ಕೇಂದ್ರ-ರಾಜ್ಯ ಮಂತ್ರಿಗಳು ಪ್ರಚಾರಕ್ಕೆ ಬಂದರು ಪಂಚಾಯತಿ ಸ್ಥಾನ ಗೆಲ್ಲಲು ಆಗಲಿಲ್ಲ; ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟೇಲ್ ಜಿ.ಪಾಪನಾಯಕ

0
428

ಚಿತ್ರದುರ್ಗ:ಮೇ:22-:-ಮೊಳಕಾಲ್ಮುರು ತಾಲೂಕಿನ ರಾಯಪುರ ಗ್ರಾಮ ಪಂಚಾಯತಿ ಯರ್ರೆನಹಳ್ಳಿ ಪಂಚಾಯಿತಿ ಸದಸ್ಯನ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಮೇ 20ರಂದು ಉಪಚುನಾವಣೆ ನಡೆದಿತ್ತು

ಒಟ್ಟು 982 ಮತಗಳು ಪೋಲಿಂಗ್ ಆಗಿತ್ತು ಅದರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಿ.ಬಿ.ಪಾಪಣ್ಣ 689 ಮತಗಳನ್ನ ಪಡೆದರೆ ಪ್ರತಿಸ್ಪರ್ದಿ ಬೋಸಯ್ಯ 271 ಮತಗಳನ್ನು ಪಡೆದಿದ್ದಾರೆ, ಪಾಪಣ್ಣ 418 ಮತಗಳಿಂದ ಜಯಗಳಿಸಿದ್ದಾರೆ

ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟೇಲ್ ಜಿ ಪಾಪನಾಯಕ ಅವರು ನೂತನವಾಗಿ ಆಯ್ಕೆಯಾದ ಪಾಪಣ್ಣರಿಗೆ ಆಶೀರ್ವದಿಸಿದರು

ಈ ಸಂದರ್ಭದಲ್ಲಿ ಮಾತನಾಡಿದ ಪಾಪನಾಯಕ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು ರಾಜ್ಯ ಮತ್ತು ಕೇಂದ್ರ ಸಚಿವರು ಬಂದು ಇಲ್ಲಿ ಚುನಾವಣೆ ಪ್ರಚಾರ ಮಾಡಿದರು ನಮ್ಮ ಯರ್ರನಹಳ್ಳಿ ಜನ ಕಾಂಗ್ರೆಸ್ ಗೆ ಬೆಂಬಲ ಸೂಚಿಸಿದ್ದಾರೆ.
ಬಿಜೆಪಿ ಆಟ ಇಲ್ಲಿ ನಡೆಯಲ್ಲ ಎಂದರು

ಈ ಸಂದರ್ಭದಲ್ಲಿ ರಾಯಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾರ್ಜುನ, ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಶ್ರೀನಿವಾಸ್, ಗ್ರಾಮ ಪಂಚಾಯತಿ ಸದಸ್ಯರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು

ವರದಿ:-ನಂದೀಶ್ ನಾಯಕ

LEAVE A REPLY

Please enter your comment!
Please enter your name here