The post ಗಣೇಶೋತ್ಸವದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ 200ಸಸಿಗಳ ವಿತರಣೆ appeared first on Hai Sandur kannada fortnightly news paper.
]]>ಪ್ರತಿ ವರ್ಷ ವನಸಿರಿ ಫೌಂಡೇಶನ್ ವತಿಯಿಂದ ಸಸಿಗಳನ್ನು ವಿತರಣೆ ಮಾಡುತ್ತಿರುವ ಕಾರ್ಯಕ್ಕೆ ಮಹಿಳೆಯರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿ, ಸಂತೋಷ ಸಡಗರದಿಂದ ಸಸಿಗಳನ್ನು ನೆಡುವ ಸಂಕಲ್ಪ ಮಾಡಿದರು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಅದ್ಯಕ್ಷರಾದ ಅಮರೇಗೌಡ ಮಲ್ಲಾಪುರ, ಜಿಲ್ಲಾ ಮಹಿಳಾ ಅಧ್ಯಕ್ಷೆ ಸಂಗೀತ ಸಾರಂಗಮಠ,ಗೌರವ ಅಧ್ಯಕ್ಷೆ ರಾಜೇಶ್ವರಿ ತಡಕಲ್, ಎನ್. ಶಿವ ಲಯನ್ಸ್ ಕ್ಲಬ್ ಸಿಂಧನೂರು, ಹಲವಾರು ಮಹಿಳೆಯರು, ಯುವಕರು ಉಪಸ್ಥಿತರಿದ್ದರು.
ವರದಿ:ಅವಿನಾಶ್ ದೇಶಪಾಂಡೆ
The post ಗಣೇಶೋತ್ಸವದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ 200ಸಸಿಗಳ ವಿತರಣೆ appeared first on Hai Sandur kannada fortnightly news paper.
]]>The post ಮಕ್ಕಳಲ್ಲಿ ಪರಿಸರ ಜಾಗೃತಿಗಾಗಿ ಸಸ್ಯ ಶ್ಯಾಮಲ ಕಾರ್ಯಕ್ರಮ: CRP ಷಣ್ಮುಖಗೌಡ appeared first on Hai Sandur kannada fortnightly news paper.
]]>ಇದೇ ವೇಳೆ ಮಾತನಾಡಿ ವಿದ್ಯಾರ್ಥಿಗಳು ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಶ್ರಮದಾನ ವಹಿಸಬೇಕು. ಜೊತೆಗೆ ಶಿಕ್ಷಕರು, ಪೋಷಕರು, ಶಾಲಾ ಮೇಲುಸ್ತುವಾರಿ ಸಮಿತಿ ಸದಸ್ಯರು,ಸಂಘ ಸಂಸ್ಥೆಗಳು ಕೈಜೋಡಿಸಬೇಕು.ಶಾಲಾ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೇಮ,ಪರಿಸರ ಜಾಗೃತಿ ಮತ್ತು ಅರಣ್ಯ ಸಂರಕ್ಷಣೆಯ ಕುರಿತು ಕಾಳಜಿಯನ್ನು ಉಂಟುಮಾಡುವುದು ಸಸ್ಯ ಶ್ಯಾಮಲ ಕಾರ್ಯಕ್ರಮದ ಉದ್ದೇಶವಾಗಿದೆ.ಈಗಾಗಲೇ ವನಸಿರಿ ಫೌಂಡೇಶನ್ ಈ ಕಾರ್ಯವನ್ನು ಮಾಡಲು ಮುಂದಾಗಿದೆ ಪ್ರತಿಯೊಬ್ಬರೂ ವನಸಿರಿ ಫೌಂಡೇಶನ್ ಕಾರ್ಯಕ್ಕೆ ಕೈಜೋಡಿಸಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ಇದೇ ವೇಳೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ವನಸಿರಿ ಫೌಂಡೇಶನ್ ಸಂಸ್ಥಾಪಕ ಅದ್ಯಕ್ಷ ಅಮರೇಗೌಡ ಮಲ್ಲಾಪುರ ಮಾತನಾಡಿ ಮಕ್ಕಳಿಗೆ ಪರಿಸರ ಕಾಳಜಿ ಮೂಡಿಸುವ ಸಲುವಾಗಿ ಸರ್ಕಾರ ಸಸ್ಯ ಶ್ಯಾಮಲ ಕಾರ್ಯಕ್ರಮವನ್ನು ಜಾರಿಗೆ ತಂದಿರುವುದು ತುಂಬಾ ಸಂತೋಷದಾಯಕ.ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಅತೀ ಹೆಚ್ಚಾಗಿ ಭಾಗವಹಿಸಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕು.ಇವತ್ತು ಗಿಡಮರಗಳಿದ್ದರೆ ನಾವು ಉಳಿಯೋದು ಇಲ್ಲವಾದಲ್ಲಿ ನಾವುಗಳೆಲ್ಲರೂ ಮುಂದಿನ ದಿನಗಳಲ್ಲಿ ಶುದ್ಧವಾದ ಗಾಳಿ ಪಡೆಯಲು ತುಂಬಾ ಕಷ್ಟಪಡಬೇಕಾಗುತ್ತದೆ ಈಗಿನಿಂದಲೇ ಪ್ರತಿಯೊಬ್ಬರೂ ಮನೆಯ ಮುಂದೆ ಒಂದೊಂದು ಗಿಡ ನೆಡುವ ಸಂಕಲ್ಪ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಮುಖ್ಯಗುರುಗಳಾದ ಅಮರೇಶ,SDMCಅದ್ಯಕ್ಷರಾದ ದುಗ್ಗಪ್ಪ,ಉಪಾದ್ಯಕ್ಷ ಪಕೀರಸಾಬ್,ಶಾಲೆಯ ಶಿಕ್ಷಕರು,ಅತಿಥಿ ಶಿಕ್ಷಕರು,ಹಳೆಯ ವಿದ್ಯಾರ್ಥಿಗಳಾದ ಕೆ,ವೀರೇಶ ದೇವರಾಜ,ಅಣ್ಣಾಜಿಗೌಡ ಹಾಗೂ ಶಾಲೆಯ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ವರದಿ: ಅವಿನಾಶ್ ದೇಶಪಾಂಡೆ
The post ಮಕ್ಕಳಲ್ಲಿ ಪರಿಸರ ಜಾಗೃತಿಗಾಗಿ ಸಸ್ಯ ಶ್ಯಾಮಲ ಕಾರ್ಯಕ್ರಮ: CRP ಷಣ್ಮುಖಗೌಡ appeared first on Hai Sandur kannada fortnightly news paper.
]]>The post ವಿಜಯ ವಿರಾಟ ಸೌಹಾರ್ದ ಸಹಕಾರಿ ನಿಯಮಿತ 6ನೇ ವಾರ್ಷಿಕ ಸಾಮಾನ್ಯ ಸಭೆ appeared first on Hai Sandur kannada fortnightly news paper.
]]>ವಿಜಯ ವಿರಾಟ ಸಹಕಾರಿ ಸಂಘ 8.31 ಲಕ್ಷ ನಿವ್ವಳ ಲಾಭ ಸದಸ್ಯರ ಪರಿಶ್ರಮದಿಂದ ವಿಜಯ ವಿರಾಟ ಸಹಕಾರಿಗೆ 6 ವರ್ಷಗಳ ಅವಧಿಯಲ್ಲಿ 8.31 ಲಕ್ಷ ರೂಪಾಯಿಗಳು ನಿವ್ವಳ ಲಾಭ ಪಡೆದಿದೆ ಎಂದು ಸಹಕಾರಿ ಸಂಘದ ಅಧ್ಯಕ್ಷತೆಯನ್ನು ವಹಿಸಿದ್ದ ಟಿ.ಅಯ್ಯಪ್ಪ ಹೇಳಿದರು.
ಸಿಂಧನೂರು ಪಟ್ಟಣದ ವಿಜಯ ವಿರಾಟ ಸಹಕಾರಿ ಸಂಘದ ಕಛೇರಿಯ ಸಭಾಂಗಣದಲ್ಲಿ ಬುಧವಾರದಂದು ನಡೆದ 6ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಈ ಸಹಕಾರಿಯೂ ಒಟ್ಟು 1371 ಸದಸ್ಯರನ್ನು ಒಳಗೊಂಡಿದ್ದು, ಹಾಗೂ 18.66 ಲಕ್ಷ ರೂ. ಬಂಡವಾಳ ಹೊಂದಿದ್ದು, 3.17.ಕೋಟಿ ರೂ ಠೇವಣಿಗಳು,3.54 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು
ಹಾಗೂ ಸಾಲ ಮತ್ತು ಮುಂಗಡಗಳು 3.12 ಕೋಟಿ ರೂ ಸೇರಿದಂತೆ 8.31 ಲಕ್ಷ ರೂಪಾಯಿಗಳು ನಿವ್ವಳ ಲಾಭಗಳಿಸಿದ್ದು 98% ಸಾಲ ವಸೂಲತಿ ಮಾಡಿದೆ ಎಂದು ತಿಳಿಸಿದರು.ಸಹಕಾರಿಯ ಉಪಾಧ್ಯಕ್ಷರಾದ ಟಿ. ಅಯ್ಯಪ್ಪ ಇವರ ಅಧ್ಯಕ್ಷತೆ ಯನ್ನು ಮಾತನಾಡಿದರು. 2017 ರಲ್ಲಿ ಪ್ರಾರಂಭಗೊಂಡ ನಮ್ಮ ಸಹಕಾರಿ ಸಂಘವು ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದ ದುರ್ಬಲ ವರ್ಗಗಳಿಗೆ ಮತ್ತು ಸಣ್ಣಪುಟ್ಟ ವ್ಯಾಪಾರಸ್ಥರಿಗೆ ರೈತರಿಗೆ ಸಾಲ ಸೌಲಭ್ಯಗಳನ್ನು ಕಲ್ಪಿಸಿ ಹಾರ್ದಿಕ ಪುನಶ್ಚೇತನ ಆದ್ಯತೆ ನೀಡಲಾಗಿದೆಯಂದರು,ವಿಜಯ ವಿರಾಟ ಸೌಹಾರ್ದ ಸಹಕಾರಿ ಸಂಘ ನಿ.,ಆಡಳಿತ ಸದಸ್ಯರ ಆಶಯದಂತೆ ಸಿಂಧನೂರು ಮತ್ತು ಕಾರಟಗಿ ನಗರದಲ್ಲಿ ಎರಡು ಶಾಖೆಗಳನ್ನಾಗಿ ವಿಸ್ತಾರಿಸಲಾಗಿದೆ.
ಸಹಕಾರಿಯ CEO ಮನೋಜ ಕುಮಾರ ಹಾಗೂ ವೀರೇಂದ್ರ ಬಡಿಗೇರ ವಾರ್ಷಿಕ ವರದಿಯನ್ನು ಮಂಡಿಸಿದರು.
ನಿರ್ದೇಶಕರಾದ ಬಿ.ಅಂಬಣ್ಣ ಗೊರೆಬಾಳ,ವೀರನಗೌಡ ನೆಲಗಲದಿನ್ನಿ,ಶೇಖರಪ್ಪ ತಾಳಿಕೋಟೆ, ಮೌನೇಶ ಲಿಂಗಸೂಗೂರು,ವೀರೇಶ ಗೊರೆಬಾಳ,ವಿನಯಕುಮಾರ ಬಡಿಗೇರ,ಪರಮೇಶಪ್ಪ ವಿ.ಬಿ, ಮೌನೇಶ ತಿಡಿಗೋಳ, ಬಸವರಾಜ ಅಲಬನೂರ, ಕಾನೂನು ಸಲಹೆಗಾರರಾದ ರವಿಕುಮಾರ ವಿ ಹಂಚಿನಾಳ, ವೀರೇಶ ಕೋಟೆ ಆಡಳಿತ ಮಂಡಳಿಯ ಸದಸ್ಯರು ಹಾಗೂ ಇತರರು ಇದ್ದರು.ನೂತನ ನಿರ್ದೇಶಕರನ್ನಾಗಿ ವೀರೇಶ ಕುಮಾರ,ವಿರುಪಣ್ಣ ಹೊಸೂರ,ಶ್ರೀಮತಿ ಸೌಮ್ಯ, ದೇವರಾಜ ಮಡಿವಾಳ ಅವರನ್ನು ಆಯ್ಕೆ ಮಾಡಲಾಯಿತು.
ವರದಿ:ಅವಿನಾಶ್ ದೇಶಪಾಂಡೆ
The post ವಿಜಯ ವಿರಾಟ ಸೌಹಾರ್ದ ಸಹಕಾರಿ ನಿಯಮಿತ 6ನೇ ವಾರ್ಷಿಕ ಸಾಮಾನ್ಯ ಸಭೆ appeared first on Hai Sandur kannada fortnightly news paper.
]]>The post ಸಿಂಧನೂರಿನಲ್ಲಿ ಗಾಯಗೊಂಡ ಕುದುರೆ ಮರಿಗೆ ಮಾನವೀಯತೆ ಮೆರೆದು ಚಿಕಿತ್ಸೆ ಕೊಡಿಸಿದ ವನಸಿರಿ ಫೌಂಡೇಶನ್ appeared first on Hai Sandur kannada fortnightly news paper.
]]>ಈ ಘಟನೆ ಬಗ್ಗೆ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಮಾತನಾಡಿ ವನಸಿರಿ ಫೌಂಡೇಶನ್ ತಂಡ ಪರಿಸರ ಜಾಗೃತಿ ಜೊತೆಗೆ ಪರಿಸರದ ಭಾಗವಾಗಿರುವ ಪ್ರಾಣಿ ಪಕ್ಷಿಗಳನ್ನು ಕಾಪಾಡುವುದು ಕೂಡ ಮುಂದಾಗುತ್ತ ಸಮಾಜಸೇವೆಯಲ್ಲಿ ಸಕ್ರಿಯವಾಗಿದೆ. ಇದರಂತೆ ಈಗಾಗಲೇ ಬಹಳಷ್ಟು ಪ್ರಾಣಿಗಳಿಗೆ ಮಾನವೀಯತೆಯ ದೃಷ್ಟಿಯಿಂದ ಚಿಕಿತ್ಸೆ ನೀಡಲಾಗಿದೆ. ಪ್ರತಿಯೊಬ್ಬರೂ ಮೂಕ ಪ್ರಾಣಗಳ ಮೇಲೆ ದಯವಿರಲಿ.ಮೂಕ ಪ್ರಾಣಿಗಳಿಗೆ ಯಾರೂ ಕೂಡ ಕಲ್ಲಿನಿಂದ ಹೊಡೆಯುವುದು, ವಾಹನಗಳಿಂದ ಹೊಡೆಯುವುದು ಮಾಡಬೇಡಿ,ಮೂಕಪ್ರಾಣಿಗಳನ್ನು ಉಳಿಸೋಣ ಪರಿಸರವನ್ನು ಬೆಳಸೋಣ ಎಂದು ಮನವಿ ಮಾಡಿದರು.ಹಾಗೂ ನಮ್ಮ ಮನವಿಗೆ ತಕ್ಷಣ ಸ್ಪಂದಿಸಿ ಕುದುರೆ ಮರಿಗೆ ಚಿಕಿತ್ಸೆ ನೀಡಿದ ಪಶು ವೈದ್ಯರಿಗೆ ವನಸಿರಿ ಫೌಂಡೇಶನ್ ವತಿಯಿಂದ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಅದ್ಯಕ್ಷ ಅಮರೇಗೌಡ ಮಲ್ಲಾಪುರ, ವನಸಿರಿ ಫೌಂಡೇಶನ್ ಸದಸ್ಯ ಮುದಿಯಪ್ಪ ಹೊಸಳ್ಳಿ ಕ್ಯಾಂಪ್,ಹಾಗೂ ಸ್ಥಳೀಯ ಯುವಕರು ಇದ್ದರು.
ವರದಿ: ಅವಿನಾಶ್ ದೇಶಪಾಂಡೆ
The post ಸಿಂಧನೂರಿನಲ್ಲಿ ಗಾಯಗೊಂಡ ಕುದುರೆ ಮರಿಗೆ ಮಾನವೀಯತೆ ಮೆರೆದು ಚಿಕಿತ್ಸೆ ಕೊಡಿಸಿದ ವನಸಿರಿ ಫೌಂಡೇಶನ್ appeared first on Hai Sandur kannada fortnightly news paper.
]]>The post ಶ್ರೀಮತಿ ವಸಂತಲಕ್ಷೀ ರವರ ಸ್ಮರಣಾರ್ಥವಾಗಿ ಸಸಿಗಳ ನೆಡುವ ಕಾರ್ಯ appeared first on Hai Sandur kannada fortnightly news paper.
]]>ಪರಮಪೂಜ್ಯ ಸದಾನಂದ ಶಿವಶರಣರು ಸಸಿಗೆ ನೀರು ಹಾಕಿ ಚಾಲನೆ ನೀಡಿದರು.ಇದೇ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಶಿವನಗೌಡ ಗೊರೆಬಾಳ ವನಸಿರಿ ಫೌಂಡೇಶನ್ ನಮ್ಮ ಸಿಂಧನೂರು ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ ಹಾಗೂ ರಾಜ್ಯ, ರಾಷ್ಟ ಮಟ್ಟದಲ್ಲಿ ಹೆಸರುವಾಸಿಯಾಗಿರುವುದು ತುಂಬಾ ಸಂತೋಷದ ವಿಷಯ.ಪ್ರತಿಯೊಂದು ದೇವಸ್ಥಾನ, ಶಾಲೆಗಳಲ್ಲಿ ಈ ರೀತಿಯಾಗಿ ಸಸಿನೆಟ್ಟು ಪೋಷಿಸುವ ಜವಾಬ್ದಾರಿಯನ್ನು ನೀಡುತ್ತ ರಾಜ್ಯದಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ ಈ ಕಾರ್ಯ ಹೀಗೆ ಮುಂದುವರೆಯಲಿ ಇವರಿಗೆ ನಮ್ಮ ಸಹಕಾರ ಸದಾಕಾಲ ನೀಡುತ್ತೇವೆ ಎಂದರು.
ಈ ಸಂಧರ್ಭದಲ್ಲಿ ವನಸಿರಿ ಫೌಂಡೇಶನ್ ಗೌರವ ಅದ್ಯಕ್ಷರಾದ ಶಂಕರಗೌಡ ಎಲೆಕೂಡ್ಲಿಗಿ, ಅದ್ಯಕ್ಷರಾದ ಅಮರೇಗೌಡ ಮಲ್ಲಾಪೂರ, ಯುವ ಮುಖಂಡರಾದ ವೀರೇಶ ಸಾನಬಾಳ, ಸಿದ್ದು ಹೂಗಾರ,ಪಿಡಬ್ಲೂಡಿ ಇಂಜಿನಿಯರ್ ಪಾಂಡುರಂಗ, ಹಾಗೂ ವನಸಿರಿ ಫೌಂಡೇಶನ್ ಸದಸ್ಯರಾದ ಶರಣೇಗೌಡ ಹೆಡಗಿನಾಳ,ಚನ್ನಪ್ಪ ಕೆ.ಹೊಸಳ್ಳಿ ,ಚಂದ್ರು ಪವಾಡಶಟ್ಟಿ, ರಾಜು ಮಲ್ಲಾಪೂರ, ಕರ್ನಾಟಕ ಭೂ ಸಂರಕ್ಷಣಾ ಸಿಂಧನೂರು ತಾಲೂಕ ಅದ್ಯಕ್ಷರಾದ ಮುದುಯಪ್ಪ ಹೊಸಳ್ಳಿ ಕ್ಯಾಂಪ್, ರಮೇಶ ಮಲ್ಲಾಪೂರ, ಶಿವರಾಜ ಮಲ್ಲಾಪೂರ,ರಾಜು ಬಳಗಾನೂರ, ವೀರಭದ್ರಸ್ವಾಮಿ ತಿಮ್ಮಾಪೂರ,ವೆಂಕಟರಡ್ಡಿ ಇನ್ನಿತರರು ಉಪಸ್ಥಿತರಿದ್ದರು.
ವರದಿ: ಅವಿನಾಶ್ ದೇಶಪಾಂಡೆ
The post ಶ್ರೀಮತಿ ವಸಂತಲಕ್ಷೀ ರವರ ಸ್ಮರಣಾರ್ಥವಾಗಿ ಸಸಿಗಳ ನೆಡುವ ಕಾರ್ಯ appeared first on Hai Sandur kannada fortnightly news paper.
]]>The post <em>ಸತ್ಯಮಾರುತಿ ದೇವಸ್ಥಾನದಲ್ಲಿ ವಿಜ್ರಂಭಣೆಯಿಂದ ನಡೆದ ಶ್ರೀ ಜಯತೀರ್ಥರ ಮಧ್ಯರಾಧನೆ</em> appeared first on Hai Sandur kannada fortnightly news paper.
]]>ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಹಿರಿಯರಾದ ಶ್ರೀ ರಾಮಕೃಷ್ಣ ಚಾರ್ಯ ಗೋನವಾರ. ಎಂಕೆ ಗೌರಕರ್ ಮನೋಹರ ರಾವ ಕುಲಕರ್ಣಿ ಗುರುರಾಜ ಆಲ್ದಾಳ ಪ್ರಲ್ಹಾದಚಾರ ಪ್ಯಾಟಿ ಪ್ರಲ್ಹಾದ ಗುಡಿ ಮಾರುತಿ ವಿಪ್ರ ಸೇವಾ ಸಮಿತಿ ಅಧ್ಯಕ್ಷರಾದ ಗುರುರಾಜ ಲಕ್ಕಂದಿನ್ನಿ . ವಾದಿರಾಜ ಕಿರಣ ಸರಾಪ ಜಯತೀರ್ಥ ದಾಸ ನೀರಾವರಿ ಇಲಾಖೆಯ ಇಂಜಿನಿಯರ್ ಪ್ರಕಾಶರಾವ ದೇಶಪಾಂಡೆ ನಾರಾಯಣರಾವ ವಸಿಷ್ಠ ಧಾಮದ ಭೀಮಸೇನಚಾರ ನವಲಿ . ಸತ್ಯನಾರಾಯಣ ನವಲಿ ಹಾಗೂ ಜಗನ್ನಾಥ ಭಜನಾ ಮಂಡಳಿಯ ಸದಸ್ಯರು ಮತ್ತು ಅನೇಕ ಭಕ್ತಾದಿಗಳು ಭಾಗವಹಿದ್ದರು.
ವರದಿ: ಅವಿನಾಶ ದೇಶಪಾಂಡೆ
The post <em>ಸತ್ಯಮಾರುತಿ ದೇವಸ್ಥಾನದಲ್ಲಿ ವಿಜ್ರಂಭಣೆಯಿಂದ ನಡೆದ ಶ್ರೀ ಜಯತೀರ್ಥರ ಮಧ್ಯರಾಧನೆ</em> appeared first on Hai Sandur kannada fortnightly news paper.
]]>The post ಜುಲೈ 15 ರಂದು ರಾಜ್ಯ ಮಟ್ಟದ ವಿಶ್ವಕರ್ಮ ಸಮಾವೇಶ: ವೀರಭದ್ರಪ್ಪ ಹಂಚಿನಾಳ appeared first on Hai Sandur kannada fortnightly news paper.
]]>ಕರ್ನಾಟಕದಾದ್ಯಂತ 45ಲಕ್ಷಕ್ಕಿಂತ ಹೆಚ್ಚು ಜನರಿರುವ ವಿಶ್ವಕರ್ಮ ಸಮಾಜ ಅತ್ಯಂತ ಹಿಂದುಳಿದ ಸಮಾಜ ಈ ಸಮಾಜಕ್ಕೆ ರಾಜ್ಯಮಟ್ಟದ ನಾಯಕರಾದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾದ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೆ.ಪಿ.ನಂಜುಂಡಿ ಅವರು ಸುಮಾರು20 ವರ್ಷಗಳಿಂದ ಸತತವಾಗಿ ಹೋರಾಟಮಾಡಿ ವಿಶ್ವಕರ್ಮ ಸಮಾಜಕ್ಕೆ ಸರ್ಕಾರದ ವತಿಯಿಂದ ಆಚರಿಸಲು ವಿಶ್ವಕರ್ಮ ಜಯಂತಿ, ವಿಶ್ವಕರ್ಮ ಅಭಿವೃದ್ಧಿ ನಿಗಮ, ಜಕಣಾಚಾರಿ ಸಂಸ್ಕರಣೆ ದಿನಾಚರಣೆ ಈ ಮೂರು ಕೊಡುಗೆಗಳನ್ನು ನೀಡಿದ್ದಾರೆ.ಅವರು ವಿಶ್ವಕರ್ಮ ಸಮಾಜವನ್ನು ಪ.ಪಂಗಡಕ್ಕೆ ಸೇರಿಸಲು ಮತ್ತು ವಿಶ್ವಕರ್ಮ ಅಭಿವೃದ್ಧಿ ನಿಗಮದ ಸಾಲಮನ್ನಾ ಮಾಡುವಂತೆ,ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಲು,ಬೇಲೂರಿನ ಚನ್ನಕೇಶವ ದೇವಾಲಯದಲ್ಲಿ ಜಕಣಾಚಾರಿ ಮೂರ್ತಿ ಪ್ರತಿಷ್ಠಾಪಿಸುವಂತೆ ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲು ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರ ನೇತೃತ್ವದಲ್ಲಿ ಇದೇ ದಿನಾಂಕ 15ರಂದು ಬೆಂಗಳೂರಿನ ಅರಮನೆಯ ಮೈದಾನದಲ್ಲಿ ವಿಶ್ವಕರ್ಮ ಮುಖಂಡರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ.ಬಿಜೆಪಿ ರಾಜ್ಯದ್ಯಕ್ಷರಾದ ನಳೀನಕುಮಾರ ಕಟೀಲ್ ಅವರು ಹಾಗೂ ವಿವಿಧ ರಾಜ್ಯಗಳ ವಿಶ್ವಕರ್ಮ ಮುಖಂಡರುಗಳು ಭಾಗವಹಿಸಲಿದ್ದಾರೆ.ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ವಿಶ್ವಕರ್ಮ ಮುಖಂಡರುಗಳು ಭಾಗವಹಿಸಲಿದ್ದು,ಸಿಂಧನೂರು ತಾಲೂಕಿನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವರದಿ:ಅವಿನಾಶ್ ದೇಶಪಾಂಡೆ
The post ಜುಲೈ 15 ರಂದು ರಾಜ್ಯ ಮಟ್ಟದ ವಿಶ್ವಕರ್ಮ ಸಮಾವೇಶ: ವೀರಭದ್ರಪ್ಪ ಹಂಚಿನಾಳ appeared first on Hai Sandur kannada fortnightly news paper.
]]>The post <em>ಮಲ್ಲಾಪುರ ಸರಕಾರಿ ಶಾಲೆಗೆ ಹೊಸ ಕಳೆ ತಂದ ಸಂಡೇ ಫಾರ್ ಸೋಶಿಯಲ್ ವರ್ಕ್ ತಂಡ</em> appeared first on Hai Sandur kannada fortnightly news paper.
]]>ಈ ಸಂದರ್ಭದಲ್ಲಿ, LBK ಕಾಲೇಜಿನ ಪ್ರಚಾರ್ಯರಾದ ಶ್ರೀ ಪರುಶುರಾಮ ಅವರು ಮಾತನಾಡಿ ವನಸಿರಿ ಫೌಂಡೇಶನ್ ಅಮರೇಗೌಡ ಮಲ್ಲಾಪೂರ ಅವರ ತಂಡ ಇಡೀ ರಾಜ್ಯದೆಲ್ಲಡೆ ಸಸಿಗಳನ್ನು ನೆಟ್ಟು ಪೋಷಿಸುವ ಜೊತೆಗೆ ಜನರಲ್ಲಿ ಪರಿಸರ ಜಾಗೃತಿ ಊಡಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವುದು ತುಂಬಾ ಶ್ಲಾಘನೀಯ, ಜೊತೆಗೆ ಇಂದು ಈ ಸಂಡೇ ಪಾರ್ ಸೋಷಿಯಲ್ ವರ್ಕನ ಪ್ರತಿ ರವಿವಾರ ಅಭಿನಂದನ ಶಿಕ್ಷಣ ಸಂಸ್ಥೆ ಮಸ್ಕಿ ಹಾಗೂ ವನಸಿರಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡು ನಮ್ಮ ನಡೆ ಸ್ವಚ್ಛತೆ ಕಡೆ ಎಂಬ ಗುರಿಯನ್ನಿಟ್ಟು ಗ್ರಾಮದ ಸರಕಾರಿ ಶಾಲೆಗಳ ಸ್ವಚ್ಛತೆಗೆ ಹೆಚ್ಚಿನ ಆಸಕ್ತಿವಹಿಸಿ ಮಕ್ಕಳಿಗೆ ಸ್ವಚ್ಛವಾದ ವಾತಾವರಣ ಮತ್ತು ಶುದ್ಧವಾದ ಗಾಳಿಯನ್ನು ಸೇವಿಸಿ ಶಿಕ್ಷಣದ ಕಡೆ ಹೆಚ್ಚಿನ ಆಸಕ್ತಿವಹಿಸಲಿ ಎಂದು ಮತ್ತು ಮಕ್ಕಳು ಆರೋಗ್ಯದಂದಿರಲು ಇಂತಹ ಕಾರ್ಯಗಳನ್ನು ಹಮ್ಮಿಕೊಂಡಿರುವುದು ತುಂಬಾ ಶ್ಲಾಘನೀಯ, ಜೊತೆಗೆ ಹಲವಾರು ಸಂಘಸಂಸ್ಥೆಗಳು ಭಾಗವಹಿಸಿ ಸರಕಾರಿ ಶಾಲೆಗಳನ್ನ ಅಂದ ಚೆಂದವಾಗಿ ಕಾಣುವಂತೆ ಮಾಡುತ್ತಿರುವುದು ತುಂಬಾ ಸಂತೋಷ ಈ ಕಾರ್ಯದಲ್ಲಿ ಭಾಗಯಾದ ಎಲ್ಲಾ ಸಂಸ್ಥೆಗಳಿಗೂ ದನ್ಯವಾದಗಳು ಎಂದರು.
ನಂತರ ಮಾತನಾಡಿದ ಅಭಿನಂದನ ಶಿಕ್ಷಣ ಸಂಸ್ಥೆಯ ರುವಾರಿಗಳಾದ ಶಿವಪ್ರಸಾದ ಮಾತನಾಡಿ ಸರಕಾರಿ ಶಾಲೆಗಳಲ್ಲಿ ವನಸಿರಿ ಫೌಂಡೇಶನ್ ಸಸಿಗಳನ್ನು ಬೆಳಸಿ ಪೋಷಿಸುತ್ತಿರುವು ಸಂತೋಷದ ಸಂಗತಿ ಇದರ ಜೊತೆ ನಮ್ಮ 50ನೇ ಆವೃತ್ತಿಯ ಸೇವಾ ಕಾರ್ಯದಲ್ಲಿ ಭಾಗವಿಸಿದ ವನಸಿರಿ ಫೌಂಡೇಶನ್ ಅದ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರ ತಂಡ ಹಾಗೂ ಸ್ನೇಹಸಿರಿ ಟ್ರಸ್ಟ ಇನ್ನೂ ಹಲವಾರು ಸಂಸ್ಥೆಗಳು ಈ ಕಾರ್ಯದಲ್ಲಿ ಭಾಗವಹಿಸಿದ್ದು ತುಂಬಾ ಸಂತೋಷ ಈ ಕಾರ್ಯದಲ್ಲಿ ಭಾಗವಹಿಸಿದ ಎಲ್ಲ ಸಂಘಸಂಸ್ಥೆಗಳಿಗೆ ದನ್ಯವಾದಗಳು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ RL ರಮೇಶ ಬಾಬು ತುಮಕೂರು, ವೀರೇಶ ಸಾನಬಾಳ ಸಿಂಧನೂರು ಹಾಗೂ ಸಂಗಡಿಗರು ವನಸಿರಿ ಫೌಂಡೇಶನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ ರಾಜ್ಯದೆಲ್ಲಡೆ ಇನ್ನೂ ಹೆಚ್ಚಿನ ಸಸಿಗಳನ್ನು ನೆಟ್ಟು ಪೋಷಿಸಲಿ ಎಂದು ತಗ್ಗು ತೋಡುವ ಮಷೀನ್ ನನ್ನು ವನಸಿರಿ ಫೌಂಡೇಶನ್ ಗೆ ಕೊಡುಗೆ ನೀಡಿದರು.
ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪೂರ,ಶಾಲೆಯ SDMCಅದ್ಯಕ್ಷರಾದ ಶ್ರೀ ದುಗ್ಗಪ್ಪ, ಜೀವ ಸ್ಪಂದನ ಚಾರಿಟಬಲ್ ಟ್ರಸ್ಟ್ ಅದ್ಯಕ್ಷರಾದ ಶ್ರೀ ಡಾ. ನವೀನ, ಸಹ ಕಾರ್ಯದರ್ಶಿಯಾದ ಚನ್ನವೀರನಗೌಡ,ಅಭಿನಂದನ್ ಸಂಸ್ಥೆಯ ಗೌರವಾಧ್ಯಕ್ಷರಾದ ಶಿವಪ್ರಸಾದ್ ಕ್ಯಾತ್ನಟ್ಟಿ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ, ಸದಸ್ಯರಾದ ಯಲ್ಲಪ್ಪ ಮಾಸ್ಟರ್, ಆಶಾ ಕ್ಯಾತ್ನಟ್ಟಿ, ಶೃತಿ ಹಂಪರಗುಂದಿ, ಮಲ್ಲಿಕಾರ್ಜುನ ಬಡಿಗೇರ, ಅಮಿತಕುಮಾರ್ ಪುಟ್ಟಿ, ಬಸವರಾಜ ಬನ್ನಿಗಿಡ, ವೀರೇಶ ಸಾನಬಾಳ,ವನಸಿರಿ ತಂಡದ ಸದಸ್ಯರಾದ ಶರಣೇಗೌಡ ಹಡಗಿನಾಳ, ರಮೇಶ ಕುನ್ನಟಗಿ,ಚನಪ್ಪ ಕೆ.ಹೊಸಹಳ್ಳಿ,ಸಂಗೀತಾ ಸಾರಂಗ ಮಠ,ದ್ರಾಕ್ಷಾಯಣಿ ಗೋಮರ್ಶಿ, ವಿಜಯಲಕ್ಷ್ಮಿ, ಸಿಂದನೂರು ಭೂ ಸಂರಕ್ಷಣಾ ವೇದಿಕೆ ಅದ್ಯಕ್ಷ ಮುದಿಯಪ್ಪ ಹೊಸಳ್ಳಿ ಕ್ಯಾಂಪ್, ಕಲ್ಮಂಗಿ ಸ್ನೇಹಸಿರಿ ಟ್ರಸ್ಟ್ ಅದ್ಯಕ್ಷರಾದ ಶ್ರೀ ವಿಶ್ವನಾಥ ರಡ್ಡಿ ಕುಲಕರ್ಣಿ,ಕಾರ್ಯದರ್ಶಿ ಗಿರಿರಾಜ ಕುಲಕರ್ಣಿ,ಅಯ್ಯನಗೌಡ ಹೊಸಮನಿ,ಮಲ್ಲಿಕಾರ್ಜುನ ಹೊಸಗೌಡ್ರ, ರಮೇಶ ಉಳ್ಳಿ,ಶ್ರೀ ಬಸವರಾಜ ನಿಟ್ಟೂರು, ಶ್ರೀ ಪರಶುರಾಮ, ಶ್ರೀ ಯಮನಪ್ಪ, ಶ್ರೀ ಮಹಂಕಾಳೆಪ್ಪ,ಗ್ರಾಮ ಪಂಚಾಯತಿ ಸದಸ್ಯರುಗಳು, ಹಾಗೂ ವಿನಾಯಕ ಗೆಳೆಯರ ಬಳಗ, ಹಳೆಯ ವಿದ್ಯಾರ್ಥಿಗಳ ಬಳಗ ಹಾಗೂ ಮಲ್ಲಾಪೂರ ಗ್ರಾಮದ ಯುವಕರು ಉಪಸ್ಥಿತರಿದ್ದರು.
ವರದಿ: ಅವಿನಾಶ ದೇಶಪಾಂಡೆ
The post <em>ಮಲ್ಲಾಪುರ ಸರಕಾರಿ ಶಾಲೆಗೆ ಹೊಸ ಕಳೆ ತಂದ ಸಂಡೇ ಫಾರ್ ಸೋಶಿಯಲ್ ವರ್ಕ್ ತಂಡ</em> appeared first on Hai Sandur kannada fortnightly news paper.
]]>The post ಸತ್ಯ ಮಾರುತಿ ದೇವಸ್ಥಾನದಲ್ಲಿ ಆಷಾಡ ಏಕಾದಶಿ ಆಚರಣೆ appeared first on Hai Sandur kannada fortnightly news paper.
]]>ಈ ಕಾರ್ಯಕ್ರಮ ದಲ್ಲಿ ಅರ್ಚಕ ಹಾಗೂ ಉತ್ತರಾದಿ ಮಠಾದಿಕಾರಿಯಾದ ಶ್ರೀ ವೆಂಕಟಗಿರಿಯಾಚಾರ್ಯರು ಮಾರುತಿ ವಿಪ್ರ ಸೇವಾ ಸಮಿತಿಯ ಅಧ್ಯಕ್ಷರಾದ ಗುರುರಾಜ ಲಕ್ಕಂದನ್ನಿ. ಉಪಾಧ್ಯಕ್ಷ ರಾದ ವಾದಿರಾಜ ಕುಲಕರ್ಣಿ ಕಾರ್ಯದರ್ಶಿ ಅನಿಲಕುಮಾರ ಹಾಗೂ ಶ್ರೀನಿವಾಸ ಬಂಡಿ . ಪ್ರಲ್ಹಾದಾಚಾರ ಪ್ಯಾಟಿ. ನಾರಾಯಣಾಚಾರ್ಯ ಕನಸಾವಿ . ಕೃಷ್ಣಮೂರ್ತಿ ಪುರೋಹಿತ .ವಿಪ್ರ ನೌಕರರ ಸಂಫದ ಅಧ್ಯಕ್ಷ ರಾದ ಶಂಕರ ರಾವ .ವಸಿಷ್ಠ ಧಾಮದ ಸತೀಶ್ ನವಲಿ .ಜಯತೀರ್ಥ ದಾಸ ಹಾಗೂ ಜಗನ್ನಾಥ ಭಜನಾ ಮಂಡಳಿಯ ಎಲ್ಲಾ ಸದಸ್ಯರು ಭಾಗವಹಿಸಿ ಕಾರ್ಯಕ್ರಮ ವನ್ನು ಯಶಸ್ವಿಗೂಳಿಸಿದರು.
ವರದಿ:ಅವಿನಾಶ ದೇಶಪಾಂಡೆ
The post ಸತ್ಯ ಮಾರುತಿ ದೇವಸ್ಥಾನದಲ್ಲಿ ಆಷಾಡ ಏಕಾದಶಿ ಆಚರಣೆ appeared first on Hai Sandur kannada fortnightly news paper.
]]>The post ದೇವರು ವಿಪ್ರರಿಗೆ ಜ್ಞಾನರೂಪದಲ್ಲಿ ಮೀಸಲಾತಿ ಕೊಟ್ಟಿದ್ದಾನೆ;ವಿದ್ವಾನ್ ಬೇವಿನಾಳ ಪ್ರಲ್ಹಾದಾಚಾರ್ಯ appeared first on Hai Sandur kannada fortnightly news paper.
]]>ಅವರು ಸಿಂಧನೂರ ನಗರದ ಪಿ.ಡಬ್ಲು.ಡಿ ಕ್ಯಾಂಪಿನ ಶ್ರೀ ಸತ್ಯಮಾರುತಿ ದೇವಸ್ಥಾನದಲ್ಲಿ ಉತ್ತರಾಧಿಮಠದ ಶ್ರೀ ಸತ್ಯಾಭಿನವ ತೀರ್ಥರಿಂದ ಮೋಕ್ಷಾರ್ಥವಾಗಿ ಸನ್ಯಾಸ ಸ್ವೀಕರಿಸಿದ ಶ್ರೀ ಸತ್ಯಾಭಿರಾಜತೀರ್ಥರ ಆರಾಧನಾ ಪ್ರಯುಕ್ತ ತಮ್ಮ ಪ್ರವಚನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಸ್ವಾರ್ಥದ ಸಮಾಜದಲ್ಲಿ ನಿಸ್ವಾರ್ಥವಾಗಿ ಜನಸೇವೆ ಮಾಡುವವರು ವಿಪ್ರರಾಗಿದ್ದಾರೆ. ಅವರಿಗೆ ಜ್ಞಾನದಲ್ಲಿಯೇ ವಿಶೇಷವಾಗಿ ದೇವರ ಮೀಸಲಾತಿಯನ್ನು ಕೊಟ್ಟುಕಳಿಸಿದ್ದಾನೆ. ವಿಪ್ರರಿಗೆ ಜ್ಞಾನವೇ ಪ್ರಮುಖಸಾಧನವಾಗಿದೆ ಎಂದರು.
ನಂತರ ಶ್ರೀರಾಮಕೃಷ್ಣಾಚಾರ್ಯ ಗೋನವಾರ ಮಾತನಾಡಿ ಗುರುಗಳ ಮಹಿಮೆಗಳು ತಿಳಿಯಬೇಕಾದರೆ ಗುರುವಿನ ಗುಲಾಮನಾಗಬೇಕು ಅಂದಾಗ ಜೀವನದಲ್ಲಿ ನಿಜವಾದ ಜ್ಞಾನದ ಅರಿವಾಗುತ್ತದೆ ಎಂದರು. ಸತ್ಯಭಿರಾಜತೀರ್ಥರ ಸ್ತೋತ್ರ ನಿತ್ಯಪರಾಯಣ ಕೃತಿಯನ್ನು ಬಿಡುಗಡೆಗೊಳಿಸಲಾಯಿತು
ಬೆಳಿಗ್ಗೆ ಸುಪ್ರಭಾತ ದೇವರನಾಮಗಳು, ಅಷ್ಟೋತ್ತರ, ಪಂಚಾಮೃತ ಸೇವೆ ವಿಶೇಷ ಪುಷ್ಪಾಲಂಕಾರ ನೈವೇದ್ಯ ಹಸ್ತೋದಕ ಮಹಾಮಂಗಳರಾತಿ ಅರ್ಚಕರು ಮಠಾಧಿಕಾರಿಗಳಾದ ವೆಂಕಟಗಿರಿಯಾಚಾರ್ಯ ನೇತೃತ್ವದಲ್ಲಿ ಜರುಗಿದವು. ಹನುಮಂತರಾವ್ ನಿಡಶೇಷಿ ಕುಟುಂಬದವರು ಅನ್ನಸಂತರ್ಪಣೆ ಕಾರ್ಯಕ್ರಮ ನಡೆಸಿದರು.
ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಮುಖಂಡರಾದ ಎಂ,ಕೆ,ಗೌರಕರ್, ಸಮಿತಿಯ ಅಧ್ಯಕ್ಷರಾದ ಗುರುರಾಜ ಲಕ್ಕಂದಿನ್ನಿ, ವಸಿಷ್ಠಧಾಮ ಸಂಚಾಲಕ ಭೀಮಸೇನಾಚಾರ್ಯ ನವಲಿ, ದೇಸಾಯಿ ಕ್ಯಾಂಪನ ಅರ್ಚಕರಾದ ನಾರಾಯಣಾಚಾರ್ಯ ಇವರಿಗೆ ಶಾಲುಹೊದಿಸಿ ಸನ್ಮಾನಿಸಲಾಯಿತು.
ಗುರುರಾಜರಾವ್ ಆಲ್ದಾಳ್, ಅನೀಲಕುಮಾರ ಮಾಡಶಿರವಾರ, ಗೋಪಾಲಾಚಾರ್ಯ ವಕೀಲರು, ಪರಿಮಳಾಚಾರ್ಯ ಶಿಕ್ಷಕರು, ಕೃಷ್ಣಮೂರ್ತಿ ಪುರೋಹಿತ್, ನಾರಾಯಣಾಚಾರ್ಯ ಕನಸಾವಿ ಹಾಗೂ ಮಹಿಳಾ ಭಜನಾಮಂಡಳಿಯ ಸರ್ವಸದಸ್ಯರು ಉಪಸ್ಥಿತರಿದ್ದರು.
ವರದಿ: ಅವಿನಾಶ ದೇಶಪಾಂಡೆ
The post ದೇವರು ವಿಪ್ರರಿಗೆ ಜ್ಞಾನರೂಪದಲ್ಲಿ ಮೀಸಲಾತಿ ಕೊಟ್ಟಿದ್ದಾನೆ;ವಿದ್ವಾನ್ ಬೇವಿನಾಳ ಪ್ರಲ್ಹಾದಾಚಾರ್ಯ appeared first on Hai Sandur kannada fortnightly news paper.
]]>