ಬಳ್ಳಾರಿ,ಮಾ.05:ನಗರದ ಕೋಟೆ ಪ್ರದೇಶದಲ್ಲಿರುವ ವಸತಿ ರಹಿತ ನಾಗರೀಕರ ಕೇಂದ್ರಕ್ಕೆ ಮಹಾನಗರ ಪಾಲಿಕೆಯ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಸತಿ ರಹಿತ ಕೇಂದ್ರ ಮತ್ತು ಕೇಂದ್ರದಲ್ಲಿರುವ ದಾಖಲೆಗಳನ್ನು ಪರಿಶೀಲಿಸಿದರು. ವಸತಿ ರಹಿತರಿಗೆ ನೀಡಲಾಗುತ್ತಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕೇಂದ್ರದಲ್ಲಿ ಇನ್ನೂ ಒದಗಿಸಬೇಕಾದ ಮೂಲಭೂತ ಸೌಕರ್ಯಗಳನ್ನು ಆದಷ್ಟು ಬೇಗನೆ ಕಲ್ಪಿಸುವಂತೆ ಪಾಲಿಕೆಯ ಕಾರ್ಯಪಾಲಕ ಅಭಿಯಂತರರಾದ ಖಾಜಾಮೊಯಿನುದ್ದೀನ್ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ವೃಷಭೇಂದ್ರಗೌಡ, ಸುವರ್ಣ, ಪಾಲಿಕೆಯ ಅಭಿಯಾನ ವ್ಯವಸ್ಥಾಪಕರು ಮತ್ತು ದೇವರಾಜ್, ಗೌರಮ್ಮ ಜಂಭಯ್ಯಸ್ವಾಮಿ ಚಾರಿಟೇಬಲ್ ಮತ್ತು ಎಜುಕೇಷನ್ ಟ್ರಸ್ಟ್ ಸಂಸ್ಥೆಯ ವಸತಿ ರಹಿತ ಕೇಂದ್ರ ನಿರ್ವಾಹಣಾ ಸಂಸ್ಥೆಯ ಅಧ್ಯಕ್ಷ ಶರಭಯ್ಯ ಎಂ.ಜೆ ಹಾಗೂ ಇತರರು ಇದ್ದರು.