ಕೋಟೆ ವೀರಭದ್ರೇಶ್ವರ ಸ್ವಾಮಿ ಕಾರ್ತಿಕೋತ್ಸವ.

0
219

ಕೊಟ್ಟೂರು: ಪಟ್ಟಣದ ಕೋಟೆಭಾಗದ ವೀರಭದ್ರೇಶ್ವರ ಸ್ವಾಮಿ ಕಾರ್ತಿಕೋತ್ಸವ ಪ್ರಯುಕ್ತ ಮಂಗಳವಾರ ಸಂಜೆ ಪೂಜಾ ಕೈಂಕಾರ್ಯಗಳನ್ನು ನೆರವೇರಿಸಿ ಸಮಸ್ತ ಭಕ್ತ ಸಮೂಹದಲ್ಲಿ ಸಂಭ್ರಮದೊಂದಿಗೆ ಕ್ರಿಯಾ ಮೂರ್ತಿಗಳು ಆರ್. ಎಂ. ಶಿವಪ್ರಕಾಶ ಕೊಟ್ಟೂರು ದೇವರು ದೀಪೋತ್ಸವಕ್ಕೇ ಚಾಲನೆ ನೀಡಿದರು.

ಸಮಳ,ನಂದಿಧ್ವಜ ಮೇಳಗಳ ಸಂಭ್ರಮದಲ್ಲಿ ದೀಪೋತ್ಸವಕ್ಕೆ ಚಾಲನೆ ದೊರೆಯುತ್ತಿದ್ದಂತೆ ಭಕ್ತರು ಪ್ರಣತಿಗೆ ಎಣ್ಣೆ ಭತ್ತಿ ಹಾಕಿ ದೀಪ ಬೆಳಗಿಸಿ ಭಕ್ತಿ ಸಮರ್ಪಿಸಿದರು.

ಚಾಲನೆ ವೇಳೆ ದೈವಸ್ಥರಾದ ಕೆಂಪಳ್ಳಿಗೌಡ, ಕನ್ನಳ್ಳಿ ಮಂಜುನಾಥ್, ಕನ್ನಳ್ಳಿ. ರಾಜಪ್ಪ, ಶಿವಕುಮಾರ್ ಗೌಡ, ಕೆಎಸ್‌ ನಾಗರಾಜ್ ಗೌಡ, ಬಣಕಾರ ಬಸವರಾಜ್, ಸಿದ್ಧನಗೌಡ ಮತ್ತು ಪಟ್ಟಣದ ಮುಖಂಡರು ಹಾಗೂ ಕೊಟ್ಟೂರು ಕಟ್ಟೀಮನಿ ದೈ ವಸ್ತರು ಹಾಗೂ ಕೊಟ್ಟೂರಿನ ಸಮಸ್ತ ಭಕ್ತಾದಿಗಳು ಮುಂತಾದವರು ಇದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here