ಯುವ ಸಮೂಹ ಸೇನೆಗೆ ಸೇರುವಂತೆ ಮೋಹನ್ ಕುಮಾರ್ ಹಮ್ಮಿಕೊಂಡಿರುವ ಜಾಗೃತಿ ಮ್ಯಾರಥಾನ್ ರಾಜ್ಯಕ್ಕೆ ಮಾದರಿ- ಎ.ಎಂ.ಚಂದ್ರಪ್ಪ

0
27

ಬೆಂಗಳೂರು- ಜೂ27, ಆಗಸ್ಟ್ 15 ರಂದು ಕಾಶ್ಮೀರದ ಕಾರ್ಗಿಲ್ ನಲ್ಲಿ ಸಲಾಮ್ ಸೋಲ್ಜರ್ಸ್ ಶೀರ್ಷಿಕೆಯಡಿಯಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರು ಹಮ್ಮಿಕೊಂಡಿರುವ ಜಾಗೃತಿ ಮ್ಯಾರಥಾನ್ ಓಟಕ್ಕೆ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ನ ಮುಖ್ಯಸ್ಥರು ಹಾಗೂ ಮಾರ್ಕೆಟಿಂಗ್ ವಿಭಾಗದ ರಾಜ್ಯ ನಿರ್ದೇಶಕರಾದ ಡಾ.ಎ.ಎಂ. ಚಂದ್ರಪ್ಪನವರು ಶುಭ ಹಾರೈಸಿದರು!

ನಂತರ ಮಾತನಾಡಿದ ನಿರ್ದೇಶಕರಾದ ಡಾ.ಎ.ಎಂ. ಚಂದ್ರಪ್ಪನವರು ಯುವ ಸಮೂಹ ಕನಸು ಗುರಿಗಳನ್ನ ಹೊಂದದೆ ಸಾಮಾಜಿಕ ಜಾಲತಾಣದಲ್ಲಿ ಸಮಯವ್ಯರ್ಥ ಮಾಡುತ್ತಿರುವುದು ಖೇದಕರ, ಭಾರತೀಯ ಸೇನೆ ಸಶಸ್ತ್ರ ಪಡೆಯಂಥ ಹುದ್ದೆಗಳಿಗೆ ಪ್ರಯತ್ನಿಸದೇ ಸ್ಥಳೀಯ ಮಟ್ಟದಲ್ಲಿ ಸಣ್ಣ ಪುಟ್ಟ ಹುದ್ದೆಗಳಲ್ಲಿಯೇ ತೊಡಗುತ್ತಿರುವುದು ತಮ್ಮ ಅವಕಾಶಗಳನ್ನ ತಾವೇ ವಂಚಿಸಿಕೊಳ್ಳುತ್ತಿರುವುದು, ದೇಶ ಸೇವೆಗೆ ಸೇರಲು ಯುವ ಸಮೂಹ ಆಸಕ್ತಿ ತೋರದಿರುವುದನ್ನ ಕಂಡರೆ ಯುವಕರು ಯಾವ ಕಡೆ ಸಾಗುತ್ತಿದ್ದಾರೆ ಎನ್ನುವುದರ ಬಗ್ಗೆ ಬೇಸರ ವ್ಯಕ್ತಪಡಿಸಿ, ಪ್ರತಿಯೊಬ್ಬ ಯುವಕನೂ ಸೇನೆ ಸೇರವುದು ಪ್ರಥಮ ಆದ್ಯತೆಯ ವೃತ್ತಿಯಾಗಬೇಕೆಂದು ಕರೆ ನೀಡಿ ಯುವಕರು ಸೇನೆ ಸೇರುವ ಬಗ್ಗೆ ರಾಷ್ಟ್ರಮಟ್ಟದಲ್ಲಿ ಮೋಹನ್ ಕುಮಾರ್ ದಾನಪ್ಪನವರು ಜಾಗೃತಿ ಮೂಡಿಸುವ ಕಾರ್ಯ ಶ್ಲಾಘನೀಯವೆಂದರು

LEAVE A REPLY

Please enter your comment!
Please enter your name here