ಕುರುಗೋಡು ಸಮೀಪದ ತೊರಣಗಲ್ಲಿನ ಪ್ರಿಯದರ್ಶಿನಿ ಹೋಟೆಲ್ ನಲ್ಲಿ ಗುರುವಾರ ವಿವಿಧ ಪಕ್ಷದ ಮುಖಂಡರು ಹಾಗೂ ಯುವಕರು ಅಭ್ಯರ್ಥಿಯಾದ ಕೆ.ಎಸ್.ದಿವಾಕರ್ ಅವರ ಸಮ್ಮಖದಲ್ಲಿ ಸೇರ್ಪಡೆಗೊಂಡರು.
ನಂತರ ಅಭ್ಯರ್ಥಿ ಕೆ.ಎಸ್ ದಿವಾಕರ್ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿ, ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಿದ್ದು, ಈ ಬಾರಿಯ ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಲು ಮತದಾರರು ನಿರ್ಧರಿಸಿದ್ದಾರೆ. ವಿರೋಧ ಪಕ್ಷಗಳಿಗೆ ಈ ಚುನಾವಣೆಯಲ್ಲಿ ಫುಟ್ಬಾಲ್ ಆಟ ಆಡಲಿದ್ದೇವೆ
ತಾರಾನಗರದಲ್ಲಿ ನಮ್ಮ ಅಭಿಮಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಹಾಗೂ ಕಾರ್ಯಕರ್ತರು ನಮ್ಮನ್ನು ಅದ್ಧೂರಿಯಾಗಿ ಸ್ವಾಗತಿಸಿರುವುದನ್ನು ಕಂಡಿದ್ದು, ಗೆಲ್ಲಿಸುವುದು ಖಚಿತವಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವಶಂಕರ್. ಸೇರಿದಂತೆ ಕಾರ್ಯಕರ್ತರಿದ್ದರು.