ಅನುಕಂಪದ ಕೆಲಸ ಮಾಡಿಕೊಡಲು ಮೃತ ಶಿಕ್ಷಕನ ಪತ್ನಿಯಿಂದ ಲಂಚ ಪಡೆಯುವ ವೇಳೆ ಮೂಡಿಗೆರೆ ಬಿಇಓ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮೃತಪಟ್ಟ ಶಿಕ್ಷಕನ ಅನುಕಂಪದ ಕೆಲಸ ಮಾಡಿಕೊಡಲು ಆತನ ಪತ್ನಿಯಿಂದ 10 ಸಾವಿರ ಲಂಚದ ಹಣ ಪಡೆಯುವ ವೇಳೆ ಮೂಡಿಗೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ರಾಜ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮೂಡಿಗೆರೆ ಬಿಇಓ ಕಚೇರಿಯಲ್ಲೇ ಲಂಚದ ಹಣ ಪಡೆಯುವ ವೇಳೆ ಭ್ರಷ್ಟ ಬಿಇಓ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮೂಡಿಗೆರೆ ತಾಲೂಕಿನ ಹೊಯ್ಸಳಲು ಗ್ರಾಮದ ಶಿಕ್ಷಕ ರಜನಿಕಾಂತ್ ಹೃದಯಾಘಾತದಿಂದ ಮೃತಪಟ್ಟ ನಂತರ ಅವರ ಪತ್ನಿ ಲತಾಗೆ ಅನುಕಂಪದ ಕೆಲಸ ಮಾಡಿಕೊಡಲು ಮೊದಲಿಗೆ 15 ಸಾವಿರ ಲಂಚದ ಬೇಡಿಕೆ ಇಟ್ಟಿರುತ್ತಾರೆ ನಂತರ 10 ಸಾವಿರ ಕೇಳಿ ಅದನ್ನು ಪಡೆಯುವ ವೇಳೆ ಸಿಕ್ಕಿಬಿದ್ದಿದ್ದಾರೆ. ಭ್ರಷ್ಟ ಅಧಿಕಾರಿ ಹೇಮಂತ್ ಕುಮಾರ್ ಗೆ ಸಹಕರಿಸಿದ ಬಿಇಓ ಕಚೇರಿಯ ಎಸ್ ಡಿ ಎ ಬಷೀರ್ ಮೇಲೂ ಲತಾ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಲೋಕಾಯುಕ್ತ ಇನ್ಸ್ಪೆಕ್ಟರ್ ಅನಿಲ್ ರಾಥೋಡ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.