೊಡುಗೆಯನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳಿ ಗ್ರಾಮ ಪಂಚಾಯಿತಿ ಸದಸ್ಯರಿಗೂ ಊರಿನ ಮುಖಂಡರಿಗೂ ಶಾಲೆಯ ಎಲ್ಲಾ ಶಿಕ್ಷಕರಿಗೂ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಜಗದೀಶ್ ಕ್ಷೇತ್ರ ಸಮನ್ವಯಾಧಿಕಾರಿಗಳು ಕೆಜಿ ಆಂಜನೇಯ ಸಹಾಯ ನಿರ್ದೇಶಕರ ಅಕ್ಷರ ದಾಸೋಹ ಗ್ರಾಮ ಪಂಚಾಯತಿ ಅಧ್ಯಕ್ಷರು ಬುಡ್ರಿ ಗಂಗಮ್ಮ ಮಹಾಂತೇಶ್ ಶಾಲಾ ಭುದಾನಿಗಳು ಕೊಟ್ರೇಶಪ್ಪ ಜಿಎಂಸಿ ಟ್ರಸ್ಟ್ ಗುರುಸಿದ್ಧ ಸ್ವಾಮಿ ಎಸ್ ಡಿ ಎಂ ಸಿ ಅಧ್ಯಕ್ಷರು ಸರ್ವ ಸದಸ್ಯರು, ಸ್ವಾಮಿ ವಿವೇಕಾನಂದ ಟ್ರಸ್ಟ್ ನಿಂಬಳಗೆರೆ ಊರಿನ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ವಿಜ್ಞಾನ ಶಿಕ್ಷಕರಾದ ಪತ್ರೇಶ್ ಸ್ವಾಗತಿಸಿದರು.

LEAVE A REPLY

Please enter your comment!
Please enter your name here