ಹೊಸಪೇಟೆ (ವಿಜಯನಗರ)ಜೂ.14 : ಇದೇ ಜೂನ್ 8 ಮತ್ತು 9ರಂದು ಉತ್ತರ ಪ್ರದೇಶದ ಸಹಾರನ್ಪೂರ್ ನಲ್ಲಿ ಪ್ಯಾರಾ ಟೈಕಾಂಡೋ ರಾಷ್ಟ್ರೀಯ ಕ್ರೀಡಾಕೂಟವನ್ನು ಜರುಗಿಸಲಾಯಿತು.
ಈ ಸ್ಪರ್ಧೆಯಲ್ಲಿ ವಿಜಯನಗರ ಜಿಲ್ಲೆಯ ಎಂ ಶಶಾವಲಿ ಮೈಫೂಸ್ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇವರ ಈ ಸಾಧನೆಯು ವಿಜಯನಗರ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದು. ಇದೇ ರೀತಿ ಇವರ ಕ್ರೀಡಾ ಪ್ರಯಾಣ ಮುಂದುವರೆಯಲಿ ಇನ್ನೂ ಉನ್ನತ ಮಟ್ಟದಲ್ಲಿ ಇವರ ಸಾಧನೆಯು ಮಾಡಲಿ ಎಂದು ಗುರುಗಳಾದ ನಾಗರಾಜ ಅವರು ಹಾಗೂ ವಿಜಯನಗರ ಕಾಲೇಜಿನ ವ್ಯವಸ್ಥಾಪಕರು ಹಾಗೂ ಎಂ ಹಾಜಿ ಆಲಿ. ಶಂಶದ್ ಖಾನಂ ಜಿಲ್ಲೆಯ ಕ್ರೀಡಾ ಅಭಿಮಾನಿಗಳು ಮತ್ತು ಕ್ರೀಡಾ ಪೋತ್ಸಾಹಕರು ಶುಭ ಕೋರಿದ್ದಾರೆ.