ರಾಷ್ಟ್ರೀಯ ಏಕತಾ ದಿನಚರಣೆಯ ಅಂಗವಾಗಿ ಐಕ್ಯತೆಯ ಕುರಿತು ಪ್ರತಿಜ್ಞೆ ಸ್ವೀಕಾರ,

0
128

ಸಂಡೂರು: ಅ:31: ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮ ದಿನಾಚರಣೆ ಅಂಗವಾಗಿ “ರಾಷ್ಟ್ರೀಯ ಏಕತಾ ದಿನ” ಆಚರಿಸಲಾಯಿತು, ಕಾರ್ಯಕ್ರಮದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ಗೋಪಾಲ್ ರಾವ್ ಅವರು ಮಾತನಾಡಿ ಪಟೇಲರನ್ನು ನೆನೆಯುವುದು ನಮ್ಮ ಕಲ್ಯಾಣ ಕರ್ನಾಟಕ ಭಾಗದ ನಮಗೆಲ್ಲ ಹೆಮ್ಮೆ, ಶ್ರೀ ವಲ್ಲಭಭಾಯ್ ಪಟೇಲ್ ಅವರ ಕಾರ್ಯಗಳಿಂದ ನಾವುಗಳು ಸ್ವತಂತ್ರರಾದೆವು, ಅವರ ಏಕೀಕರಣದ ಸ್ಪೂರ್ತಿಯನ್ನು ಸದಾಕಾಲ ಸ್ಮರಿಸಬೇಕಿದೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ,ಸ್ವತಂತ್ರ ಭಾರತದಲ್ಲಿ ಹಲವು ರಾಜರ ಆಡಳಿತವಿದ್ದ ರಾಜ್ಯಗಳನ್ನು ಒಟ್ಟು ಗೂಡಿಸಲು ಮಾಡಿದ ಪ್ರಯತ್ನ ಮತ್ತು ಏಕತೆಯ ದೂರದೃಷ್ಟಿ ಎಲ್ಲರೂ ಹೆಮ್ಮೆ ಪಡುವಂತಹದ್ದು, ಪ್ರಪಂಚದ ಅತೀ ಎತ್ತರ 182 ಮೀಟರ್ ಎತ್ತರದ ಅವರ ಕಂಚಿನ ಪ್ರತಿಮೆ ನಮ್ಮ ದೇಶದಲ್ಲಿ ಸ್ಥಾಪಿಸಿರುವುದೇ ನಮಗೆಲ್ಲಾ ಹೆಮ್ಮೆ, ಪ್ರತಿಯೊಬ್ಬರೂ ರಾಷ್ಟ್ರದ ಐಕ್ಯತೆಗಾಗಿ ಶ್ರಮಿಸುವ ಕುರಿತು ಪ್ರತಿಜ್ಞಾ ವಿಧಿಯನ್ನು ಭೋದಿಸಿದರು,ಎಲ್ಲರು ಪ್ರತಿಜ್ಞೆಯನ್ನು ಕೈಗೊಂಡರು,

ಈ ಸಂದರ್ಭದಲ್ಲಿ ಡಾ.ಮಣಿ ಕುಮಾರ್, ಅಧಿಕ್ಷಕ ಹರ್ಷ,ಪ್ರಶಾಂತ್ ಕುಮಾರ್, ಕೇಂದ್ರದ ಅಧಿಕಾರಿಗಳು,ಸಿಬ್ಬಂದಿಯವರು ಮತ್ತು ಸಾರ್ವಜನಿಕರು ಹಾಜರಿದ್ದರು

LEAVE A REPLY

Please enter your comment!
Please enter your name here