ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಸುಟ್ಟಕೋಡಿಹಳ್ಳಿ ಗ್ರಾಮದ ಸರಕಾರಿ ಶಾಲೆಯ ಮೈದಾನದಲ್ಲಿ ವಿದ್ಯಾರ್ಥಿಗಳು ಆಟವಾಡಲು ಸರಿಯಾದ ಮೈದಾನ ಇಲ್ಲಾ ಮಳೆಗಾಲದಲ್ಲಿ ಮಳೆ ಬಂದರೆ ಸಾಕು ಶಾಲೆ ಮೈದಾನದಲ್ಲಿ ತಗ್ಗು ಪ್ರದೇಶ ನಿರ್ಮಾಣವಾಗಿರುವ ಅವರಣದಲ್ಲಿ ನೀರು ನಿಂತು ಕೆರೆಯಂತಾಗಿ.ಗ್ರಾಮದ ವಿಧ್ಯಾರ್ಥಿಗಳು ಮೈದಾನದಲ್ಲಿ ಅಟ ವಾಡುವುದನ್ನು ಬಿಟ್ಟು ಮೈದಾನದಲ್ಲಿ ಮೀನು ಹಿಡಿಯುವ ಪರಿಸ್ಥಿತಿ ವಿಧ್ಯಾರ್ಥಿಗಳಿಗೆ ಇದೆ ಮತ್ತು ಈ ನೀರಿನಿಂದ ವಿದ್ಯಾರ್ಥಿಗಳಿಗೆ ಸಾಂಕ್ರಮಿಕ ರೋಗಗಳು ಹರಡಲು ನಿರ್ಮಾಣವಾಗಿದೆ.
ಕೂಡಲೇ ಶಾಸಕರು ಮತ್ತು ಸಂಭಂದಪಟ್ಟ ಅಧಿಕಾರಿಗಳು ಈ ಶಾಲೆಯ ವಿಧ್ಯಾರ್ಥಿಗಳಿಗೆ ಮೈದಾನದಲ್ಲಿ ಅಟವಾಡಲು ಸ್ವಚ್ಛತೆಯಿಂದ ಕೂಡಿದ ಮೈದಾನ ನಿರ್ಮಾಣ ಮಾಡಿಕೊಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಮೈದಾನಕ್ಕಾಗಿ ಸಂಭಂದ ಪಟ್ಟ ಕಛೇರಿಯ ಮುಂಭಾಗದಲ್ಲಿ ಗ್ರಾಮದ ಪೋಷಕರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತೇವೆ. ಎಂದು ತಾಲೂಕು ಸಿ.ಪಿ.ಐ.ಎಂ.ಎಲ್ ಸಂಘಟನೆ ಜಿ.ಮಲ್ಲಿಕಾರ್ಜುನ ಸುಧ್ದಿಗಾರರಿಗೆ ಮಾತನಾಡಿದರು.
ವರದಿ: ಶಿವರಾಜ್ ಕನ್ನಡಿಗ